ಬೈಕ್ ಸವಾರನೊಂದಿಗೆ ಸಬ್ ಇನ್ಸ್​ಪೆಕ್ಟರ್ ಅನಾಗರಿಕ ವರ್ತನೆ, ಅವಾಚ್ಯಶಬ್ದಗಳಿಂದ ನಿಂದನೆ

ಮಂಡ್ಯ: ರಕ್ಷಣೆಗೆ ನಿಂತ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಅನಾಗರಿಕ ವರ್ತನೆ ತೋರಿದ್ದಾರೆ. ವಾಹನ ತಪಾಸಣೆ ವೇಳೆ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಮಂಡ್ಯ ನಗರದ ನಂದಾ ಥಿಯೇಟರ್ ಬಳಿ ವಾಹನ ತಪಾಸಣೆ ವೇಳೆ ಬೈಕ್ ಸವಾರನನ್ನ ಅಡ್ಡಗಟ್ಟಿ ಪೊಲೀಸರಿಂದ ತಪಾಸಣೆ ನಡೆದಿದೆ. ಈ ವೇಳೆ ಪೊಲೀಸರ ಕರ್ತವ್ಯದ ಬಗ್ಗೆ ಸವಾರ ಪ್ರಶ್ನಿಸಿದ್ದಾನೆ. ಇದಕ್ಕೆ ಕೋಪಗೊಂಡು ಸಬ್ ಇನ್ಸ್​ಪೆಕ್ಟರ್ ಕೃಷ್ಣಮೂರ್ತಿ ಸವಾರನಿಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸವಾರನೊಂದಿಗೆ ಅನಾಗರಿಕನಂತೆ ವರ್ತಿಸಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿವೆ. ವಿಡಿಯೋವನ್ನು […]

ಬೈಕ್ ಸವಾರನೊಂದಿಗೆ ಸಬ್ ಇನ್ಸ್​ಪೆಕ್ಟರ್ ಅನಾಗರಿಕ ವರ್ತನೆ, ಅವಾಚ್ಯಶಬ್ದಗಳಿಂದ ನಿಂದನೆ

Updated on: Dec 17, 2019 | 8:03 AM

ಮಂಡ್ಯ: ರಕ್ಷಣೆಗೆ ನಿಂತ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಅನಾಗರಿಕ ವರ್ತನೆ ತೋರಿದ್ದಾರೆ. ವಾಹನ ತಪಾಸಣೆ ವೇಳೆ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಮಂಡ್ಯ ನಗರದ ನಂದಾ ಥಿಯೇಟರ್ ಬಳಿ ವಾಹನ ತಪಾಸಣೆ ವೇಳೆ ಬೈಕ್ ಸವಾರನನ್ನ ಅಡ್ಡಗಟ್ಟಿ ಪೊಲೀಸರಿಂದ ತಪಾಸಣೆ ನಡೆದಿದೆ.

ಈ ವೇಳೆ ಪೊಲೀಸರ ಕರ್ತವ್ಯದ ಬಗ್ಗೆ ಸವಾರ ಪ್ರಶ್ನಿಸಿದ್ದಾನೆ. ಇದಕ್ಕೆ ಕೋಪಗೊಂಡು ಸಬ್ ಇನ್ಸ್​ಪೆಕ್ಟರ್ ಕೃಷ್ಣಮೂರ್ತಿ ಸವಾರನಿಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸವಾರನೊಂದಿಗೆ ಅನಾಗರಿಕನಂತೆ ವರ್ತಿಸಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿವೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸರ ವರ್ತನೆಗೆ ಟೀಕೆ ವ್ಯಕ್ತವಾದ ಹಿನ್ನೆಲೆ ವರದಿ ನೀಡಲು ಡಿವೈಎಸ್‌ಪಿಗೆ ಸೂಚನೆ ನೀಡಲಾಗಿದೆ. ತಪಾಸಣೆ ವೇಳೆ ಪೊಲೀಸರು ಬಾಡಿ ಕ್ಯಾಮರಾ ಅಳವಡಿಸಿದ್ದರು. ಸವಾರ ಪೊಲೀಸರಿಗೆ ಪ್ರೇರೇಪಿಸುವ ರೀತಿ ಮಾತನಾಡಿದ್ದಾನೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದರು.

Published On - 8:02 am, Tue, 17 December 19

Follow Us