‘ಸ್ಮಾರ್ಟ್‌’ ಅಲ್ಲದ ಕಾಮಗಾರಿ: ಸೊಗಡು ಶಿವಣ್ಣ ಗರಂ, ಎಚ್ಚೆತ್ತ ಶಾಲಿನಿ ರಜನೀಶ್

ತುಮಕೂರು: ಸ್ಮಾಟ್ ಸಿಟಿ ನಿರ್ಮಾಣ ಕಾರ್ಯದಲ್ಲಿನ ನ್ಯೂನ್ಯತೆಗಳ ಬಗ್ಗೆ ಇದೀಗ ತುಮಕೂರು ಜಿಲ್ಲಾ ಉಸ್ತುವಾರಿ ಕಾಯ೯ದಶಿ೯ ಶಾಲಿನಿ ರಜನೀಶ್ ಎಚ್ಚೆತ್ತಿದ್ದಾರೆ. ಇಂಜಿನಿಯರ್ ಕೆಲಸಕ್ಕೆ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ತುಮಕೂರು ಸ್ಮಾಟ್ ಸಿಟಿ ಕಳಪೆ ಕಾಮಗಾರಿ ಪತ್ತೆಗೆ ತಂಡ ರಚಿಸಿದ್ದಾರೆ. ನಾಲ್ವರು ಸದಸ್ಯರ ಸ್ವತಂತ್ರ್ಯ ಅನುಷ್ಠಾನ ಮೌಲ್ಯಮಾಪನ ಮತ್ತು ಯೋಜನಾ ತಂಡ ರಚನೆ ಮಾಡಿದ್ದು, ಗುಣಮಟ್ಟ ಕಾಮಗಾರಿಗಳ ವಿವರಕ್ಕೆ ಸೂಚನೆ ನೀಡಿದ್ದಾರೆ. ಡಿಸೆಂಬರ್ 16ಕ್ಕೆ ವರದಿ ನೀಡುವಂತೆ ತಂಡದ ಅಧ್ಯಕ್ಷ ಜೈಪ್ರಕಾಶ್​ಗೆ ಆದೇಶಿಸಿದ್ದಾರೆ. ಸ್ಮಾರ್ಟ್‌ […]

‘ಸ್ಮಾರ್ಟ್‌’ ಅಲ್ಲದ ಕಾಮಗಾರಿ: ಸೊಗಡು ಶಿವಣ್ಣ ಗರಂ, ಎಚ್ಚೆತ್ತ ಶಾಲಿನಿ ರಜನೀಶ್
ಸಾಧು ಶ್ರೀನಾಥ್​

Updated on: Nov 30, 2019 | 6:08 PM

ತುಮಕೂರು: ಸ್ಮಾಟ್ ಸಿಟಿ ನಿರ್ಮಾಣ ಕಾರ್ಯದಲ್ಲಿನ ನ್ಯೂನ್ಯತೆಗಳ ಬಗ್ಗೆ ಇದೀಗ ತುಮಕೂರು ಜಿಲ್ಲಾ ಉಸ್ತುವಾರಿ ಕಾಯ೯ದಶಿ೯ ಶಾಲಿನಿ ರಜನೀಶ್ ಎಚ್ಚೆತ್ತಿದ್ದಾರೆ. ಇಂಜಿನಿಯರ್ ಕೆಲಸಕ್ಕೆ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದ್ದು, ತುಮಕೂರು ಸ್ಮಾಟ್ ಸಿಟಿ ಕಳಪೆ ಕಾಮಗಾರಿ ಪತ್ತೆಗೆ ತಂಡ ರಚಿಸಿದ್ದಾರೆ.

ನಾಲ್ವರು ಸದಸ್ಯರ ಸ್ವತಂತ್ರ್ಯ ಅನುಷ್ಠಾನ ಮೌಲ್ಯಮಾಪನ ಮತ್ತು ಯೋಜನಾ ತಂಡ ರಚನೆ ಮಾಡಿದ್ದು, ಗುಣಮಟ್ಟ ಕಾಮಗಾರಿಗಳ ವಿವರಕ್ಕೆ ಸೂಚನೆ ನೀಡಿದ್ದಾರೆ. ಡಿಸೆಂಬರ್ 16ಕ್ಕೆ ವರದಿ ನೀಡುವಂತೆ ತಂಡದ ಅಧ್ಯಕ್ಷ ಜೈಪ್ರಕಾಶ್​ಗೆ ಆದೇಶಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಕಳಪೆ ಕಾಮಗಾರಿ ಕಂಡು ಮಾಜಿ ಸಚಿವ ಸೊಗಡು ಶಿವಣ್ಣ ಸಿಡಿದೆದ್ದಿದ್ದರು. ಅಶೋಕ ರಸ್ತೆಯ ಚರ್ಚ್ ಸರ್ಕಲ್‌ ಬಳಿಯಿರುವ ಡಕ್ಟಿಂಗ್ ಲೈನ್ ಸ್ಪೇಸರ್ಸ್‌ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದರು ಸ್ಮಾರ್ಟ್ ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ಇದರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಗರಂ ಆಗಿದ್ದರು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು.

Published On - 6:06 pm, Sat, 30 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us