ಕ್ವಾರಂಟೈನ್ ಸೀಲ್ ಇದ್ರೂ BMTC ಬಸ್​ ಹತ್ತಿ ಚಂದಾಪುರಕ್ಕೆ ಹೊರಟರು 24 ಮಂದಿ!

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ ಕೊರೊನಾ ವೈರಸ್​. ಹೆಮ್ಮಾರಿಯನ್ನು ತಡೆಯುವ ಸಲುವಾಗಿ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್​ ಸೀಲ್ ಹಾಕಲಾಗುತ್ತಿದೆ. ಇವರು ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕಿದೆ. ಆದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಸೀಲ್ ಇದ್ರೂ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಕೊರೊನಾ ಬಂದು ಬಿಎಂಟಿಸಿ ಸಿಬ್ಬಂದಿನ್ನ ಹಿಂಡಿ ಹಿಪ್ಪೆ ಮಾಡಿದ್ರೂ, BMTC ಸಿಬ್ಬಂದಿ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕ್ವಾರಂಟೈನ್ ಸೀಲ್ ಇದ್ರೂ ಒಂದೇ ಬಸ್​ನಲ್ಲಿ 24 ಮಂದಿ ಪ್ರಯಾಣ ಮಾಡಿದ್ದಾರೆ. ಕ್ವಾರಂಟೈನ್ ಸೀಲ್ ಒತ್ತಿಸಿಕೊಂಡಿದ್ರೂ […]

ಕ್ವಾರಂಟೈನ್ ಸೀಲ್ ಇದ್ರೂ  BMTC ಬಸ್​ ಹತ್ತಿ ಚಂದಾಪುರಕ್ಕೆ ಹೊರಟರು 24 ಮಂದಿ!
ಸಾಧು ಶ್ರೀನಾಥ್​

Updated on: Jun 29, 2020 | 3:50 PM

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ ಕೊರೊನಾ ವೈರಸ್​. ಹೆಮ್ಮಾರಿಯನ್ನು ತಡೆಯುವ ಸಲುವಾಗಿ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್​ ಸೀಲ್ ಹಾಕಲಾಗುತ್ತಿದೆ. ಇವರು ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕಿದೆ.

ಆದ್ರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಸೀಲ್ ಇದ್ರೂ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಕೊರೊನಾ ಬಂದು ಬಿಎಂಟಿಸಿ ಸಿಬ್ಬಂದಿನ್ನ ಹಿಂಡಿ ಹಿಪ್ಪೆ ಮಾಡಿದ್ರೂ, BMTC ಸಿಬ್ಬಂದಿ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಕ್ವಾರಂಟೈನ್ ಸೀಲ್ ಇದ್ರೂ ಒಂದೇ ಬಸ್​ನಲ್ಲಿ 24 ಮಂದಿ ಪ್ರಯಾಣ ಮಾಡಿದ್ದಾರೆ. ಕ್ವಾರಂಟೈನ್ ಸೀಲ್ ಒತ್ತಿಸಿಕೊಂಡಿದ್ರೂ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬಿಎಂಟಿಸಿಯ ಬೇಜವಾಬ್ದಾರಿ ತೋರಿಸುತ್ತಿದೆ.

ಕ್ವಾರಂಟೈನ್ ಸೀಲ್ ಇದ್ದವರನ್ನ ಬಸ್​ಗೆ ಹತ್ತಿಸಿಕೊಂಡಿರುವುದರಿಂದ ಮೊದಲಿಗೆ ಸಿಬ್ಬಂದಿಗೆ, ನಂತ್ರ ಇತರ ಪ್ರಯಾಣಿಕರಿಗೂ ಆಪತ್ತು ಎದುರಾಗ್ತಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಚಂದಾಪುರಕ್ಕೆ ಕ್ವಾರಂಟೈನ್ ಸೀಲ್ ಇರುವವರು ಪ್ರಯಾಣ ಮಾಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us