AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಬೀಸಿ ಕರೆಯುತಿದೆ ಸೀಗೆಗುಡ್ಡ, ಆದ್ರೆ ಸುಂದರ ತಾಣದಲ್ಲಿ ರಸ್ತೆಯೇ ಇಲ್ಲ!

ಹಾಸನ: ಅದು ಸುಂದರ ಪ್ರವಾಸಿ ತಾಣ, ಬಯಲು ಸೀಮೆಯಲ್ಲಿದ್ರೂ ಮಲೆನಾಡಿನ ಅಂದವನ್ನೂ ನಾಚಿಸೋ ಇಲ್ಲಿನ ಸೊಬಗು, ನಿಸರ್ಗ ಸಿರಿಗೆ ಮನಸೋಲದವರೂ ಇಲ್ಲಾ… ಆದ್ರೆ, ಈ ಪ್ರಕೃತಿ ಸೊಬಗಿನ ತಾಣಕ್ಕೆ ಹೋಗಲು ಹಲವು ತೊಡಕುಗಳು ಎದುರಾಗಿರೋದು ಪ್ರವಾಸಿಗರನ್ನ ಹೈರಾಣಾಗಿಸಿದೆ.. ಕಣ್ಣು ಹಾಯಿಸಿದಷ್ಟೂ ದೂರ ಹಚ್ಚ ಹಸಿರು.. ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟಗಳ ಸಾಲು.. ಬೆಟ್ಟದ ಮೇಲಿಂದ ಕೆಳಗೆ ಕಾಣೋ ಕೆರೆ ಕಟ್ಟೆ.. ಹೊಲ ಗದ್ದೆಗಳ ಮನೋಹರ ದೃಶ್ಯ.. ಹೌದು, ನೋಡಿದ ಕೂಡಲೇ ಥಟ್ಟನೆ ಹೇಳಬಹುದು ಇದು ಪ್ರಕೃತಿ ಸೊಬಗಿನ […]

ಕೈ ಬೀಸಿ ಕರೆಯುತಿದೆ ಸೀಗೆಗುಡ್ಡ, ಆದ್ರೆ ಸುಂದರ ತಾಣದಲ್ಲಿ ರಸ್ತೆಯೇ ಇಲ್ಲ!
ಸಾಧು ಶ್ರೀನಾಥ್​
|

Updated on:Dec 23, 2019 | 10:37 AM

Share

ಹಾಸನ: ಅದು ಸುಂದರ ಪ್ರವಾಸಿ ತಾಣ, ಬಯಲು ಸೀಮೆಯಲ್ಲಿದ್ರೂ ಮಲೆನಾಡಿನ ಅಂದವನ್ನೂ ನಾಚಿಸೋ ಇಲ್ಲಿನ ಸೊಬಗು, ನಿಸರ್ಗ ಸಿರಿಗೆ ಮನಸೋಲದವರೂ ಇಲ್ಲಾ… ಆದ್ರೆ, ಈ ಪ್ರಕೃತಿ ಸೊಬಗಿನ ತಾಣಕ್ಕೆ ಹೋಗಲು ಹಲವು ತೊಡಕುಗಳು ಎದುರಾಗಿರೋದು ಪ್ರವಾಸಿಗರನ್ನ ಹೈರಾಣಾಗಿಸಿದೆ..

ಕಣ್ಣು ಹಾಯಿಸಿದಷ್ಟೂ ದೂರ ಹಚ್ಚ ಹಸಿರು.. ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟಗಳ ಸಾಲು.. ಬೆಟ್ಟದ ಮೇಲಿಂದ ಕೆಳಗೆ ಕಾಣೋ ಕೆರೆ ಕಟ್ಟೆ.. ಹೊಲ ಗದ್ದೆಗಳ ಮನೋಹರ ದೃಶ್ಯ.. ಹೌದು, ನೋಡಿದ ಕೂಡಲೇ ಥಟ್ಟನೆ ಹೇಳಬಹುದು ಇದು ಪ್ರಕೃತಿ ಸೊಬಗಿನ ತಾಣಾ ಅಂತಾ… ಹೌದು, ನಿಸರ್ಗ ಸಿರಿಯ ನಾಡು ಇರೋದು ಹಾಸನದ ಹಳೆಬೀಡು ರಸ್ತೆಯ ಸೀಗೆ ಗ್ರಾಮದಲ್ಲಿ ಸೀಗೆ ಗುಡ್ಡ..

ಮಲೆನಾಡಿನ ಅಂದವನ್ನೂ ನಾಚಿಸೋ ಈ ಪ್ರವಾಸಿ ತಾಣಕ್ಕೆ ನಿತ್ಯವೂ ನೂರಾರು ಪ್ರವಾಸಿಗರು ಲಗ್ಗೆ ಹಿಡ್ತಾರೆ. ಚಾರಣಕ್ಕೆ ಹೇಳಿ ಮಾಡಿಸಿದಂತಿರೋ ಈ ಹಸಿರು ಕಾನನದ ನಡುವಿನ ಮುಗಿಲು ಚುಂಬಿಸೋ ಬೆಟ್ಟಗಳ ಸಾಲಿನ ಅಂದ ಸವಿಯೋಕೆ ಬಂದ್ರೆ ವಾಪಸ್ ಹೋಗೋಕೇ ಮನಸ್ಸೇ ಬರಲ್ಲಾ. ನೋಡಿದಷ್ಟೂ ನೋಡಬೇಕೆನಿಸೋ ಇಲ್ಲಿಗೆ ಬರೋಕೆ ರಸ್ತೆಯಿಲ್ಲ ಅನ್ನೋದೇ ಜನರ ಕೊರಗು.

ಬೆಟ್ಟದ ಮೇಲೆ ನೆಲೆಸಿರೋ ಮಳೆ ಮಲ್ಲೇಶ್ವರನ ಸನ್ನಿಧಿಗೆ ಪ್ರತೀ ತಿಂಗಳ ಹುಣ್ಣಿಮೆಯಂದು ನಾಲ್ಕೈದು ಸಾವಿರದಷ್ಟು ಭಕ್ತರು ಬರ್ತಾರೆ. ಎಲೆಕ್ಷನ್ ವೇಳೆ ರಾಜಕಾರಣಿಗಳು ಹತ್ತಡಿ ಅಗಲದ ರಸ್ತೆಯಾಗಿಸಿದ್ರು. ಬಳಿಕ ಇಡಿ ಸುಝಲಾನ್ ಕಂಪನಿಗೆ ಗಾಳಿ ವಿದ್ಯುತ್ ತಯಾರಿಕೆಗಾಗಿ ಗುತ್ತಿಗೆ ನೀಡಿದಾಗ, ಅಲ್ಲಿ 30 ಅಡಿ ಅಗಲದ ರಸ್ತೆ ಮಾಡಲಾಗಿದೆ.

ಈಗ ಸರ್ಕಾರದಿಂದ ಮೂರುವರೆ ಕೋಟಿ ಹಣ ಬಿಡುಗಡೆಯಾಗಿದ್ರೂ, ಉತ್ತಮ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ. ಒಟ್ನಲ್ಲಿ ಪ್ರವಾಸೋದ್ಯಮ ಬೆಳೆಸಬೇಕು, ಅದರ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ನೀಡೋ ಜೊತೆಗೆ ಜನರಿಗೆ ಪ್ರಕೃತಿ ಬಗ್ಗೆ ಆಸಕ್ತಿ ಮೂಡಿಸಿ ಪರಿಸರ ಉಳಿವಿಗೆ ಯತ್ನಿಸಬೇಕಿದೆ. ಆದ್ರೆ, ಅಧಿಕಾರಿಗಳ ದ್ವಂದ್ವ ನಿಲುವು ಪ್ರವಾಸೋದ್ಯಮ ಹಿನ್ನಡೆಗೆ ಕಾರಣವಾಗ್ತಿರೋದು ನಿಜಕ್ಕೂ ದುರಂತ.

Published On - 1:29 pm, Sun, 22 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ