AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ

ಕಾರವಾರ: ಪಟ ಪಟನೇ ರೆಕ್ಕೆ ಬಡಿಯುತ್ತಾ ಮಕರಂದ ಹೀರುವ ಪತಂಗ. ಹೂವಿಂದ ಹೂವಿಗೆ ಹಾರುತ್ತಾ ನಲಿದಾಡುವ ಕಲರ್​ಫುಲ್ ಬಟರ್​ಫ್ಲೈಸ್. ಸುಂದರ ಚಿಟ್ಟೆಗಳನ್ನ ನೋಡಲು ಇಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿರೋ ಚಿಟ್ಟೆ ಪಾರ್ಕ್​ನ ವೈಭವ ನೋಡೋದೆ ಚೆಂದ. ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರೋ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲೀಗ ಚಿಟ್ಟೆಗಳ ಕಲರವ ಶುರುವಾಗಿದೆ. ಅದಕ್ಕೆ ಕಾರಣ ಉದ್ಯಾನವನದ 10 ಗುಂಟೆ ಪ್ರದೇಶವನ್ನ ಚಿಟ್ಟೆ ಪಾರ್ಕಾಗಿ ಮಾರ್ಪಾಡು […]

ಕಾರವಾರದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ
ಸಾಧು ಶ್ರೀನಾಥ್​
|

Updated on:Dec 12, 2019 | 8:05 AM

Share

ಕಾರವಾರ: ಪಟ ಪಟನೇ ರೆಕ್ಕೆ ಬಡಿಯುತ್ತಾ ಮಕರಂದ ಹೀರುವ ಪತಂಗ. ಹೂವಿಂದ ಹೂವಿಗೆ ಹಾರುತ್ತಾ ನಲಿದಾಡುವ ಕಲರ್​ಫುಲ್ ಬಟರ್​ಫ್ಲೈಸ್. ಸುಂದರ ಚಿಟ್ಟೆಗಳನ್ನ ನೋಡಲು ಇಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿರೋ ಚಿಟ್ಟೆ ಪಾರ್ಕ್​ನ ವೈಭವ ನೋಡೋದೆ ಚೆಂದ.

ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರೋ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲೀಗ ಚಿಟ್ಟೆಗಳ ಕಲರವ ಶುರುವಾಗಿದೆ. ಅದಕ್ಕೆ ಕಾರಣ ಉದ್ಯಾನವನದ 10 ಗುಂಟೆ ಪ್ರದೇಶವನ್ನ ಚಿಟ್ಟೆ ಪಾರ್ಕಾಗಿ ಮಾರ್ಪಾಡು ಮಾಡುತ್ತಿರೋದು. ಬಟರ್​ಫ್ಲೈ ಪಾರ್ಕ್​ನಲ್ಲಿ ಸದರ್ನ್​ ಬರ್ಡ್​ ವಿಂಗ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಪ್ರಭೇದದ ಚಿಟ್ಟೆಗಳು ಆಶ್ರಯ ಪಡೆದಿವೆ.

ಆರಂಭಿಕ ಹಂತದಲ್ಲಿ ಚಿಟ್ಟೆಗಳು ಪರಾಗಸ್ಪರ್ಶ ನಡೆಸಲು ಅನುಕೂಲವಾಗುವಂತೆ ಹೆಚ್ಚು ಮಕರಂದವಿರುವ ಚಿಕ್ಕ ಚಿಕ್ಕ ಹೂವಿನ ಗಿಡಗಳನ್ನ ಬೆಳೆಸಲಾಗಿದೆ. ಗಿಡಗಳಿಗೆ ನೀರಿನ ವ್ಯವಸ್ಥೆ ಜೊತೆಗೆ ಹೆಚ್ಚಿನ ಉಷ್ಣಾಂಶವಿರೋ ಹಿನ್ನೆಲೆ ನೆರಳಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಪಾರ್ಕ್​ನಲ್ಲಿ ಫಲಕಗಳನ್ನ ಅಳವಡಿಸಲಾಗಿದ್ದು, ಚಿಟ್ಟೆಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲಾಗ್ತಿದೆ.

ಸದ್ಯ ಪ್ರಾಯೋಗಿಕವಾಗಿ ರೂಪಿಸಿರುವ ಚಿಟ್ಟೆ ಪಾರ್ಕ್​ಗೆ ಸಾಕಷ್ಟು ಚಿಟ್ಟೆಗಳು ಆಗಮಿಸುತ್ತಿದ್ದು, ಆಶ್ರಯ ಪಡೆಯುತ್ತಿವೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ ಆರಂಭವಾಗಿದೆ.

Published On - 8:04 am, Thu, 12 December 19

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ