ಭಾರಿ ಕುಸಿತ ಕಂಡ ಈರುಳ್ಳಿ ಬೆಲೆ

ದಾವಣಗೆರೆ: ಕಳೆದ ಕೆಲ ದಿನಗಳ ಹಿಂದೆ ಗಗನಕ್ಕೆ ಏರಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಐದು ದಿನದಲ್ಲಿ ಈರುಳ್ಳಿ ಭಾರಿ ಕುಸಿತ ಕಂಡಿದ್ದು, ಮತ್ತೆ ದರ ಮಾರಕಟ್ಟೆಯಲ್ಲಿ ಯಥಾ ಸ್ಥಿತಿಗೆ ತಲುಪಿದೆ. ಕ್ವಿಂಟಲ್​ಗೆ 15 ಸಾವಿರ ರೂಪಾಯಿ ಇದ್ದ ಈರುಳ್ಳಿ ಈಗ ಆರು ಸಾವಿರ ರೂಪಾಯಿಗೆ ಕುಸಿದಿದೆ. ದಾವಣಗೆರೆ ಈರುಳ್ಳಿ ‌ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರುಪೇರಾಗಿದೆ. ಡಿಸೆಂಬರ್ 9ಕ್ಕೆ ಕ್ವಿಂಟಲ್​ಗೆ 10 ಸಾವಿರ ಇತ್ತು, ನಿನ್ನೆ 7 ಸಾವಿರ ರೂಪಾಯಿಗೆ ಇಳಿದಿತ್ತು ಇಂದು […]

ಭಾರಿ ಕುಸಿತ ಕಂಡ ಈರುಳ್ಳಿ ಬೆಲೆ
ಈರುಳ್ಳಿ
ಸಾಧು ಶ್ರೀನಾಥ್​

Updated on: Dec 12, 2019 | 9:09 AM

ದಾವಣಗೆರೆ: ಕಳೆದ ಕೆಲ ದಿನಗಳ ಹಿಂದೆ ಗಗನಕ್ಕೆ ಏರಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಐದು ದಿನದಲ್ಲಿ ಈರುಳ್ಳಿ ಭಾರಿ ಕುಸಿತ ಕಂಡಿದ್ದು, ಮತ್ತೆ ದರ ಮಾರಕಟ್ಟೆಯಲ್ಲಿ ಯಥಾ ಸ್ಥಿತಿಗೆ ತಲುಪಿದೆ.

ಕ್ವಿಂಟಲ್​ಗೆ 15 ಸಾವಿರ ರೂಪಾಯಿ ಇದ್ದ ಈರುಳ್ಳಿ ಈಗ ಆರು ಸಾವಿರ ರೂಪಾಯಿಗೆ ಕುಸಿದಿದೆ. ದಾವಣಗೆರೆ ಈರುಳ್ಳಿ ‌ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರುಪೇರಾಗಿದೆ. ಡಿಸೆಂಬರ್ 9ಕ್ಕೆ ಕ್ವಿಂಟಲ್​ಗೆ 10 ಸಾವಿರ ಇತ್ತು, ನಿನ್ನೆ 7 ಸಾವಿರ ರೂಪಾಯಿಗೆ ಇಳಿದಿತ್ತು ಇಂದು ಮತ್ತೆ 6 ಸಾವಿರಕ್ಕೆ ಕುಸಿದಿದೆ.

ಈ ರೀತಿ ದಿನೇ ದಿನೇ ಇಳಿಯುತ್ತಿರುವ ದರಕ್ಕೆ ಈರುಳ್ಳಿ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಈಗ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರು ಚಿಂತಿಸದೆ ಖರೀದಿ ಮಾಡಬಹುದಾಗಿದೆ. ಆದರೆ ರೈತರೂ ಮಾತ್ರ ನಿರಾಸರಾಗಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us