ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!

ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು‌. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಎಂದಿದ್ದಾರೆ

ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!
ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಟ!
Edited By: ಸಾಧು ಶ್ರೀನಾಥ್​

Updated on: Jun 09, 2023 | 11:34 AM

ಎಷ್ಟೋ ಕಡೆ ಒಬ್ಬರೇ ಶಿಕ್ಷಕ. ಒಂದೇ ಕೊಠಡಿ. ಐದು ತರಗತಿಗಳು! ಎಂಬಂತಹ ಪರಿಸ್ಥಿತಿಯಿದೆ. ಆದರೆ ಆಯಕಟ್ಟಿನ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳು ಕಿತ್ತಾಡಿಕೊಂಡ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ‌ ನಡೆದಿದೆ. ಒಬ್ಬರು‌ ಅಧಿಕಾರಿ ಪ್ರಮೋಷನ್ ಆಗಿ ಡಿಡಿಪಿಐ ದಿಂದ ಜೆಡಿ ಆಗಿ ಹೋಗಬೇಕು, ಇನ್ನೊಬ್ಬರು ಬಿಇಒ ದಿಂದ ಪ್ರಮೋಷನ್ ಆಗಿ ಡಿಡಿಪಿಐ (DDPI) ಆಗಬೇಕು. ಆದರೆ ಇಬ್ಬರಿಗೂ ಸರ್ಕಾರ ಸರಿಯಾಗಿ ದಿನಾಂಕ ತಿಳಿಸದೇ ಪೋಸ್ಟಿಂಗ್ ಸೂಚಿಸಿದ್ದೇ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.’ ವಿಜಯಪುರ (Vijayapura) ನಗರದ ಡಿಡಿಪಿಐ ಕಚೇರಿಯಲ್ಲಿ ಇಂದು ಭಾರೀ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿದ್ದು. ಹೌದು ವಿಜಯಪುರ ಡಿಡಿಪಿಐ ಆಗಿದ್ದ ಉಮೇಶ ಶಿರಹಟ್ಟಿ ಮಠ ಅವರಿಗೆ ಸರ್ಕಾರ ಜಾಯಿಂಟ್​ ಡೈರೆಕ್ಟರ್​​ (ಜೆಡಿ) ಆಗಿ ಪ್ರಮೋಷನ್ ನೀಡಿ ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಅದೇ ತರಹ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ ನಾಯಕ ಅವರಿಗೆ ಡಿಡಿಪಿಐ ಆಗಿ ಪ್ರಮೋಷನ್ ಮಾಡಿ ವಿಜಯಪುರ ವರ್ಗಾವಣೆ ಮಾಡಿದ್ದಾರೆ.

ಆದರೆ ಇವರಿಗೆ ಎಂದಿನಿಂದ ಚಾರ್ಜ್​​ ತೆಗೆದುಕೊಳ್ಳಬೇಕು ಎಂದು ದಿನಾಂಕ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು‌. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಜುಲೈ 1 ನೇ ತಾರಿಖಿಗೆ ತಾನು ಜೆಡಿ ಆಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡುವ ಕಾರಣ ಅಲ್ಲಿಯ ವರೆಗೂ ಹುದ್ದೆ ಖಾಲಿ ಇಲ್ಲ‌, ಅಲ್ಲಿಯವರೆಗೂ ನಾನೇ ವಿಜಯಪುರ ಡಿಡಿಪಿಐ ಎಂದು ಹೇಳಿದ್ದೇ ಜಟಾಪಟಿಗೆ ಕಾರಣವಾಗಿದೆ.

Also Read: ಇಡೀ ಶಾಲೆಗೆ ಒಬ್ಬ ಶಿಕ್ಷಕ-ಒಂದೇ ಕೊಠಡಿ-ಐದು ತರಗತಿ- 9 ಮಕ್ಕಳು! ಯಾರಿಗೆ ಹೇಗೆ ಯಾವಾಗ ಪಾಠ ಮಾಡಬಹುದು ಊಹೆ ನಿಮಗೇ ಬಿಟ್ಟಿದ್ದು!

ಸದ್ಯ ಬೆಂಗಳೂರಿನಲ್ಲಿ ಜೆಡಿ ಆಗಿರುವ ಅಧಿಕಾರಿ ಜೂನ್ 30 ಕ್ಕೆ ವಯೋ ನಿವೃತ್ತಿ ಹೊಂದಲಿದ್ದಾರೆ. ಆ ಬಳಿಕ ಆ ಸ್ಥಾನ ಖಾಲಿಯಾಗಲಿದೆ. ಬಳಿಕ ಜುಲೈ 1 ರಂದು ಉಮೇಶ ಶಿರಹಟ್ಟಿ ಮಠ ಅವರು ಜೆಡಿಯಾಗಿ ಅಧಿಕಾರಿ ಸ್ವೀಕಾರ ಮಾಡುವರು. ಅಲ್ಲಿಯವರೆಗೆ ನಾನೇ ವಿಜಯಪುರ ಡಿಡಿಪಿಐ ಎಂಬುದು ಉಮೇಶ ಶಿರಹಟ್ಟಿ ಮಠ ಅವರ ಮಾತು, ಇನ್ನೊಂದೆಡೆ ಯುವರಾಜ ನಾಯಕ ತಮ್ಮ‌ ಬೆಂಬಲಿಗರೊಂದಿಗೆ ಇಂದು ಡಿಡಿಪಿಐ ಆಗಿ ಅಧಿಕಾರ ಸ್ವೀಕಾರ ಮಾಡಲು ಬಂದಿದ್ದರು. ಅವರಿಗೆ ಅಧಿಕಾರ ಸಿಗದ ಕಾರಣ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ಕಾರ ಸೂಚಿಸಿದಂತೆ ನಾನು ಇಂದು ಅಧಿಕಾರ ಸ್ವೀಕರಿಸಲು ಬಂದಿದ್ದೆ, ಈ ವಿಚಾರವಾಗಿ ನಾನು ಸರ್ಕಾರಕ್ಕೆ‌ ಮನವಿ ಮಾಡುವೆ ಎಂದು‌ ಹೇಳಿ ಯುವರಾಜ‌ ನಾಯಕ ತಮ್ಮ‌ ಬೆಂಬಲಿಗರೊಂದಿಗೆ ವಾಪಸ್ ತೆರಳಿದರು.

ಇನ್ನು ಸರ್ಕಾರ ತನ್ನ ಆದೇಶದಲ್ಲಿ ಉಮೇಶ ಶಿರಹಟ್ಟಿಮಠ ಅವರ ಮುಂಬಡ್ತಿಯಿಂದ ತೆರವಾದ ಸ್ಥಾನ‌ ಅಂತಾ ಸ್ಪಷ್ಟವಾಗಿ‌ ನಮೂದು ಮಾಡಿದೆ. ಆದರೆ ಯುವರಾಜ ನಾಯಕ ಅವರಿಗೆ ಮಾತ್ರ ಕುರ್ಚಿಯನ್ನು ಬೇಗ ಹಿಡಿದುಕೊಳ್ಳಲು ವಿಜಯಪುರಕ್ಕೆ ಆಗಮಿಸಿ‌ ಈಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹೋಗಿದ್ದಾರೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ ಕೆಲಹೊತ್ತು ವಿಜಯಪುರ ಡಿಡಿಪಿಐ ಕಚೇರಿಯಲ್ಲಿ ಗೊಂದಲ ಸೃಷ್ಟಿ ಮಾಡಿತ್ತು.

ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Fri, 9 June 23

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us