
ಬೆಂಗಳೂರು: ಸೋಂಕಿಗೆ ತುತ್ತಾಗುವುದಕ್ಕಿಂತ ಅದರ ಭೀತಿಗೇ ನಲುಗಿ ಹೋಗೋರೆ ಹೆಚ್ಚು. ಇಂಥ ಸಂದರ್ಭದಲ್ಲಿ ಸೋಂಕಿನಿಂದ ಗುಣಮುಖರಾದ 89 ವರ್ಷದ ವೃದ್ಧರೊಬ್ಬರು ತಮ್ಮ ಸಮಾನ ವಯಸ್ಕರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾದರು.
ಹೌದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 89ರ ಹರೆಯದ ವೃದ್ಧ ನಿನ್ನೆ ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದರು. ಈ ನಡುವೆ ಕೊರೊನಾ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಸೋಂಕು ತಗಲಿತು ಎಂದು ಯಾವುದೇ ಭೀತಿಗೆ ಒಳಗಾಗದೆ ಧೈರ್ಯದಿಂದ ಇರಿ ಎಂದು ಇತರೆ ವೃದ್ಧರಿಗೆ ಆತ್ಮಸ್ಥರ್ಯ ತುಂಬಿದ್ದಾರೆ.
Published On - 7:10 am, Sat, 25 July 20