AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತ ಸೇವಾಲಾಲ್ ಜಯಂತಿಗೆ ಹೊಸ ಮೆರುಗು: ಡಿಜೆ ಸದ್ದಿಗೆ ಲಲನೆಯರ ಸ್ಟೆಪ್ಸ್​

ಯಾದಗಿರಿ: ತಾವಾಯ್ತು.. ತಮ್ಮ ಕೆಲ್ಸ ಆಯ್ತು. ತಮ್ಮ ತಾಂಡಾ ಆಯ್ತು.. ಇಷ್ಟೇ ಅವ್ರ ಬದುಕು.. ಆದ್ರೆ ವರ್ಷಕ್ಕೊಮ್ಮೆ ಅವ್ರನ್ನೆಲ್ಲಾ ಒಟ್ಟುಗೂಡಿಸೋಕೇ ಅಂತಾನೆ ಸೇವಾಲಾಲ್ ಜಯಂತಿ ಬರುತ್ತೆ. ಆ ಜಯಂತಿಯಲ್ಲಿ ಮಾತ್ರ ಎಲ್ರೂ ಒಟ್ಟಿಗೆ ಸೇರಿ ಸಂಭ್ರಮಿಸ್ತಾರೆ. ಆದ್ರೆ ಆ ಸಂಭ್ರಮ ಅವ್ರಿಗೆ ಮಾತ್ರವಲ್ದೇ ನೋಡೋರಿಗೂ ಖುಷಿ ಕೊಡುತ್ತೆ. ಫುಲ್ ಜೋಶ್.. ಎಲ್ಲರ ಮುಖದಲ್ಲೂ ಖುಷಿಯೋ ಖುಷಿ. ವರ್ಷಕ್ಕೊಮ್ಮೆ ಸಿಗೋ ಇಂಥಾ ಚಾನ್ಸ್​ನ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ. ಹಿಂಗಾಗೇ ಆಗಿದ್ದಾಗ್ಲಿ ಅಂತಾ ಎಲ್ರೂ ಕುಣಿದು ಕುಪ್ಪಳಿಸ್ತಿದ್ರು. ಯಾದಗಿರಿ ಜಿಲ್ಲೆ […]

ಸಂತ ಸೇವಾಲಾಲ್ ಜಯಂತಿಗೆ ಹೊಸ ಮೆರುಗು: ಡಿಜೆ ಸದ್ದಿಗೆ ಲಲನೆಯರ ಸ್ಟೆಪ್ಸ್​
ಸಾಧು ಶ್ರೀನಾಥ್​
|

Updated on: Feb 16, 2020 | 4:04 PM

Share

ಯಾದಗಿರಿ: ತಾವಾಯ್ತು.. ತಮ್ಮ ಕೆಲ್ಸ ಆಯ್ತು. ತಮ್ಮ ತಾಂಡಾ ಆಯ್ತು.. ಇಷ್ಟೇ ಅವ್ರ ಬದುಕು.. ಆದ್ರೆ ವರ್ಷಕ್ಕೊಮ್ಮೆ ಅವ್ರನ್ನೆಲ್ಲಾ ಒಟ್ಟುಗೂಡಿಸೋಕೇ ಅಂತಾನೆ ಸೇವಾಲಾಲ್ ಜಯಂತಿ ಬರುತ್ತೆ. ಆ ಜಯಂತಿಯಲ್ಲಿ ಮಾತ್ರ ಎಲ್ರೂ ಒಟ್ಟಿಗೆ ಸೇರಿ ಸಂಭ್ರಮಿಸ್ತಾರೆ. ಆದ್ರೆ ಆ ಸಂಭ್ರಮ ಅವ್ರಿಗೆ ಮಾತ್ರವಲ್ದೇ ನೋಡೋರಿಗೂ ಖುಷಿ ಕೊಡುತ್ತೆ. ಫುಲ್ ಜೋಶ್.. ಎಲ್ಲರ ಮುಖದಲ್ಲೂ ಖುಷಿಯೋ ಖುಷಿ. ವರ್ಷಕ್ಕೊಮ್ಮೆ ಸಿಗೋ ಇಂಥಾ ಚಾನ್ಸ್​ನ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ. ಹಿಂಗಾಗೇ ಆಗಿದ್ದಾಗ್ಲಿ ಅಂತಾ ಎಲ್ರೂ ಕುಣಿದು ಕುಪ್ಪಳಿಸ್ತಿದ್ರು.

ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣ ನಿನ್ನೆ ಅಕ್ಷರಶಃ ಬಂಜಾರ ಮಯವಾಗಿತ್ತು. ಎತ್ತ ನೋಡಿದ್ರು ಕಲರ್ ಫುಲ್ ಉಡುಗೆ ತೊಟ್ಟ ಯುವಕ ಯುವತಿಯರೆ ಕಾಣ್ತಿದ್ರು. ಡಿಜೆ ಸೌಂಡಿಗೆ ಮನಬಿಚ್ಚಿ ಕುಣಿದಿದ್ರು. ಸಂತ ಸೇವಾಲಾಲ್​ರ 281ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ಸೇವಾಲಾಲ್ ಭಾವಚಿತ್ರವನ್ನ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಸರ್ಕಾರಿ ಫ್ರೌಡಶಾಲೆಯ ಮೈದಾನದವರೆಗೆ ಮೆರವಣಿಗೆ ಮಾಡಲಾಯ್ತು.

ಮೆರವಣಿಗೆಗೆ ರಂಗು ನೀಡಿದ ಗೋಧಿ ಸಸಿ: ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ತಾಂಡಾಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗಿಯಾಗಿದ್ರು. ಅದ್ರಲ್ಲೂ ಕಲರ್​ಫುಲ್ ಡ್ರೆಸ್​ಗಳಲ್ಲಿ ರೆಡಿಯಾಗಿ ಕುಂಭ ಮತ್ತು ಸಸಿಗಳನ್ನ ಹೊತ್ತು ಸಾಗುತ್ತಿದ್ದ ನೋಟವಂತೂ ಎಲ್ಲರ ಗಮನ ಸೆಳೆದಿತ್ತು. ಇನ್ನು ಜಯಂತ್ಯೋತ್ಸವ ದಿನಕ್ಕಿಂತ ಮೊದಲು 21 ದಿನಗಳ ಕಾಲ ಮಹಿಳೆಯರು ಉಪವಾಸವಿದ್ದು ಗೋಧಿ ಸಸಿ ಬೆಳೆಯುತ್ತಾರೆ. ಜಯಂತಿ ದಿನ ಗೋದಿ ಸಸಿಯನ್ನ ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆ ರಂಗು ನೀಡುತ್ತಾರೆ. ಪ್ರತಿಯೊಂದು ತಾಂಡಾದ ಹೆಣ್ಮಕ್ಕಳು ಬಣ್ಣದ ಬಟ್ಟೆಗಳನ್ನ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ.

ಇನ್ನೊಂದು ವಿಶೇಷ ಅಂದ್ರೆ ಒಂದು ತಾಂಡಾದ ಯುವತಿಯರು ಧರಿಸುವ ಬಣ್ಣದ ಬಟ್ಟೆಯನ್ನ ಇನ್ನೊಂದು ತಾಂಡಾದ ಯುವತಿಯರು ಧರಿಸುವ ಹಾಗಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲಾ ತಾಂಡಾ ನಿವಾಸಿಗಳು ಒಂದೊಂದು ರೀತಿ ರೆಡಿಯಾಗಿರ್ತಾರೆ. ಜೊತೆಗೆ ನಾಸಿಕ್​ನಿಂದ ಬಂದಿದ್ದ ಡೋಲು ಟೀಂ ಕೂಡ ಇವ್ರ ಖುಷಿಯನ್ನ ಮತ್ತಷ್ಟು ಹೆಚ್ಚಿಸಿತ್ತು. ಸದ್ಯ ಸೇವಾಲಾಲ್ ಜಯಂತಿ ಹೆಸ್ರಲ್ಲಿ ಜಿಲ್ಲೆಯ ಎಲ್ಲಾ ತಾಂಡಾ ನಿವಾಸಿಗಳು ಒಟ್ಟಿಗೆ ಸೇರಿದ್ರು. ಕುಂಭ ಹಾಗೂ ಗೋಧಿ ಸಸಿ ಮೆರವಣಿಗೆ ಒಂದ್ಕಡೆಯಾದ್ರೆ ಕುಣಿದು ಕುಪ್ಪಳಿಸೋರ ನೋಟ ಮತ್ತಷ್ಟು ಖುಷಿ ಕೊಟ್ಟಿತ್ತು.

ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್