ಗದಗ: ಹಸಿದು ಕಂಗಾಲಾಗಿದ್ದ ಪಕ್ಷಿಗಳಿಗೆ ಕೊರೊನಾದಂಥ ಸಂಕಷ್ಟದ ಸಮಯದಲ್ಲೂ ಆಹಾರ ನೀಡಿ ಮಾನವೀಯತೆ ಮೆರೆದ ಘಟನೆ ಗದಗನಲ್ಲಿ ನಡೆದಿದೆ.
ಹೌದು ಉತ್ತರ ಕರ್ನಾಟಕದ ಗದಗ ನಗರ ಭಾನುವಾರವಾಗಿದ್ದರಿಂದ ಲಾಕ್ಡೌನ್ ಆಗಿದೆ. ಹೀಗಾಗಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಹಾಗೇನೇ ಜನರು ಸಹ ಬಾಗಿಲು ಮುಚ್ಟಿಕೊಂಡು ಮನೆಯೊಳಗೆ ಇದ್ದಾರೆ.
ಈ ಸಮಯದಲ್ಲಿ ಆಹಾರ ಸಿಗದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಗಾಂಧಿ ವೃತ್ತದ ಬಳಿಯ ವ್ಯಕ್ತಿಯೊಬ್ಬರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಅದ್ರಲ್ಲೂ ಒಂದೇ ಕಾಲಿನ ಕಾಗೆಯೊಂದು ಆಹಾರಕ್ಕಾಗಿ ಪರದಾಡುತ್ತಿದ್ದದೃಶ್ಯ ಎಂಥವರ ಮನವನ್ನೂ ಕರಗಿಸುವಂತಿದೆ.