ಅಪಘಾತ: ಭೀಕರವಾಗಿ ಗಾಯಗೊಂಡ ಗಿರ್ ಹಸುವಿಗೆ ಪುನರ್ಜನ್ಮ ನೀಡಿದ ವೈದ್ಯ ತಂಡ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದ ಗಿರ್ ತಳಿ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಚಿಕ್ಕಲಕಿ ಗ್ರಾಮದ ರೈತ ಪರಮಾನಂದ ತೇಲಿ ಅವರ ಹಸು ಇದಾಗಿದ್ದು, ಸತತವಾಗಿ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯರು ಮೂಕ ಪ್ರಾಣಿಯ ಜೀವ ಉಳಿಸಿ, ಧನ್ಯತೆ ಮೆರೆದಿದ್ದಾರೆ. ಅಪಘಾತ ಏನು: ಹೊಲದಿಂದ ಮನೆಗೆ ಬರುತ್ತಿದ್ದ ಗಿರ್ ಹಸುವಿನ ಮೇಲೆ ವಿಜಯಪುರ ಜಮಖಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದಿತ್ತು. ಹಸುವಿನ ಮೂರು ಪಕ್ಕೆಲುಬುಗಳು ಮುರಿದುಹೋಗಿದ್ದವು. ತಲೆ ಮತ್ತು ಹೊಟ್ಟೆಗೆ […]

ಅಪಘಾತ: ಭೀಕರವಾಗಿ ಗಾಯಗೊಂಡ ಗಿರ್ ಹಸುವಿಗೆ ಪುನರ್ಜನ್ಮ ನೀಡಿದ ವೈದ್ಯ ತಂಡ
ಸಾಧು ಶ್ರೀನಾಥ್​

Updated on: Aug 07, 2020 | 11:44 AM

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದ ಗಿರ್ ತಳಿ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಚಿಕ್ಕಲಕಿ ಗ್ರಾಮದ ರೈತ ಪರಮಾನಂದ ತೇಲಿ ಅವರ ಹಸು ಇದಾಗಿದ್ದು, ಸತತವಾಗಿ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯರು ಮೂಕ ಪ್ರಾಣಿಯ ಜೀವ ಉಳಿಸಿ, ಧನ್ಯತೆ ಮೆರೆದಿದ್ದಾರೆ.

ಅಪಘಾತ ಏನು: ಹೊಲದಿಂದ ಮನೆಗೆ ಬರುತ್ತಿದ್ದ ಗಿರ್ ಹಸುವಿನ ಮೇಲೆ ವಿಜಯಪುರ ಜಮಖಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದಿತ್ತು. ಹಸುವಿನ ಮೂರು ಪಕ್ಕೆಲುಬುಗಳು ಮುರಿದುಹೋಗಿದ್ದವು. ತಲೆ ಮತ್ತು ಹೊಟ್ಟೆಗೆ ಭಾರಿ ಗಾಯಗಳಾಗಿದ್ದವು. ವೈದ್ಯರ ತಂಡವೊಂದು ವಿಷಯ ತಿಳಿದು, ತಕ್ಷಣ ಸ್ಥಳಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿತ್ತು. ತೊದಲಬಾಗಿ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಅನೀಲ ಸಿಂಧೂರ, ರಮೇಶ ಗಾರವಾಡ ಹಾಗೂ ಸಿಬ್ಬಂದಿಯೇ ಆ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಪುನರ್ಜನ್ಮ ನೀಡಿದ ತಂಡ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us