AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಸಿಕ್ತು ಮಹತ್ವದ ಸಾಕ್ಷ್ಯ.. ಮಾಲೂರಿನ ಯುವತಿಯಿಂದ ಕಲೆ ಹಾಕುತ್ತಿದ್ದಾರೆ ಮಾಹಿತಿ

ಮಾಲೂರಿನ ಈ ಯುವತಿಗೆ ಸಿಡಿ ಗ್ಯಾಂಗ್ ಒಂದು ದಿನಕ್ಕೆ ಇಪ್ಪತ್ತೈದು ಸಾವಿರದಂತೆ ಹಣ ನೀಡಿದ್ದಾರಂತೆ. ಸಿಡಿ ರಿಲೀಸ್ ಆಗುವ ಸಮಯದಲ್ಲಿ ಸಿಡಿ ಲೇಡಿ ತನ್ನ ಮುಖ ಎಲ್ಲವು ಬಯಲಾಗಿದೆ ಎಂದು ಖಿನ್ನತೆಗೆ ಒಳಗಾಗಿದ್ದಳಂತೆ. ಆಗ ಸಿಡಿ ಲೇಡಿಗೆ ಕೋಲಾರದ ಮಾಲೂರಿನ ಯುವತಿ ಮಾನಸಿಕವಾಗಿ ಧೈರ್ಯ ತುಂಬಿ ಸಹಾಯ ಮಾಡಿದ್ದಾಳಂತೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಸಿಕ್ತು ಮಹತ್ವದ ಸಾಕ್ಷ್ಯ.. ಮಾಲೂರಿನ ಯುವತಿಯಿಂದ ಕಲೆ ಹಾಕುತ್ತಿದ್ದಾರೆ ಮಾಹಿತಿ
ಸಿಡಿ ಲೇಡಿ
ಆಯೇಷಾ ಬಾನು
ಆಯೇಷಾ ಬಾನು|

Updated on: Apr 14, 2021 | 11:45 AM

Share

ಬೆಂಗಳೂರು: ರಮೇಶ್ ಜಾರಕಿಹೊಳಿ CD ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಸ್​ಐಟಿಗೆ ಒಂದು ಮಹತ್ವದ ಸಾಕ್ಷಿ ಸಿಕ್ಕಿದೆ. ಸಿಡಿ ಬಿಡುಗಡೆ ಸಮಯದಲ್ಲಿ ಸಿಡಿ ಲೇಡಿ ಜೊತೆಗೆ ಇದ್ದ ಕೋಲಾರದ ಮಾಲೂರು ಮೂಲದ ಓರ್ವ ಯುವತಿಯನ್ನು ಪತ್ತೆ ಮಾಡಿದ್ದ ಎಸ್​ಐಟಿ ಆಕೆಯಿಂದ ಮಹತ್ವದ ಸಾಕ್ಷಿ ಕಲೆ ಹಾಕಿದೆ. ಮಾಲೂರಿನ ಈ ಯುವತಿ ಸಿಡಿ ರಿಲೀಸ್ ಆಗುವ ಸಮಯದಲ್ಲಿ ಹಾಗೂ ಸಿಡಿ ರಿಲೀಸ್ ಆಗಿದ ನಂತ್ರ ಸಹ ಸಿಡಿ ಲೇಡಿ ಜೊತೆಗೆ ಇದ್ದಾಳಂತೆ. ಸದ್ಯ ಈಕೆಯಿಂದ ಹೇಳಿಕೆ ಪಡೆದಿರುವ ಎಸ್​ಐಟಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಹಾಗಾದ್ರೆ ಆ ಯುವತಿ ನೀಡಿದ ಹೇಳಿಕೆ ಏನು ಎಂಬುದರ ಡೀಟೈಲ್ಸ್ ಇಲ್ಲಿದೆ.

ಸಿಡಿ ಲೇಡಿ ಖಿನ್ನತೆಗೆ ಒಳಗಾಗಿದ್ದಾಗ ಸಾಥ್ ನೀಡಿದ್ದ ಮಾಲೂರಿನ ಯುವತಿ ಮಾಲೂರಿನ ಈ ಯುವತಿಗೆ ಸಿಡಿ ಗ್ಯಾಂಗ್ ಒಂದು ದಿನಕ್ಕೆ 25 ಸಾವಿರದಂತೆ ಹಣ ನೀಡಿದ್ದಾರಂತೆ. ಸಿಡಿ ರಿಲೀಸ್ ಆಗುವ ಸಮಯದಲ್ಲಿ ಸಿಡಿ ಲೇಡಿ ತನ್ನ ಮುಖ ಎಲ್ಲವು ಬಯಲಾಗಿದೆ ಎಂದು ಖಿನ್ನತೆಗೆ ಒಳಗಾಗಿದ್ದಳಂತೆ. ಆಗ ಸಿಡಿ ಲೇಡಿಗೆ ಕೋಲಾರದ ಮಾಲೂರಿನ ಯುವತಿ ಮಾನಸಿಕವಾಗಿ ಧೈರ್ಯ ತುಂಬಿ ಸಹಾಯ ಮಾಡಿದ್ದಾಳಂತೆ. ನಂತ್ರ ಯುವತಿ ಜೊತೆಗೂ ಸಾಕಷ್ಟು ಸಮಯ ಕಳೆದಿದ್ದಾಳೆ. ಈ ವೇಳೆ ಯುವತಿಯನ್ನು ಯಾರು ಯಾರು ಭೇಟಿ ಮಾಡಿದ್ರು. ಯಾರು ಯಾರು ಎಷ್ಟು ಹಣ ನೀಡಿದ್ರು ಎಲ್ಲವನ್ನೂ ಮಾಲೂರಿನ ಈ ಯುವತಿ ಬಾಯಿ ಬಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಸ್​ಐಟಿ ಕೋಲಾರದ ಯುವತಿಯನ್ನು ಸಾಕ್ಷಿಯಾಗಿ ಪರಿಗಣಿಸಿದೆ.

ಮಾಲೂರಿನ ಯುವತಿ, ಸಿಡಿ ಲೇಡಿ ಜೊತೆ ಎಲ್ಲಿ ಎಲ್ಲಿ ಇದ್ದರು ಎಂದು ಸ್ಥಳವನ್ನು ತೋರಿಸಿದ್ದಾರೆ. ವಿಟ್ನೆಸ್ ಮಾಡಿಕೊಂಡು ಹೇಳಿಕೆ ಕೂಡ ದಾಖಲಿಸಲಾಗಿದೆ. ಸದ್ಯ ಎಸ್​ಐಟಿ ಹೆಚ್ಚಿನ ತನಿಖೆ ಮುಂದುವರೆಸಿದ್ದು ಇದುವರೆಗೆ 70ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿಕೊಂಡಿದೆ. ತನಿಖೆ ಅಂಗವಾಗಿ ಹಲವಾರು ಜನರನ್ನು ವಿಚಾರಣೆ ನಡೆಸಿದೆ. ಇದುವರೆಗೆ ಎಸ್​ಐಟಿಗೆ ಸಿಕ್ಕಿರೊ ಪ್ರಮುಖ ಸಾಕ್ಷಿ ಎಂದರೆ ಯುವತಿ ಮಾಜಿ ಬಾಯ್ ಫ್ರೆಂಡ್ ಹಾಗೂ ಕೋಲಾರದ ಮಾಲೂರಿನ ಯುವತಿ.

ಸಿಡಿ ಕಿಂಗ್ ಪಿನ್​ಗಳ ಹಿಂದೆ ಗ್ರಾನೈಟ್ ಉದ್ಯಮಿ ಸಂಪೂರ್ಣ ಕೇಸ್​ನಲ್ಲಿ ಕೋಟ್ಯಾಂತರ ರೂ ಹಣ ಖರ್ಚಾಗಿದೆ. ಗ್ರಾನೈಟ್ ಉದ್ಯಮಿ ಕನಕಪುರದ ಶಿವಕುಮಾರ್​ನಿಂದ ಫೈನಾನ್ಸ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಶಿವಕುಮಾರ್ ಮೂಲತಃ ಕನಕಪುರದವರು. ಜೆಪಿನಗರದಲ್ಲಿ ವಾಸವಾಗಿರುವ ಉದ್ಯಮಿ ಶಿವಕುಮಾರ್, ನರೇಶ್ ಹಾಗೂ ಶ್ರವಣ್​ಗೆ ಹಣ ಸಂದಾಯ ಮಾಡಿದ್ದಾರೆ. ಸದ್ಯ ಶಿವಕುಮಾರ್ ಹಾಗೂ ಆತನ ಚಾಲಕ ಪರಶಿವಮೂರ್ತಿ ಸಹ ನಾಪತ್ತೆಯಾಗಿದ್ದಾರೆ. ಶಿವಕುಮಾರ್​ಗಾಗಿಯೂ ಎಸ್​ಐಟಿ ಹುಡುಕಾಟ ನಡೆಸುತ್ತಿದೆ. ಸದ್ಯ ತನ್ನ ಗ್ರಾನೈಟ್ ಕ್ವಾರೆ ಹಾಗೂ ತನ್ನ ಎಲ್ಲ ಉದ್ಯಮಗಳನ್ನು ಅರ್ಧಕ್ಕೆ ನಿಲ್ಲಿಸಿ ಶಿವಕುಮಾರ್ ಎಸ್ಕೇಪ್ ಅಗಿದ್ದಾರೆ.

(Ramesh Jarkiholi CD Case CD Lady Friend From Malur Narrates The Travel History of The CD Gang to SIT)

ಇದನ್ನೂ ಓದಿ: ನಾನು ಉಲ್ಟಾ ಹೊಡೆದಿಲ್ಲ, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧಳಾಗಿದ್ದೇನೆ.. ರಿಲೀಸ್ ಆಯ್ತು ಸಿಡಿ ಲೇಡಿಯ ಮತ್ತೊಂದು ವಿಡಿಯೋ

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ