ರೇವಣ್ಣ ವಿರುದ್ಧ ಏಕವಚನದಲ್ಲಿ ಚಲುವರಾಯಸ್ವಾಮಿ ನೇರ ವಾಗ್ದಾಳಿ

ಮಂಡ್ಯ: ಹೆಚ್.ಡಿ.ರೇವಣ್ಣ ಒಬ್ಬ ರಾಜಕಾರಣಿನಾ, ಅವನಿಗೆ ಸಂಸ್ಕೃತಿ ಇದ್ಯಾ? ಮಾಜಿ ಪ್ರಧಾನಿ ಮಗ ಹೇಗೆ ನಡೆದುಕೊಳ್ಳಬೇಕು ಅಂತಾ ಅವನಿಗೆ ಗೊತ್ತಿಲ್ವಾ? ಎಂದು ಕೆ.ಆರ್‌.ಪೇಟೆಯಲ್ಲಿ ರೇವಣ್ಣ ವಿರುದ್ಧ ಎನ್​. ಚಲುವರಾಯಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಾತು ಎತ್ತಿದ್ರೆ ಪಿಡಬ್ಲ್ಯೂಡಿ ಅಂತಾನೆ. ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಹೇಳಿ. ಕೆ.ಆರ್‌.ಪೇಟೆಗೂ ಇವನಿಗೂ ಏನ್ ಸಂಬಂಧ. ಇವನು ಯಾರು ರೀ? ಮಾತು ಎತ್ತಿದ್ರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ, ಕುಮಾರಸ್ವಾಮಿ ಅಣ್ಣ ಇಷ್ಟೇ ಅವನ ಐಡೆಂಟಿಟಿ. ಅದನ್ನು […]

ರೇವಣ್ಣ ವಿರುದ್ಧ ಏಕವಚನದಲ್ಲಿ ಚಲುವರಾಯಸ್ವಾಮಿ ನೇರ ವಾಗ್ದಾಳಿ
ಸಾಧು ಶ್ರೀನಾಥ್​

Updated on: Dec 02, 2019 | 2:39 PM

ಮಂಡ್ಯ: ಹೆಚ್.ಡಿ.ರೇವಣ್ಣ ಒಬ್ಬ ರಾಜಕಾರಣಿನಾ, ಅವನಿಗೆ ಸಂಸ್ಕೃತಿ ಇದ್ಯಾ? ಮಾಜಿ ಪ್ರಧಾನಿ ಮಗ ಹೇಗೆ ನಡೆದುಕೊಳ್ಳಬೇಕು ಅಂತಾ ಅವನಿಗೆ ಗೊತ್ತಿಲ್ವಾ? ಎಂದು ಕೆ.ಆರ್‌.ಪೇಟೆಯಲ್ಲಿ ರೇವಣ್ಣ ವಿರುದ್ಧ ಎನ್​. ಚಲುವರಾಯಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾತು ಎತ್ತಿದ್ರೆ ಪಿಡಬ್ಲ್ಯೂಡಿ ಅಂತಾನೆ. ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಹೇಳಿ. ಕೆ.ಆರ್‌.ಪೇಟೆಗೂ ಇವನಿಗೂ ಏನ್ ಸಂಬಂಧ. ಇವನು ಯಾರು ರೀ? ಮಾತು ಎತ್ತಿದ್ರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ, ಕುಮಾರಸ್ವಾಮಿ ಅಣ್ಣ ಇಷ್ಟೇ ಅವನ ಐಡೆಂಟಿಟಿ. ಅದನ್ನು ಬಿಟ್ರೆ ಲೋಕೋಪಯೋಗಿನೇ ಬೇಕು ಅಂತಾನೇ ಎಂದು ಕಿಡಿಕಾರಿದ್ದಾರೆ.

ಹಿಂಬಾಗಿಲಿನಿಂದ ಮಂತ್ರಿ ಆದ:
ಕುಮಾರಸ್ವಾಮಿ 20 ತಿಂಗಳು ಸಿಎಂ ಆದಾಗ ರೇವಣ್ಣ ವೋಟ್ ಹಾಕಲು ಬರಲಿಲ್ಲ. ಹಿಂಬಾಗಿಲಿನಿಂದ ಬಂದು ಮಂತ್ರಿ ಆದ. ನಮ್ಮ ನಾಯಕರ ಮಗ, ನನ್ನ ಸ್ನೇಹಿತನ ಸಹೋದರ ಎಂದು ನಾನೂ ಗೌರವ ಕೊಡುತ್ತಿದ್ದೆ. ಆದ್ರೆ, ಅವನು ರಾಜಕಾರಣಿ ಅಲ್ಲ, ನಾಯಕನೂ ಅಲ್ಲ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us