ಬೆಡ್​ ಇಲ್ಲ ಅಂದಿದ್ದಕ್ಕೆ KC ಜನರಲ್ ವೈದ್ಯರ ಮೇಲೆ ಹಲ್ಲೆಗೆ ಯತ್ನ

[lazy-load-videos-and-sticky-control id=”YOl1WmdpuyM”] ಬೆಂಗಳೂರು: ನಮ್ಮಲ್ಲಿ ಕೋವಿಡ್ ರೋಗಿಗಳಿಗೆ ಕೇವಲ 5 ಐಸಿಯು ಬೆಡ್ ಗಳಿದ್ದು ಈಗಾಗಲೇ ಎಲ್ಲಾ ಬೆಡ್ ಗಳು ಭರ್ತಿಯಾಗಿವೆ. ಹಾಗಾಗಿ ನಿಮ್ಮ ಸಂಬಂಧಿಯನ್ನು ಐಸಿಯು ಇರುವ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ಕೋವಿಡ್ ರೋಗಿಯೊಬ್ಬರು ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಈಗಾಗಲೇ ಇರುವ ಐಸಿಯು ಬೆಡ್ ಗಳು ರೋಗಿಗಳಿಂದ ಭರ್ತಿಯಾಗಿದ್ದು, ನಮ್ಮಲ್ಲಿ ಈಗ ಐಸಿಯು ಬೆಡ್ ಗಳು […]

ಬೆಡ್​ ಇಲ್ಲ ಅಂದಿದ್ದಕ್ಕೆ KC ಜನರಲ್ ವೈದ್ಯರ ಮೇಲೆ ಹಲ್ಲೆಗೆ ಯತ್ನ
ಸಾಧು ಶ್ರೀನಾಥ್​ Edited By:

Updated on: Jul 23, 2020 | 2:05 PM

[lazy-load-videos-and-sticky-control id=”YOl1WmdpuyM”]

ಬೆಂಗಳೂರು: ನಮ್ಮಲ್ಲಿ ಕೋವಿಡ್ ರೋಗಿಗಳಿಗೆ ಕೇವಲ 5 ಐಸಿಯು ಬೆಡ್ ಗಳಿದ್ದು ಈಗಾಗಲೇ ಎಲ್ಲಾ ಬೆಡ್ ಗಳು ಭರ್ತಿಯಾಗಿವೆ. ಹಾಗಾಗಿ ನಿಮ್ಮ ಸಂಬಂಧಿಯನ್ನು ಐಸಿಯು ಇರುವ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಕೋವಿಡ್ ರೋಗಿಯೊಬ್ಬರು ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಈಗಾಗಲೇ ಇರುವ ಐಸಿಯು ಬೆಡ್ ಗಳು ರೋಗಿಗಳಿಂದ ಭರ್ತಿಯಾಗಿದ್ದು, ನಮ್ಮಲ್ಲಿ ಈಗ ಐಸಿಯು ಬೆಡ್ ಗಳು ಖಾಲಿ ಇಲ್ಲ. ಹಾಗಾಗಿ ನೀವು ಬೇರೆ ಆಸ್ಪತ್ರೆಗೆ ನಿಮ್ಮವರನ್ನು ಕರೆದುಕೊಂಡು ಹೋಗಿ ಎಂದಿದ್ದಕ್ಕೆ ರೋಗಿಯ ಕುಟುಂಬಸ್ಥರು ಕೆ ಸಿ ಜನರಲ್ ಆಸ್ಪತ್ರೆ ವೈದ್ಯ ಸುರೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ವಿಷಯ ತಿಳಿದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಮಲ್ಲೇಶ್ವರಂ ಇನ್ಸ್ಪೆಕ್ಟರ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಘಟನೆ ನಿನ್ನೆಯೇ ಸಂಭವಿಸಿದ್ದು ವೈದ್ಯರು ಇದುವರೆಗೆ ಯಾಕೆ ದೂರು ನೀಡಿಲ್ಲ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ವಿಡಿಯೋ ಹೊರಬಂದ ಕಾರಣ ವಿಚಾರ ಬೆಳಕಿಗೆ ಬಂದಿದೆ.

Published On - 12:59 pm, Wed, 22 July 20

Loading...
Unable to load recommendations.
Follow Us