AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಕೆಟ್​ಗೆ ಎಂಟ್ರಿ ಕೊಟ್ಟ ಅವರೆಕಾಯಿ.. ಎಲ್ಲೆಲ್ಲೂ ಅದರದೇ ಘಮ, ಬೇರೆ ತರಕಾರಿಗಳಿಗೆ ಗುಡ್​ಬೈ ಹೇಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ಚಳಿಗಾಲದಲ್ಲಿ ಮಾತ್ರ ಮಾರುಕಟ್ಟೆಗೆ ಲಗ್ಗೆಯಿಡುವ ಅವರೆಕಾಯಿ ಸವಿರುಚಿಯನ್ನ ಸವಿಯದವರೇ ಇಲ್ಲ. ಮಾರುಕಟ್ಟೆಯಲ್ಲಿ ತರಕಾರಿಗಳನ್ನೇ ಮೀರಿಸುವ ಹಾಗೆ ನಾಟಿ ಅವರೆಕಾಯಿ ಲಗ್ಗೆಯಿಟ್ಟಿದೆ. ಚಿಕ್ಕಬಳ್ಳಾಪುರದ ಮಾರ್ಕೆಟ್‌ನಲ್ಲಿ ಅವರೆಕಾಯಿಯದ್ದೇ ದರ್ಬಾರ್ ಆಗಿದೆ.

ಮಾರ್ಕೆಟ್​ಗೆ ಎಂಟ್ರಿ ಕೊಟ್ಟ ಅವರೆಕಾಯಿ.. ಎಲ್ಲೆಲ್ಲೂ ಅದರದೇ ಘಮ, ಬೇರೆ ತರಕಾರಿಗಳಿಗೆ ಗುಡ್​ಬೈ ಹೇಳಿ ಖರೀದಿಗೆ ಮುಗಿಬಿದ್ದ ಗ್ರಾಹಕರು
ಅವರೆಕಾಯಿ
Follow us
ಆಯೇಷಾ ಬಾನು
|

Updated on:Dec 24, 2020 | 7:41 AM

ಚಿಕ್ಕಬಳ್ಳಾಪುರ: ಚಳಿಗಾಲಕ್ಕೂ ಅವರೆಕಾಯಿಗೋ ಅದೇನು ನಂಟೋ ಗೊತ್ತಿಲ್ಲ. ಚಳಿ ಜೋರಾಗುತ್ತಿದ್ದಂತೆಯೇ ನಾಟಿ ಅವರೇಕಾಯಿ ಫಸಲು ಹೆಚ್ಚಾಗುತ್ತೆ. ಈ ಬಾರಿ ವಿಪರೀತ ಚಳಿ ಇರೋ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅವರೇಕಾಯಿ ಫಸಲು ಚೆನ್ನಾಗಿ ಬಂದಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅವರೆಕಾಯಿ ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಇನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅವರೆಕಾಯಿಯದ್ದೇ ಹವಾ.. ಮಾರ್ಕೆಟ್‌ನಲ್ಲಿ ಗ್ರಾಹಕರು ಅವರೆಕಾಯಿ ನೋಡಿದ್ದೆ ತಡ, ತರಹೇವಾರಿ ತರಕಾರಿಗಳಿಗೆ ಗುಡ್ ಬೈ ಹೇಳಿ ಅವರೆಕಾಯಿಯತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿ ಅವರೆಕಾಯಿಗೆ ಚಿಕ್ಕಬಳ್ಳಾಪುರದಲ್ಲಿ 40 ರೂಪಾಯಿ ಇದೆ, ಅದರಲ್ಲೂ ಚಿಕ್ಕಬಳ್ಳಾಪುರದ ಅವರೆಕಾಯಿಗೆ ಬೆಂಗಳೂರಿನಲ್ಲಿ ಭಾರೀ ಡಿಮ್ಯಾಂಡ್ ಇದೆ.

ಹಾಗಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಕೆ.ಜಿ. ಅವರೆಕಾಯಿಗೆ 50 ರಿಂದ 60 ರೂಪಾಯಿ ಇದೆ. ಬೆಳಗಾಗುತ್ತಿದ್ದಂತೆ ಖಾಸಗಿ ಬಸ್, ಟೆಂಪೋಗಳ ಮೂಲಕ ಚಿಕ್ಕಬಳ್ಳಾಫುರದ ಅವರೆಕಾಯಿ ಬೆಂಗಳೂರಿಗೆ ಸೇರುತ್ತಿದೆ.

ಒಟ್ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಮಾಲ್ ಮಾಡುತ್ತಿರುವ ನಾಟಿ ಅವರೆಕಾಯಿ, ಗ್ರಾಹಕರ ಬಾಯಲ್ಲಿ ನೀರೂರಿಸುತ್ತ ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಷ್ಟಪಟ್ಟು ಬೆಳೆದ ರೈತರ ಜೇಬು ಕೂಡ ತುಂಬುತ್ತಿದೆ.

ಸಜ್ಜನ್ ರಾವ್ ಸರ್ಕಲ್​ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್​ನದ್ದೇ ಪ್ರಾಬ್ಲಂ

Published On - 7:30 am, Thu, 24 December 20

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್