ಪರಪ್ಪನ ಅಗ್ರಹಾರಕ್ಕೆ ಕೊರೊನಾ ಕಂಟಕ: ಮತ್ತೆ 30 ಕೈದಿಗಳಿಗೆ ಸೋಂಕು ದೃಢ

ಬೆಂಗಳೂರು: ರಕ್ಕಸ ಕೊರೊನಾದ ಕರಾಳತೆ ಮಿತಿ ಮೀರುತ್ತಿದೆ. ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಿಟ್ಟು ಬಿಡದೆ ಕಾಡ್ತಾಯಿದೆ. ಕಳೆದ ಒಂದು ವಾರದ‌ ಹಿಂದೆ ಜೈಲಿನ ಸಿಬ್ಬಂದಿ ಸೇರಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಮತ್ತೆ ಜೈಲಿನ 30 ಕೈದಿಗಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಇತ್ತೀಚೆಗೆ ಜೈಲಿಗೆ ಬಂದಿದ್ದ 80 ಕೈದಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ಪೈಕಿ 30 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ 30 […]

ಪರಪ್ಪನ ಅಗ್ರಹಾರಕ್ಕೆ ಕೊರೊನಾ ಕಂಟಕ: ಮತ್ತೆ 30 ಕೈದಿಗಳಿಗೆ ಸೋಂಕು ದೃಢ
ಪರಪ್ಪನ ಅಗ್ರಹಾರ ಜೈಲು
ಆಯೇಷಾ ಬಾನು Edited By:

Updated on: Jul 12, 2020 | 2:32 PM

ಬೆಂಗಳೂರು: ರಕ್ಕಸ ಕೊರೊನಾದ ಕರಾಳತೆ ಮಿತಿ ಮೀರುತ್ತಿದೆ. ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಿಟ್ಟು ಬಿಡದೆ ಕಾಡ್ತಾಯಿದೆ. ಕಳೆದ ಒಂದು ವಾರದ‌ ಹಿಂದೆ ಜೈಲಿನ ಸಿಬ್ಬಂದಿ ಸೇರಿ 26 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಮತ್ತೆ ಜೈಲಿನ 30 ಕೈದಿಗಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಇತ್ತೀಚೆಗೆ ಜೈಲಿಗೆ ಬಂದಿದ್ದ 80 ಕೈದಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ಪೈಕಿ 30 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ 30 ಕೈದಿಗಳನ್ನು ಹಜ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜೊತೆಗೆ, ಪರಪ್ಪನ ಅಗ್ರಹಾರ ಜೈಲಿಗೆ ಹೊಸ ಕೈದಿಗಳಿಗೆ ಎಂಟ್ರಿ ನಿಷೇಧಿಸಲಾಗಿದ್ದು ಜೈಲಿನ ಪಕ್ಕದಲ್ಲಿರುವ ಮತ್ತೊಂದು ಹೊಸ ಕಟ್ಟಡದಲ್ಲಿ ಕೈದಿಗಳಿಗೆ ಇರಲು ಅವಕಾಶ ಕಲ್ಪಿಸಲಾಗಿದೆ.

Published On - 11:38 am, Sun, 12 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us