ದೇವನಹಳ್ಳಿಯ ಕೋಟೆ‌ ನಾಗದೇವತೆ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ

ಪಟ್ಟಣದ ಕೋಟೆ ನಾಗದೇವತೆ ದೇವಾಲಯದ ಬಾಗಿಲು ಮುರಿದು ಹುಂಡಿ ಹಣ ದೋಚಲು ಯತ್ನ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ದೇವನಹಳ್ಳಿಯ ಕೋಟೆ‌ ನಾಗದೇವತೆ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ
ದೇವಾಲಯ

Updated on: Mar 29, 2021 | 12:38 PM

ದೇವನಹಳ್ಳಿ: ಪಟ್ಟಣದ ಕೋಟೆ ನಾಗದೇವತೆ ದೇವಾಲಯದ ಬಾಗಿಲು ಮುರಿದು ಹುಂಡಿ ಹಣ ದೋಚಲು ಯತ್ನ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಕಳೆದ ರಾತ್ರಿ ಕಳ್ಳರು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ್ದಾರೆ.

ದೇವಸ್ಥಾನದ ಒಳಗೆ ನುಗ್ಗಿ ಹುಂಡಿಯನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ವಿಫಲವಾದ ಕಾರಣ ದೇವಸ್ಥಾನದಲ್ಲಿದ್ದ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯ ಪರಿಶೀಲನೆ

ಇದನ್ನೂ ಓದಿ: ದೇವಸ್ಥಾನವನ್ನೇ ಕರ್ಮಭೂಮಿ ಮಾಡಿಕೊಂಡಿದ್ದ ಖತರ್ನಾಕ್​ ಕಳ್ಳರ ಗ್ಯಾಂಗ್ ಅರೆಸ್ಟ್​ !

ಆಲಮೇಲ ಪಟ್ಟಣದ 2 ದೇವಸ್ಥಾನ ಮತ್ತು 8 ಮನೆಗಳಲ್ಲಿ ಕಳ್ಳತನ