
ಬೆಂಗಳೂರು:ನಿನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಪೂರ್ವನಿಯೋಜಿತವಾಗಿದ್ದು, ಗಲಭೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಯ ಮುಖಂಡರು ಕುಮ್ಮಕ್ಕು ನೀಡಿದ್ದಾರೆಂದು ಆರೋಪ ಮಾಡಿದ್ದಾರೆ.
ಕೃತ್ಯಕ್ಕೂ ಮುನ್ನ ಕಿಡಿಗೇಡಿಗಳು ಮೊದಲು ನಾಗವಾರದ ಅರಬಿಕ್ ಕಾಲೇಜ್ ಬಳಿ ಸಭೆ ಸೇರಿದ್ದಾರೆ. ನಂತರ ವೆಂಕಟೇಶ್ವರ ರಸ್ತೆ ಹಾಗೂ ಬಬಲ್ಗಮ್ ಫ್ಯಾಕ್ಟರಿ ಬಳಿ ಕೂಡ ಸಭೆ ಸೇರಿದ್ದಾರೆ. ನಂತರ, ಪೊಲೀಸ್ ಠಾಣೆಗೆ ನುಗ್ಗಿ ಏಕಾಏಕಿ ಗಲಾಟೆ ಮಾಡಿದ್ದಾರೆ. ಗಲಭೆಕೋರರು ತಮ್ಮ ಮನೆಗಳಿಂದಲೇ ಕಲ್ಲುಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕೆಲಸ ಶಾಂತಿಯುತವಾಗಿ ನೆರವೇರಿದಕ್ಕೆ ಅರಾಜಕತೆ ಸೃಷ್ಟಿಸಲು ಈ ಕೆಲಸ ಮಾಡಿದ್ದಾರೆ. ಹಾಗಾಗಿ ಇವರ ಮೇಲೆ ಗೂಂಡಾ ಕಾಯ್ದೆ ಅಡಿ ಕೇಸ್ ಹಾಕಬೇಕು. ಜೊತೆಗೆ ಆಗಿರುವ ನಷ್ಟವನ್ನು ಈ ಗಲಭೆಕೋರರಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.