ಸಂಜೆಯೊಳಗೆ ಶುಲ್ಕ ನಿಗದಿ ಮಾಡುವಂತೆ ಡೆಡ್‌ಲೈನ್, ಇಲ್ಲದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ -ಪೋಷಕರಿಂದ ಎಚ್ಚರಿಕೆ

ಶುಲ್ಕ ನಿಗದಿ ವಿಚಾರವಾಗಿ ಸಭೆ ನಡೆದು 2 ವಾರವಾಗಿದೆ. ಆದರೆ ಈವರೆಗೆ ಶುಲ್ಕ ನಿಗದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನಸ್ಸು ಮಾಡಿಲ್ಲ. ಇದೇ ವಿಚಾರವಾಗಿ 2 ಬಾರಿ ಪೋಷಕರಿಂದ ಪ್ರತಿಭಟನೆ ನಡೆದಿದೆ. ಶಿಕ್ಷಣ ಸಚಿವರ ಮನೆ ಮುಂದೆಯೂ ಧರಣಿ ನಡೆಸಿದ್ದೆವು. ಆದ್ರೂ ಯಾವುದೇ ನಿರ್ಧಾರವನ್ನು ಮಾಡದ ಹಿನ್ನೆಲೆ ಇಂದು...

ಸಂಜೆಯೊಳಗೆ ಶುಲ್ಕ ನಿಗದಿ ಮಾಡುವಂತೆ ಡೆಡ್‌ಲೈನ್, ಇಲ್ಲದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ -ಪೋಷಕರಿಂದ ಎಚ್ಚರಿಕೆ
ಸಂಗ್ರಹ ಚಿತ್ರ
ಆಯೇಷಾ ಬಾನು

Updated on: Jan 28, 2021 | 1:07 PM

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಲು ಶಿಕ್ಷಣ ಇಲಾಖೆಗೆ ಪೋಷಕರು ಡೆಡ್‌ಲೈನ್ ನೀಡಿದ್ದಾರೆ. ಇಂದು ಸಂಜೆಯೊಳಗೆ ಶುಲ್ಕ ನಿಗದಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಪೋಷಕರು ನಿರ್ಧಾರ ಮಾಡಿದ್ದಾರೆ.

ಶುಲ್ಕ ನಿಗದಿ ವಿಚಾರವಾಗಿ ಸಭೆ ನಡೆದು 2 ವಾರವಾಗಿದೆ. ಆದರೆ ಈವರೆಗೆ ಶುಲ್ಕ ನಿಗದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನಸ್ಸು ಮಾಡಿಲ್ಲ. ಇದೇ ವಿಚಾರವಾಗಿ 2 ಬಾರಿ ಪೋಷಕರಿಂದ ಪ್ರತಿಭಟನೆ ನಡೆದಿದೆ. ಶಿಕ್ಷಣ ಸಚಿವರ ಮನೆ ಮುಂದೆಯೂ ಧರಣಿ ನಡೆಸಿದ್ದೆವು. ಆದ್ರೂ ಯಾವುದೇ ನಿರ್ಧಾರವನ್ನು ಮಾಡದ ಹಿನ್ನೆಲೆ ಇಂದು ಸಂಜೆಯೊಳಗೆ ಶುಲ್ಕ ನಿಗದಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಪೋಷಕರು ಎಚ್ಚರಿಕೆ ನೀಡಿದ್ದಾರೆ.

75% ರಷ್ಟು ಶಾಲಾ ಶುಲ್ಕ ಕಡಿತ ಮಾಡಿ
ಇನ್ನು ಕೆಲ ಖಾಸಗಿಗಳು ಶಾಲೆಗಳು ಈಗಾಗಲೇ20 ರಿಂದ 25% ರಷ್ಟು ಶುಲ್ಕ ಕಡಿಮೆ ಮಾಡುವ ಭರವಸೆ ನೀಡಿವೆ. ಆದ್ರೆ ಪೋಷಕರು 75% ರಷ್ಟು ಶಾಲಾ ಶುಲ್ಕ ಕಡಿತ ಮಾಡಬಹುದು ಕೇವಲ ಆನ್ಲೈನ್ ಕ್ಲಾಸ್ ನಡೆಸಿದಕ್ಕೆ ಪೂರ್ಣ ಪ್ರಮಾಣದ ಶುಲ್ಕ ಪಾವತಿ ಮಾಡಿಸಿಕೊಳ್ಳುವುದು ಸರಿಯಲ್ಲ ಅಂತ ಪೋಷಕರು ವಾದ ಮಾಡಿದ್ದಾರೆ. ವೆಚ್ಚಕ್ಕೆ ತಕ್ಕ ಶುಲ್ಕ ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲ್ಲಿ. ಇವತ್ತು ಸಂಜೆಯೊಳಗೆ ಶುಲ್ಕ ವಿಚಾರದ ಬಗ್ಗೆ ಅಂತಿಮ ತೀರ್ಮಾನ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಪುಸ್ತಕ ವಿತರಣೆ: ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಭಾಗಿ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us