ರೋಹಿಣಿ ಸಿಂಧೂರಿ ಹೆಸರಲ್ಲಿ ಇಲ್ಲಿ ನಡೆಯುತ್ತೆ ವಾರಕ್ಕೊಮ್ಮೆ ಪೂಜೆ

ಹಾಸನ: ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ವರ್ಷ ಕಳೆದರೂ ಇನ್ನೂ ಅಲ್ಲಿನ ಜನ ಅವರನ್ನು ಮರೆತಿಲ್ಲ. ಹಾಸನದ ಇತಿಹಾಸ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ವಿರೂಪಾಕ್ಷೇಶ್ವರ ದೇವಾಲಯದ ಅರ್ಚಕರು ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ಅಭಿಷೇಕ, ವಿಶೇಷಪೂಜೆ ಮಾಡುತ್ತಾ ಬಂದಿದ್ದಾರೆ. ನೂರಾರು ವರ್ಷಗಳಿಂದ ಪಾಳುಬಿದ್ದ ದೇವಾಲಯವನ್ನು ರೋಹಿಣಿ ಸಿಂಧೂರಿ ತಮ್ಮ ಅವಧಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬ ನೆನಪಿನಲ್ಲಿ ಇಲ್ಲಿ […]

ರೋಹಿಣಿ ಸಿಂಧೂರಿ ಹೆಸರಲ್ಲಿ ಇಲ್ಲಿ ನಡೆಯುತ್ತೆ ವಾರಕ್ಕೊಮ್ಮೆ ಪೂಜೆ
ಸಾಧು ಶ್ರೀನಾಥ್​

Updated on: Nov 26, 2019 | 1:54 PM

ಹಾಸನ: ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ವರ್ಷ ಕಳೆದರೂ ಇನ್ನೂ ಅಲ್ಲಿನ ಜನ ಅವರನ್ನು ಮರೆತಿಲ್ಲ. ಹಾಸನದ ಇತಿಹಾಸ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.

ವಿರೂಪಾಕ್ಷೇಶ್ವರ ದೇವಾಲಯದ ಅರ್ಚಕರು ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ಅಭಿಷೇಕ, ವಿಶೇಷಪೂಜೆ ಮಾಡುತ್ತಾ ಬಂದಿದ್ದಾರೆ. ನೂರಾರು ವರ್ಷಗಳಿಂದ ಪಾಳುಬಿದ್ದ ದೇವಾಲಯವನ್ನು ರೋಹಿಣಿ ಸಿಂಧೂರಿ ತಮ್ಮ ಅವಧಿಯಲ್ಲಿ 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬ ನೆನಪಿನಲ್ಲಿ ಇಲ್ಲಿ ಪ್ರತೀ ವಾರ ಪೂಜೆ ಮಾಡಲಾಗುತ್ತಿದೆ.

ರೋಹಿಣಿ ಹೆಸರಲ್ಲಿ ಗಿಡನೆಟ್ಟು ಆರೈಕೆ :
ಐತಿಹಾಸಿಕ ದೇಗುಲ ದುರಸ್ಥಿ ಮಾಡಿಸಿದ ಸ್ಮರಣಾರ್ಥ ಈ ಸೇವೆ ಎಂದು ರೋಹಿಣಿ ಗುಣಗಾನ ಮಾಡಿದ್ದಾರೆ ಇಲ್ಲಿನ ಅರ್ಚಕ ವರ್ಗ. ಅಷ್ಟೇ ಅಲ್ಲದೆ ದೇವಾಲಯ ಆವರಣದಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಗಿಡನೆಟ್ಟು ಅರ್ಚಕರು ಆರೈಕೆ ಮಾಡುತ್ತಿದ್ದಾರೆ.

 

Published On - 1:29 pm, Mon, 25 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us