ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ ಶುರುವಾಯ್ತು ಭೀತಿ!

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ. ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ.. ಗಮನಾರ್ಹ ಸಂಗತಿಯೆಂದ್ರೆ ಈ […]

ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ  ಶುರುವಾಯ್ತು ಭೀತಿ!
ಸಾಧು ಶ್ರೀನಾಥ್​

Updated on: May 30, 2020 | 2:39 PM

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ.

ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ..
ಗಮನಾರ್ಹ ಸಂಗತಿಯೆಂದ್ರೆ ಈ ಹಿಂದೆ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್​ ಮೇಲೆ ಸ್ಥಳೀಯ ಪುಂಡರು ಭಾರೀ ಹಲ್ಲೆ ನಡೆಸಿ, ಪುಂಡಾಟ ಮೆರೆದಿದ್ದರು. ಅಲ್ಲಿಂದೀಚೆಗೆ ಪೊಲೀಸರು ಪಾದರಾಯನಪುರದ ಮೇಲೆ ಹದ್ದಿನಕಣ್ಣಿಟ್ಟಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು.

ಜೊತೆಗೆ ಅದೇ ಪುಂಡರನ್ನು ರಾಮನಗರದವರೆಗೂ ಕರೆದುಕೊಂಡು ಹೋಗಿ ಬಂದಿದ್ದರು. ಈ ಪ್ರಕ್ರಿಯೆಗಳ ವೇಳೆ ಯಾವುದೇ ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದ್ರೆ ಈಗ ಏನೋ ಎಂತೋ ಎಂಬಂತಾಗಿದೆ ಸ್ಥಳೀಯ ಪೊಲೀಸರ ಪರಿಸ್ಥಿತಿ.

ಪ್ರೈಮರಿ ಕಾಂಟ್ಯಾಕ್ಟ್ ಪಾಷಾ, ಜೊತೆಗೆ 3 ಸಂಬಂಧಿಗಳೂ ಆಸ್ಪತ್ರೆಗೆ!
ಇಮ್ರಾನ್ ಪಾಷ ನನ್ನು ಪ್ರೈಮರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿರುವ ಬಿಬಿಎಂಪಿ ವೈದ್ಯಾಧಿಕಾರಿಗಳು ಪಾಷಾ ಜೊತೆಯಲ್ಲಿದ್ದ ಇತರೆ ಮೂವರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಇಮ್ರಾನ್ ಪಾಷಾ ಸಂಬಂಧಿಕರಾದ ಆ ಮೂವರನ್ನೂ ಬಿಬಿಎಂಪಿ ಸಿಬ್ಬಂದಿ ವಿಕ್ಟೋರಿಯಾ ಕೊವಿಡ್ ವಾರ್ಡ್​ಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

Published On - 1:12 pm, Sat, 30 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us