AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಕ್ತ ಹೀರ್ತಿದೆ ಕಿಲ್ಲರ್ ಕೊರೊನಾ! 18 ದಿನದಲ್ಲಿ 106 ಸಾವು

ಬೆಂಗಳೂರು: ಕಿಲ್ಲರ್ ಕೊರೊನಾದಿಂದಾಗಿ ಜನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಾವಿರ ಸಲ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸಾವಿನ ಸಂಖ್ಯೆ ಏರಿಕೆಯಾಗ್ತಿರೋದ್ಯಾಕೆ? ಸಿಲಿಕಾನ್​ ಸಿಟಿಯಲ್ಲಿ ಕೊರನಾ ಸರಣಿ ಸಾವಿಗೆ ನಿಜವಾದ ಕಾರಣವೇನು? ಎನ್ನುವ ‘ಸಾವಿನ ಸತ್ಯ’ದ ಭಯಾನಕತೆಯನ್ನು ಟಿವಿ9 ಬಿಚ್ಚಿಟ್ಟಿದೆ. ಮಹಾ ಕ್ರೂರಿ ಕೊರೊನಾಗೆ ಬೆಂಗಳೂರಿನಲ್ಲಿ ದಿನವೂ ಜನ ಬಲಿಯಾಗುತ್ತಿದ್ದಾರೆ. ಜುಲೈ 4 ರಂದು 24 ಬಲಿಯಾಗಿದೆ, ಜುಲೈ 05ರಂದು 16 ಬಲಿ, ಜುಲೈ […]

ಬೆಂಗಳೂರಿನಲ್ಲಿ ರಕ್ತ ಹೀರ್ತಿದೆ ಕಿಲ್ಲರ್ ಕೊರೊನಾ! 18 ದಿನದಲ್ಲಿ 106 ಸಾವು
ಆಯೇಷಾ ಬಾನು
| Edited By: |

Updated on:Jul 09, 2020 | 1:07 PM

Share

ಬೆಂಗಳೂರು: ಕಿಲ್ಲರ್ ಕೊರೊನಾದಿಂದಾಗಿ ಜನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಾವಿರ ಸಲ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸಾವಿನ ಸಂಖ್ಯೆ ಏರಿಕೆಯಾಗ್ತಿರೋದ್ಯಾಕೆ? ಸಿಲಿಕಾನ್​ ಸಿಟಿಯಲ್ಲಿ ಕೊರನಾ ಸರಣಿ ಸಾವಿಗೆ ನಿಜವಾದ ಕಾರಣವೇನು? ಎನ್ನುವ ‘ಸಾವಿನ ಸತ್ಯ’ದ ಭಯಾನಕತೆಯನ್ನು ಟಿವಿ9 ಬಿಚ್ಚಿಟ್ಟಿದೆ.

ಮಹಾ ಕ್ರೂರಿ ಕೊರೊನಾಗೆ ಬೆಂಗಳೂರಿನಲ್ಲಿ ದಿನವೂ ಜನ ಬಲಿಯಾಗುತ್ತಿದ್ದಾರೆ. ಜುಲೈ 4 ರಂದು 24 ಬಲಿಯಾಗಿದೆ, ಜುಲೈ 05ರಂದು 16 ಬಲಿ, ಜುಲೈ 06ರಂದು 11 ಬಲಿ, ಜುಲೈ 7ರಂದು 22, ಜುಲೈ 08ರಂದು 13 ಬಲಿ, ಈ ರೀತಿ ದಿನೇ ದಿನೇ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ಜನರ ದೇಹ ಹೊಕ್ಕು ರಣಹಿಂಸೆ ಕೊಟ್ಟು ಜೀವ ಕಸೀತಿರೋ ವೈರಸ್ ಏಪ್ರಿಲ್ ರಲ್ಲಿ 06 ಮಂದಿಯನ್ನ ಬಲಿಪಡೆದಿದೆ. ಮೇ 04 ಮಂದಿ, ಜೂನ್​ನಲ್ಲಿ 85 ಮಂದಿ, ಜುಲೈ 8ರವರೆಗೆ 106 ಮಂದಿ ಬಲಿಯನ್ನ ಬಲಿ ಪಡೆದಿದೆ. ಈ ರೀತಿ ಕೊರೊನಾ ಬಲಿಷ್ಠವಾಗಿ ಬೆಳೆದು ಸೋಂಕಿತರನ್ನು ಬಲಿ ಪಡೆಯಲು ನಿಂತಿದೆ.

ಬೆಂಗಳೂರಲ್ಲಿ 18 ದಿನದಲ್ಲಿ 106 ಸಾವು ಇನ್ನು ಕಳೆದ 18 ದಿನಗಳಲ್ಲಿ ಬೆಂಗಳೂರಲ್ಲಿ ಕೊರೊನಾ ರಣಕೇಕೆ ನೋಡಿದ್ರೆ ಬೆಚ್ಚಿ ಬೀಳುವಂತಿದೆ. ಯಾಮಾರಿದ್ರೆ ಸಾಕು ವಕ್ಕರಿಸಿ ಜೀವ ತೆಗೆಯುತ್ತಿರುವ ವೈರಸ್ ಕೇವಲ 18 ದಿನಕ್ಕೆ 106 ಮಂದಿಯನ್ನು ಬಲಿ ಪಡೆದಿದೆ. ಜೂನ್-16 : 05ಬಲಿ, ಜೂನ್-17 : 05ಬಲಿ, ಜೂನ್-18 : 08ಬಲಿ, ಜೂನ್-19 : 07 ಬಲಿಯಾಗಿದೆ. ಜೂನ್-20rಂದು 03 ಬಲಿ, ಜೂನ್-21 : 03ಬಲಿ, ಜೂನ್-22 : 03ಬಲಿ, ಜೂನ್-23 : 06ಬಲಿ, ಜೂನ್-24 : 05bಲಿ, ಜೂನ್-25 : ಸಾವುದೇ ಸಾವು ಸಂಭವಿಸಿಲ್ಲ. ಜೂನ್-26 : 03ಬಲಿ, ಜೂನ್-27 : 03ಬಲಿ, ಜೂನ್-28 : 04, ಜೂನ್-29 : 03, ಜೂನ್-30 : 04, ಈ ರೀತಿ ಜೂನ್​ನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆದಿದೆ.

ಜುಲೈ-1 : 02 ಬಲಿ, ಜುಲೈ-2 : 03bಲಿ, ಜುಲೈ-3 : 05, ಜುಲೈ-4 : 24, ಜುಲೈ-5 : 16, ಜುಲೈ-6 : 11ಬಲಿ, ಜುಲೈ-7 : 22, ಜುಲೈ-8 : 13ಬಲಿಯನ್ನು ಪಡೆದಿದೆ. ಈ ರೀತಿ ತಿಂಗಳಿನಿಂದ ತಿಂಗಳಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ.

ಕೊರೊನಾ ಸಾವಿನ ಹಿಂದಿರುವ ಮೂರು ಸತ್ಯಗಳು: ಸತ್ಯ 1 : ಌಂಬುಲೆನ್ಸ್​ಗಳು ತಡವಾಗಿ ಬರ್ತಿವೆ. ರಾಜ್ಯದಲ್ಲಿ ಆ್ಯಂಬುಲೆನ್ಸ್​ಗಳ ಕೊರತೆ ಎದುರಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದರೆ ಆ್ಯಂಬುಲೆನ್ಸ್​ಗಳು ಮಾತ್ರ ಬೆರಳೆಣಿಕೆಯಷ್ಟಿವೆ. ಆ್ಯಂಬುಲೆನ್ಸ್​ಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರನ್ನ ಟಿಟಿ ವಾಹನಗಳಲ್ಲಿ ಶಿಫ್ಟ್ ಮಾಡುವ ಪರಿಸ್ಥಿತಿ ಎದುರಾಗಿದೆ.

ಸತ್ಯ 2 : ಕೋ ಮಾರ್ಬಿಡಿಟಿಯವರಿಗೆ ಚಿಕಿತ್ಸೆ ಸಿಗದಿರೋದು ಕೋ ಮಾರ್ಬಿಡಿಟಿ ಅಂದ್ರೆ ಇತರೆ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದಿರುವುದು. ಕೊರೊನಾ ಸೋಂಕಿನ ಭಯದಿಂದಾಗಿ ಇತರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ನಕಾರ ಮಾಡಲಾಗುತ್ತಿದೆ.

ಸತ್ಯ 3 : ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಇರುವುದು ಮಧುಮೇಹ, ಅಸ್ತಮಾ, ಸಿಓಪಿಡಿ, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಹೃದಯ ಸಂಬಂಧೀ ಕಾಯಿಲೆ ಇರುವವರಿಗೆ ಕೂಡಲೇ ಆಕ್ಸಿಜನ್ ವ್ಯವಸ್ಥೆ ಬೇಕಾಗುತ್ತೆ. ಆದ್ರೆ ಅಂಥಾ ಕಾಯಿಲೆ ಇರೋ ರೋಗಿಗಳಿಗೆ ಆಕ್ಸಿಜನ್ ಟೈಮ್​ಗೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋದರೆ ಒಳಗಡೆಯೇ ಸೇರಿಸಿಕೊಳ್ಳುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಸಾಯುವವರ ಸಂಖ್ಯೆ ಹೆಚ್ಚಳವಾಗ್ತಿದೆ.

Published On - 9:45 am, Thu, 9 July 20

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!