ಕಟಪಾಡಿಯಲ್ಲಿ ಭಜನಾ ಕೂಟ: ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ

ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು. ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು:  ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ […]

ಕಟಪಾಡಿಯಲ್ಲಿ ಭಜನಾ ಕೂಟ: ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಯುವ ಸಮೂಹ
ಸಾಧು ಶ್ರೀನಾಥ್​

Updated on: Nov 30, 2019 | 8:42 AM

ಉಡುಪಿ: ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ಯುವ ಸಮೂಹಕ್ಕಾಗಿ ಭಜನಾ ಕೂಟ ಆಯೋಜಿಸಲಾಗಿತ್ತು. ಈ ಭಜನಾ ಕೂಟದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಡ್ರೆಸ್ ತೊಟ್ಟು ಮಿರ ಮಿರ ಮಿಂಚಿದ್ರು. ಅಲ್ದೇ ತಾಳಕ್ಕೆ ತಕ್ಕಂತೆ ಯುವಕರು ಡ್ಯಾನ್ಸ್ ಮಾಡಿದ್ರು. ಇತ್ತ ದಾಸರ ಕೀರ್ತನೆಗಳಿಗೆ ಯುವತಿಯರು ನೃತ್ಯ ಮಾಡೋ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ರು.

ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು: 
ಇನ್ನು, ಯುವವಾಹಿನಿ ಸಂಘಟನೆಯವರು ವಿವಿಧ ತಂಡಗಳನ್ನು ಆಹ್ವಾನಿಸಿ ಕುಣಿತ, ಭಜನೆ ಏರ್ಪಡಿಸಿದ್ರು. ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಭಾವಪರವಶರಾಗಿ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದ್ರು. ದಾಸರ ಕೀರ್ತನೆಗಳನ್ನು ರಾಗವಾಗಿ ಹಾಡುತ್ತಾ, ಹೆಜ್ಜೆ ಹಾಕಿ ಮೈ ಮರೆತ್ರು. ಯುವಜನಾಂಗಕ್ಕೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮ ಆಯೋಜಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.

ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ನಿಂತು ಹಾಡಿದರೆ ದೇವರು ಕುಣಿವ. ಕುಣಿದು ಹಾಡಿದರೆ ದೇವರು ಒಲಿವ ಅನ್ನೋ ಮಾತಿದೆ. ಇಷ್ಟು ದಿನ ಟ್ರಿಪ್.. ಮೋಜು ಮಸ್ತಿ ಅನ್ಕೊಂಡು ಬ್ಯುಸಿ ಇದ್ದ ಯುವ ಸಮೂಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫುಲ್ ಥ್ರಿಲ್ ಆಗಿದ್ದಂತೂ ನಿಜ.

Published On - 8:42 am, Sat, 30 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us