ಎಡನೀರು ಮಠದ ನೂತನ ಮಠಾಧೀಶರಾಗಿ ಸಚ್ಚಿದಾನಂದಶ್ರೀ ಪೀಠಾರೋಹಣ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಮಠದ ನೂತನ ಮಠಾಧೀಶರಾಗಿ ಶ್ರೀಸಚ್ಚಿದಾನಂದ ಭಾರತಿಶ್ರೀ ಪೀಠಾರೋಹಣ ಮಾಡಿದರು. ಸೆಪ್ಟೆಂಬರ್  6 ರಂದು ಶ್ರೀಕೇಶವಾನಂದ ಭಾರತಿಶ್ರೀ ಬೃಂದಾವನಸ್ಥರಾಗಿದ್ದರು. ಮಠದ ಉತ್ತರಾಧಿಕಾರಿಯಾಗಿ ಸಚ್ಚಿದಾನಂದಶ್ರೀ ನೇಮಕವಾಗಿದ್ದರು. ಸಚ್ಚಿದಾನಂದಶ್ರೀ ಸೋಮವಾರ ಕಾಂಚಿ ಪೀಠದಲ್ಲಿ ದೀಕ್ಷೆ ಪಡೆದಿದ್ದರು. ಕಾಂಚಿ ಜಗದ್ಗುರು ಭಾರತಿ ವಿಜಯೇಂದ್ರ ಸರಸ್ವತಿಗಳಿಂದ ಸಚ್ಚಿದಾನಂದಶ್ರೀ ದೀಕ್ಷೆ ಪಡೆದಿದ್ದರು. ನಿನ್ನೆ ಕಾಸರಗೋಡಿನ ಎಡಮಂಗಲ ಪುರಪ್ರವೇಶಿಸಿದ್ದ ನೂತನ ಶ್ರೀಗಳಾದ ಸಚ್ಚಿದಾನಂದಶ್ರೀ ಇಂದು ಮಠದಲ್ಲಿ ವಿಧಿವಿಧಾನಗಳಂತೆ ಪೀಠಾರೋಹಣ ಮಾಡಿದರು. ಕೇರಳ ಸಂಸದ ರಾಜಮೋಹನ ಉಣ್ಣಿತ್ತಾನ್​, ವೈದಿಕರು ಭಾಗಿಯಾಗಿದ್ದರು. ನೂತನ […]

ಎಡನೀರು ಮಠದ ನೂತನ ಮಠಾಧೀಶರಾಗಿ ಸಚ್ಚಿದಾನಂದಶ್ರೀ ಪೀಠಾರೋಹಣ
ಸಾಧು ಶ್ರೀನಾಥ್​

Updated on: Oct 28, 2020 | 4:34 PM

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಮಠದ ನೂತನ ಮಠಾಧೀಶರಾಗಿ ಶ್ರೀಸಚ್ಚಿದಾನಂದ ಭಾರತಿಶ್ರೀ ಪೀಠಾರೋಹಣ ಮಾಡಿದರು.

ಸೆಪ್ಟೆಂಬರ್  6 ರಂದು ಶ್ರೀಕೇಶವಾನಂದ ಭಾರತಿಶ್ರೀ ಬೃಂದಾವನಸ್ಥರಾಗಿದ್ದರು. ಮಠದ ಉತ್ತರಾಧಿಕಾರಿಯಾಗಿ ಸಚ್ಚಿದಾನಂದಶ್ರೀ ನೇಮಕವಾಗಿದ್ದರು. ಸಚ್ಚಿದಾನಂದಶ್ರೀ ಸೋಮವಾರ ಕಾಂಚಿ ಪೀಠದಲ್ಲಿ ದೀಕ್ಷೆ ಪಡೆದಿದ್ದರು. ಕಾಂಚಿ ಜಗದ್ಗುರು ಭಾರತಿ ವಿಜಯೇಂದ್ರ ಸರಸ್ವತಿಗಳಿಂದ ಸಚ್ಚಿದಾನಂದಶ್ರೀ ದೀಕ್ಷೆ ಪಡೆದಿದ್ದರು.

ನಿನ್ನೆ ಕಾಸರಗೋಡಿನ ಎಡಮಂಗಲ ಪುರಪ್ರವೇಶಿಸಿದ್ದ ನೂತನ ಶ್ರೀಗಳಾದ ಸಚ್ಚಿದಾನಂದಶ್ರೀ ಇಂದು ಮಠದಲ್ಲಿ ವಿಧಿವಿಧಾನಗಳಂತೆ ಪೀಠಾರೋಹಣ ಮಾಡಿದರು. ಕೇರಳ ಸಂಸದ ರಾಜಮೋಹನ ಉಣ್ಣಿತ್ತಾನ್​, ವೈದಿಕರು ಭಾಗಿಯಾಗಿದ್ದರು.

ನೂತನ ಶ್ರೀಗಳಿಗೆ ಮುಜರಾಯಿ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಗೌರವ ಅರ್ಪಣೆ ಮಾಡಿದರು. ಎಡನೀರು ಮಠಕ್ಕೆ ಭೇಟಿ ನೀಡಿ ಸಚಿವ ಶ್ರೀನಿವಾಸ ಪೂಜಾರಿ ಅಶೀರ್ವಾದ ಪಡೆದರು.


 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us