ಕತ್ರಿಗುಪ್ಪೆ: ಕೊರೊನಾ ಸೋಂಕಿತ ವೃದ್ಧನ ಮನೆಯಲ್ಲಿ 7 ಜನರಿಗೆ ಜ್ವರ, ಮುಂದೇನು?

ಬೆಂಗಳೂರು: ಕತ್ರಿಗುಪ್ಪೆಯ ಭುವನೇಶ್ವರಿ ನಗರದ ಕೊರೊನಾ ಸೋಂಕಿತ ವೃದ್ಧನ ಮನೆಯಲ್ಲಿ 7 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಬೆಳಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರು ಏನೂ ಪ್ರಯೋಜನವಾಗಿಲ್ಲ. ಕತ್ರಿಗುಪ್ಪೆಯ ಭುವನೇಶ್ವರಿ ನಗರದ ನಿವಾಸಿಯಾಗಿರುವ ವೃದ್ಧನಿಗೆ ಕೊರೊನಾ ಧೃಡಪಟ್ಟಿದ್ದು ವೃದ್ಧನನ್ನು ಕುಟುಂಬದವರೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಆದರೆ ಆದೇ ಕುಟುಂಬದ ಏಳು ಜನ ಜ್ವರ ಸೇರಿದಂತೆ ಕೆಲವು ಲಕ್ಷಣಗಳಿಂದ ಬಳಲುತ್ತಿದ್ದು, ನಿನ್ನೆ ಬೆಳಿಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಸೋಂಕಿತರ ಮನೆ ಇನ್ನೂ […]

ಕತ್ರಿಗುಪ್ಪೆ: ಕೊರೊನಾ ಸೋಂಕಿತ ವೃದ್ಧನ ಮನೆಯಲ್ಲಿ 7 ಜನರಿಗೆ ಜ್ವರ, ಮುಂದೇನು?
ಸಾಧು ಶ್ರೀನಾಥ್​

Updated on: Jul 18, 2020 | 11:59 AM

ಬೆಂಗಳೂರು: ಕತ್ರಿಗುಪ್ಪೆಯ ಭುವನೇಶ್ವರಿ ನಗರದ ಕೊರೊನಾ ಸೋಂಕಿತ ವೃದ್ಧನ ಮನೆಯಲ್ಲಿ 7 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಬೆಳಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರು ಏನೂ ಪ್ರಯೋಜನವಾಗಿಲ್ಲ.

ಕತ್ರಿಗುಪ್ಪೆಯ ಭುವನೇಶ್ವರಿ ನಗರದ ನಿವಾಸಿಯಾಗಿರುವ ವೃದ್ಧನಿಗೆ ಕೊರೊನಾ ಧೃಡಪಟ್ಟಿದ್ದು ವೃದ್ಧನನ್ನು ಕುಟುಂಬದವರೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಆದರೆ ಆದೇ ಕುಟುಂಬದ ಏಳು ಜನ ಜ್ವರ ಸೇರಿದಂತೆ ಕೆಲವು ಲಕ್ಷಣಗಳಿಂದ ಬಳಲುತ್ತಿದ್ದು, ನಿನ್ನೆ ಬೆಳಿಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಸೋಂಕಿತರ ಮನೆ ಇನ್ನೂ ಸ್ಯಾನಿಟೈಸ್ ಆಗಿಲ್ಲ, ಸೀಲ್ ಡೌನ್ ಮಾಡಿಲ್ಲ, ಕುಟುಂಬದವರ ಸ್ವಾಬ್ ಟೆಸ್ಟ್ ಪಡೆದಿಲ್ಲ, ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವ ಕುಟುಂಬಸ್ಥರು ತಮ್ಮಿಂದ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವ ಆತಂಕದಲ್ಲೇ ಜೀವನ ನೆಡೆಸುವಂತಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us