ಸಿಡಿಯಲ್ಲಿರುವ ಯುವತಿಗಾಗಿ ಎಸ್‌ಐಟಿ ತೀವ್ರ ಶೋಧ; ಪ್ರಾಣಕ್ಕೇನಾದ್ರೂ ಮಾಡಿಕೊಳ್ಳುವ ಭೀತಿ ಹಿನ್ನೆಲೆ ನಿಗಾ

ಸಿಡಿ ಲೇಡಿ ಜತೆ ಸುಮಾರು ಏಳೆಂಟು ಜನರಿರುವ ಮಾಹಿತಿಯೂ ಇದೆ. ಜತೆಗಿರುವುವವರಿಂದ ಸಂತ್ತ್ರಸ್ತ ಯುವತಿ ಮೇಲೆ ತೀವ್ರ ನಿಗಾ ಇಡಲಾಗಿದೆ. ಯುವತಿ ತನ್ನ ಪ್ರಾಣಕ್ಕೇನಾದ್ರೂ ಮಾಡಿಕೊಳ್ಳುವ ಭೀತಿ ಹಿನ್ನೆಲೆ ನಿಗಾ ವಹಿಸಲಾಗಿದೆ. ಫ್ಯಾನ್ ಸಹ ಇಲ್ಲದ ಕೋಣೆಯಲ್ಲಿ ನಿನ್ನೆವರೆಗೂ ಗೋವಾದಲ್ಲಿದ್ದರು ಎಂದು ತಿಳಿದುಬಂದಿದೆ.

ಸಿಡಿಯಲ್ಲಿರುವ ಯುವತಿಗಾಗಿ ಎಸ್‌ಐಟಿ ತೀವ್ರ ಶೋಧ; ಪ್ರಾಣಕ್ಕೇನಾದ್ರೂ ಮಾಡಿಕೊಳ್ಳುವ ಭೀತಿ ಹಿನ್ನೆಲೆ ನಿಗಾ
SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಮತ್ತು ಸಿಡಿ ಲೇಡಿ
ಸಾಧು ಶ್ರೀನಾಥ್​

Updated on: Mar 29, 2021 | 11:28 AM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣ ಇಂದು ಸೋಮವಾರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿಯಲ್ಲಿರುವ ಯುವತಿ, ಪ್ರಕರಣದ ಸಂತ್ರಸ್ಥೆ ಹೈಕೋರ್ಟ್​ಗೆ ಪತ್ರ ಬರೆದಿದ್ದು, ತನಗೆ ರಕ್ಷಣೆ ನೀಡಿದರೆ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಆದರೆ ಕೋರ್ಟ್ ಕಡೆಯಿಂದ ಈ ಮೇಲ್​ ರವಾನೆಯಾಗಿರುವ ಬಗ್ಗೆ ದೃಢಪಟ್ಟಿಲ್ಲ. ಈ ಮಧ್ಯೆ, ಮತ್ತೊಂದು ಮಹತ್ವದ ತಿರುವಿನಲ್ಲಿ ಸಂತ್ರಸ್ತ ಯುವತಿ ಗೋವಾದಲ್ಲಿ ವಾಸ್ತವ್ಯ ಹೂಡಿರುವುದಾಗಿ ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಸಿಡಿ ಲೇಡಿ ಜತೆ ಸುಮಾರು ಏಳೆಂಟು ಜನರಿರುವ ಮಾಹಿತಿಯೂ ಇದೆ. ಜತೆಗಿರುವುವವರಿಂದ ಸಂತ್ತ್ರಸ್ತ ಯುವತಿ ಮೇಲೆ ತೀವ್ರ ನಿಗಾ ಇಡಲಾಗಿದೆ. ಯುವತಿ ತನ್ನ ಪ್ರಾಣಕ್ಕೇನಾದ್ರೂ ಮಾಡಿಕೊಳ್ಳುವ ಭೀತಿ ಹಿನ್ನೆಲೆ ನಿಗಾ ವಹಿಸಲಾಗಿದೆ. ಫ್ಯಾನ್ ಸಹ ಇಲ್ಲದ ಕೋಣೆಯಲ್ಲಿ ನಿನ್ನೆವರೆಗೂ ಗೋವಾದಲ್ಲಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ಬೆಳಗ್ಗೆ ಗೋವಾ ಬಿಟ್ಟು ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಗಳ ಮಧ್ಯೆ, ಸಿಡಿಯಲ್ಲಿರುವ ಯುವತಿಗಾಗಿ ಎಸ್‌ಐಟಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us