
ಉತ್ತರ ಕರ್ನಾಟಕದ ಜಲಪ್ರಳಯಕ್ಕೆ ಸ್ಪಂದಿಸಬೇಕೆಂದು TV9 ನಿರ್ಧರಿಸಿದ್ದೇ ತಡ ಜನ ಮತ್ತು ಸಂಘ ಸಂಸ್ಥೆಗಳು ಉತ್ತರದ ಜನರಿಗೆ ಉದಾತ್ತರಾಗಿ ನೆರವಾಗಲು ಮುಂದೆ ಬರುತ್ತಿದ್ದಾರೆ. ಶುಕ್ರವಾರ TV9 ಒಂದು ಲಾರಿಯಲ್ಲಿ ಎಣ್ಣೆ, ಬೇಳೆ, ಅಕ್ಕಿ, ಬಿಸ್ಕಿಟ್, ಅಫಜಲಪುರಕ್ಕೆ ಕಳಿಸಿದ ಬೆನ್ನಲ್ಲೇ ಇಂದು ನಗರದ ಸಹಕಾರ ನಗರದ ಹತ್ತಿರದ ತಿಂಡ್ಲು ಬಾಯ್ಸ್ ಅಸೋಸಿಯೇಶನ್ ಕಡೆಯವರು ಒಂದು ಲಾರಿ ತುಂಬಿದ ರೇಶನ್ ಕಳಿಸಲು ಮುಂದೆ ಬಂದಿದೆ.
ತಾವು ಮಾಡುತ್ತಿರುವ ಸಾಮಾಜಿಕ ಸೇವೆ ಕುರಿತು ವಿವರ ನೀಡಿದ ತಿಂಡ್ಲು ಬಾಯ್ಸ್ ಅಸೋಸಿಯೇಶನ್ನ ಆನಂದ್ ಅವರು ಕಳೆದ ನಾಲ್ಕೈದು ತಿಂಗಳುಗಳಿಂದ ಲಾಕ್ ಡೌನ್ ಸಮಯದಲ್ಲಿ ಹೇಗೆ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂಬುದರ ವಿವರ ನೀಡಿದರು. ಈ ಸಂದರ್ಭದಲ್ಲಿ 6,000 ಜನರಿಗೆ ಊಟದ ಕಿಟ್ ನೀಡಿದ್ದಾರೆ. ತಮ್ಮ ಸುತ್ತ ಮುತ್ತ ಇರುವ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಕೋವಿಡ್ ನಿಂದ ಸತ್ತ 18 ಜನರ ಅಂತ್ಯ ಸಂಸ್ಕಾರವನ್ನು ಸ್ವಯಂ ಸೇವಕರು ಮಾಡಿದ್ದಾರೆ.
ಈಗ ಉತ್ತರ ಕರ್ನಾಟಕದ ಜನತೆಗೆ ನೆರವಾಗಲು TV9 ಜತೆ ಕೈ ಜೋಡಿಸಿದ್ದಾರೆ.