‘ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಗಳ ಮುಖಂಡರು ಕುಮ್ಮಕ್ಕು ನೀಡಿದ್ದಾರೆ’

ಬೆಂಗಳೂರು:ನಿನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಪೂರ್ವನಿಯೋಜಿತವಾಗಿದ್ದು, ಗಲಭೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಯ ಮುಖಂಡರು ಕುಮ್ಮಕ್ಕು ನೀಡಿದ್ದಾರೆಂದು ಆರೋಪ ಮಾಡಿದ್ದಾರೆ. ಕೃತ್ಯಕ್ಕೂ ಮುನ್ನ ಕಿಡಿಗೇಡಿಗಳು ಮೊದಲು ನಾಗವಾರದ ಅರಬಿಕ್ ಕಾಲೇಜ್ ಬಳಿ ಸಭೆ ಸೇರಿದ್ದಾರೆ. ನಂತರ ವೆಂಕಟೇಶ್ವರ ರಸ್ತೆ ಹಾಗೂ ಬಬಲ್​ಗಮ್ ಫ್ಯಾಕ್ಟರಿ ಬಳಿ ಕೂಡ ಸಭೆ ಸೇರಿದ್ದಾರೆ. ನಂತರ, ಪೊಲೀಸ್ […]

‘ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಗಳ ಮುಖಂಡರು ಕುಮ್ಮಕ್ಕು ನೀಡಿದ್ದಾರೆ’
ಸಾಧು ಶ್ರೀನಾಥ್​

Updated on: Aug 12, 2020 | 1:41 PM

ಬೆಂಗಳೂರು:ನಿನ್ನೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಪೂರ್ವನಿಯೋಜಿತವಾಗಿದ್ದು, ಗಲಭೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಈ ಗಲಭೆ ನಡೆಸಲು PFI ಮತ್ತು SDPI ಸಂಘಟನೆಯ ಮುಖಂಡರು ಕುಮ್ಮಕ್ಕು ನೀಡಿದ್ದಾರೆಂದು ಆರೋಪ ಮಾಡಿದ್ದಾರೆ.

ಕೃತ್ಯಕ್ಕೂ ಮುನ್ನ ಕಿಡಿಗೇಡಿಗಳು ಮೊದಲು ನಾಗವಾರದ ಅರಬಿಕ್ ಕಾಲೇಜ್ ಬಳಿ ಸಭೆ ಸೇರಿದ್ದಾರೆ. ನಂತರ ವೆಂಕಟೇಶ್ವರ ರಸ್ತೆ ಹಾಗೂ ಬಬಲ್​ಗಮ್ ಫ್ಯಾಕ್ಟರಿ ಬಳಿ ಕೂಡ ಸಭೆ ಸೇರಿದ್ದಾರೆ. ನಂತರ, ಪೊಲೀಸ್ ಠಾಣೆಗೆ ನುಗ್ಗಿ ಏಕಾಏಕಿ ಗಲಾಟೆ ಮಾಡಿದ್ದಾರೆ. ಗಲಭೆಕೋರರು ತಮ್ಮ ಮನೆಗಳಿಂದಲೇ ಕಲ್ಲುಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕೆಲಸ ಶಾಂತಿಯುತವಾಗಿ ನೆರವೇರಿದಕ್ಕೆ ಅರಾಜಕತೆ ಸೃಷ್ಟಿಸಲು ಈ ಕೆಲಸ ಮಾಡಿದ್ದಾರೆ. ಹಾಗಾಗಿ ಇವರ ಮೇಲೆ ಗೂಂಡಾ ಕಾಯ್ದೆ ಅಡಿ ಕೇಸ್​ ಹಾಕಬೇಕು. ಜೊತೆಗೆ ಆಗಿರುವ ನಷ್ಟವನ್ನು ಈ ಗಲಭೆಕೋರರಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us