AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಿ ತೆಗೆಯುವಾಗ ಕುಸಿದ ಪುರಾತನ ಮಂಟಪ: ಒಬ್ಬ ನಿಧಿಗಳ್ಳ ಸ್ಥಳದಲ್ಲೆ ಸಾವು.. ಎಲ್ಲಿ?

ಬೆಂಗಳೂರು: ನಿಧಿ ತೆಗೆಯಲು ಬಂದ ವೇಳೆ ಪುರಾತನ ಕಾಲದ ಮಂಟಪ ಕುಸಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ಕಳೆದ ರಾತ್ರಿ 8 ಜನರ ತಂಡ ನಿಧಿ ತೆಗೆಯಲು ದೇವಸ್ಥಾನದ ಬಳಿ ಬಂದಿದ್ದಾರೆ. ಈ ವೇಳೆ ಭೂಮಿ ಅಗೆತದ ತೀವ್ರತೆಯಿಂದ ಪುರಾತನ ಕಾಲದ ಮಂಟಪ ಕುಸಿದು ಓರ್ವ ಪಟ್ಟಿದ್ದಾನೆ. ಹಿಂಡಿಗನಾಳ ಗ್ರಾಮದ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟ ನಿಧಿಗಳನಾಗಿದ್ದು, ಆತನ ಜೊತೆಯಲ್ಲಿದ್ದ ಶ್ರೀನಿವಾಸ್, ಮಂಜುನಾಥ್ ಮತ್ತು ಸಬಾಸಿನ್ […]

ನಿಧಿ ತೆಗೆಯುವಾಗ ಕುಸಿದ ಪುರಾತನ ಮಂಟಪ: ಒಬ್ಬ ನಿಧಿಗಳ್ಳ ಸ್ಥಳದಲ್ಲೆ ಸಾವು.. ಎಲ್ಲಿ?
ಸಾಧು ಶ್ರೀನಾಥ್​
|

Updated on: Aug 07, 2020 | 10:51 AM

Share

ಬೆಂಗಳೂರು: ನಿಧಿ ತೆಗೆಯಲು ಬಂದ ವೇಳೆ ಪುರಾತನ ಕಾಲದ ಮಂಟಪ ಕುಸಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ಕಳೆದ ರಾತ್ರಿ 8 ಜನರ ತಂಡ ನಿಧಿ ತೆಗೆಯಲು ದೇವಸ್ಥಾನದ ಬಳಿ ಬಂದಿದ್ದಾರೆ. ಈ ವೇಳೆ ಭೂಮಿ ಅಗೆತದ ತೀವ್ರತೆಯಿಂದ ಪುರಾತನ ಕಾಲದ ಮಂಟಪ ಕುಸಿದು ಓರ್ವ ಪಟ್ಟಿದ್ದಾನೆ.

ಹಿಂಡಿಗನಾಳ ಗ್ರಾಮದ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟ ನಿಧಿಗಳನಾಗಿದ್ದು, ಆತನ ಜೊತೆಯಲ್ಲಿದ್ದ ಶ್ರೀನಿವಾಸ್, ಮಂಜುನಾಥ್ ಮತ್ತು ಸಬಾಸಿನ್ ಎಂಬುವನಿಗೆ ಗಂಭೀರ ಗಾಯಗಳಾಗಿವೆ.

ಘಟನೆ ಸಂಬವಿಸುತ್ತಿದ್ದಂತೆ ರಕ್ಷಣೆಗಾಗಿ ನಿಧಿಗಳ್ಳರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಆಂಬುಲೆನ್ಸ್ ಸಿಬ್ಬಂದಿ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆ ತಿಳಿದು ಉಳಿದವರು ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಂದಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.