ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ಲಂಚ ಕೇಳಿದ ಅಧಿಕಾರಿ ACB‌ ಬಲೆಗೆ

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ACB ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಮ್ಮ ತೋಟಗಾರಿಕೆ ಕಚೇರಿಯಲ್ಲಿ 14 ಸಾವಿರ ರೂಪಾಯಿ ಲಂಚ‌ ಪಡೆಯುತ್ತಿದ್ದ ವೇಳೆ ಹನುಮಂತಪ್ಪ ಸಿಕ್ಕಿಬಿದ್ದಿದ್ದಾರೆ. ಹನುಮಂತಪ್ಪ, ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ರೈತರ ಬಳಿ ಲಂಚದ ಬೇಡಿಕೆಯಿಟ್ಟಿದ್ದಾರೆ. ಪ್ರತಿ ಹೆಕ್ಟೆರ್ ಪಪ್ಪಾಯಿಗೆ 1.75 ಲಕ್ಷ ರೂ ಸಹಾಯ ಧನ ಸರ್ಕಾರದ ವತಿಯಿಂದ ಸಿಗುತ್ತದೆ. 2 ಹೆಕ್ಟೆರ್ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆಯಲು‌ ಸಹಾಯಧನ ಮಂಜೂರಾತಿಗೆ ಲಂಚ ಕೇಳಿದ್ದರಂತೆ. […]

ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ಲಂಚ ಕೇಳಿದ ಅಧಿಕಾರಿ ACB‌ ಬಲೆಗೆ
ಸಾಧು ಶ್ರೀನಾಥ್​ Edited By:

Updated on: Sep 08, 2020 | 7:13 PM

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ACB ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಮ್ಮ ತೋಟಗಾರಿಕೆ ಕಚೇರಿಯಲ್ಲಿ 14 ಸಾವಿರ ರೂಪಾಯಿ ಲಂಚ‌ ಪಡೆಯುತ್ತಿದ್ದ ವೇಳೆ ಹನುಮಂತಪ್ಪ ಸಿಕ್ಕಿಬಿದ್ದಿದ್ದಾರೆ.

ಹನುಮಂತಪ್ಪ, ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ರೈತರ ಬಳಿ ಲಂಚದ ಬೇಡಿಕೆಯಿಟ್ಟಿದ್ದಾರೆ. ಪ್ರತಿ ಹೆಕ್ಟೆರ್ ಪಪ್ಪಾಯಿಗೆ 1.75 ಲಕ್ಷ ರೂ ಸಹಾಯ ಧನ ಸರ್ಕಾರದ ವತಿಯಿಂದ ಸಿಗುತ್ತದೆ. 2 ಹೆಕ್ಟೆರ್ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆಯಲು‌ ಸಹಾಯಧನ ಮಂಜೂರಾತಿಗೆ ಲಂಚ ಕೇಳಿದ್ದರಂತೆ. ಖಚಿತ ಮಾಹಿತಿಯ ಮೇರೆಗೆ ACB ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us