ಆಟೋ ಚಾಲಕರ ತಲೆ ಮೇಲೆ ಬಿದ್ದ ಸ್ಟ್ರೀಟ್ ಲೈಟ್ ರಿಂಗ್.. ಮುಂದೇನಾಯ್ತು?

ರಾಯಚೂರು: ಆಟೋ ಚಾಲಕರಿಬ್ಬರ ಮೇಲೆ ಬೀದಿ ದೀಪದ ರಿಂಗ್​ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಐಬಿ ಕ್ರಾಸ್​ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರೂ ಆಟೋ ಚಾಲಕರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ. ಸುಮಾರು 30 ಅಡಿ ಎತ್ತರದಲ್ಲಿದ್ದ ಕಬ್ಬಿಣದ ರಿಂಗ್ ರಸ್ತೆಯ ವೃತ್ತದ ಬಳಿ ಇದ್ದ 4 ಬೀದಿ ದೀಪ​ಗಳ ಮಧ್ಯೆ ಅಳವಡಿಸಲಾಗಿತ್ತು. ಆದರೆ ಬಹಳಷ್ಟು ದಿನಗಳಿಂದ ಮಳೆ ಮತ್ತು […]

ಆಟೋ ಚಾಲಕರ ತಲೆ ಮೇಲೆ ಬಿದ್ದ ಸ್ಟ್ರೀಟ್ ಲೈಟ್ ರಿಂಗ್.. ಮುಂದೇನಾಯ್ತು?
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 15, 2020 | 4:25 PM

ರಾಯಚೂರು: ಆಟೋ ಚಾಲಕರಿಬ್ಬರ ಮೇಲೆ ಬೀದಿ ದೀಪದ ರಿಂಗ್​ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದ ಐಬಿ ಕ್ರಾಸ್​ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರೂ ಆಟೋ ಚಾಲಕರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗ್ತಿದೆ.

ಸುಮಾರು 30 ಅಡಿ ಎತ್ತರದಲ್ಲಿದ್ದ ಕಬ್ಬಿಣದ ರಿಂಗ್ ರಸ್ತೆಯ ವೃತ್ತದ ಬಳಿ ಇದ್ದ 4 ಬೀದಿ ದೀಪ​ಗಳ ಮಧ್ಯೆ ಅಳವಡಿಸಲಾಗಿತ್ತು. ಆದರೆ ಬಹಳಷ್ಟು ದಿನಗಳಿಂದ ಮಳೆ ಮತ್ತು ಗಾಳಿಗೆ ಅದು ತುಕ್ಕು ಹಿಡಿದಿತ್ತು. ಹಾಗಾಗಿ ಇಂದು ಕಡಿದು ಬಿದ್ದಿದೆ ಎಂದು ಸ್ಥಳೀಯರು ಹೇಳ್ತಿದ್ದಾರೆ. ಜೊತೆಗೆ ಇದರ ಬಗ್ಗೆ ಅರಿವಿದ್ದರೂ ಜೆಸ್ಕಾಂ ಸಿಬ್ಬಂದಿ ಅದನ್ನೂ ತಕ್ಷಣವೇ ಬದಲಾಯಿಸಿದೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವು ಸಹ ಹೊರಹಾಕಿದ್ದಾರೆ.

Published On - 3:12 pm, Mon, 15 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us