AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹೋರಾಟಕ್ಕೆ ಮಗಳ ಮದುವೆ ಮುಂದೂಡಿದ ಜಿಲ್ಲಾ ಆರೋಗ್ಯಾಧಿಕಾರಿ

ಬಾಗಲಕೋಟೆ: ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ರುದ್ರತಾಂಡವ ಆಡುತ್ತಿದೆ. ಜನ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಹೆಮ್ಮಾರಿಯಿಂದ ಪ್ರತಿ ದಿನ ಪ್ರತಿ ಕ್ಷಣ ನರಕ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಅದೆಷ್ಟೋ ಕನಸುಗಳು ಬೀದಿಗೆ ಬಿದ್ದಿವೆ. ಅದರಂತೆ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನ ಮರೆತು ಜನರ ಜೀವವನ್ನ ಉಳಿಸಿಲು ಪಣ ತೊಟ್ಟಿದ್ದಾರೆ. ದಿಟ್ಟ ಅಧಿಕಾರಿ ಕೊರೊನಾ ವಿರುದ್ಧ ಹೊರಾಡುತ್ತಾ, ಜನರಿಗಾಗಿ ದೊಡ್ಡ ದೊಡ್ಡ ತ್ಯಾಗ ಮಾಡುತ್ತಿದ್ದಾರೆ. ಇಂದು ನಡೆಯಬೇಕಾಗಿದ್ದ ಮದುವೆ ಮುಂದೂಡಿದ ಅಧಿಕಾರಿ! ಬಾಗಲಕೋಟೆ […]

ಕೊರೊನಾ ಹೋರಾಟಕ್ಕೆ ಮಗಳ ಮದುವೆ ಮುಂದೂಡಿದ ಜಿಲ್ಲಾ ಆರೋಗ್ಯಾಧಿಕಾರಿ
ಸಾಧು ಶ್ರೀನಾಥ್​
|

Updated on:Apr 27, 2020 | 11:29 AM

Share

ಬಾಗಲಕೋಟೆ: ಕೊರೊನಾ ಅನ್ನೋ ಹೆಮ್ಮಾರಿ ದೇಶದಲ್ಲಿ ರುದ್ರತಾಂಡವ ಆಡುತ್ತಿದೆ. ಜನ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಹೆಮ್ಮಾರಿಯಿಂದ ಪ್ರತಿ ದಿನ ಪ್ರತಿ ಕ್ಷಣ ನರಕ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಅದೆಷ್ಟೋ ಕನಸುಗಳು ಬೀದಿಗೆ ಬಿದ್ದಿವೆ.

ಅದರಂತೆ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನ ಮರೆತು ಜನರ ಜೀವವನ್ನ ಉಳಿಸಿಲು ಪಣ ತೊಟ್ಟಿದ್ದಾರೆ. ದಿಟ್ಟ ಅಧಿಕಾರಿ ಕೊರೊನಾ ವಿರುದ್ಧ ಹೊರಾಡುತ್ತಾ, ಜನರಿಗಾಗಿ ದೊಡ್ಡ ದೊಡ್ಡ ತ್ಯಾಗ ಮಾಡುತ್ತಿದ್ದಾರೆ.

ಇಂದು ನಡೆಯಬೇಕಾಗಿದ್ದ ಮದುವೆ ಮುಂದೂಡಿದ ಅಧಿಕಾರಿ! ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ ಕೊರೊನಾ ಹೋರಾಟದಲ್ಲಿ ಧುಮುಕಿದ್ದು, ತಮ್ಮ ಮುದ್ದಾದ ಮಗಳ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ತಮಗೆ ಇರುವ ಒಬ್ಬಳೆ ಮಗಳಾದ ಅಕ್ಷತಾ ಮದುವೆ ಇವತ್ತು ನಡೆಯ ಬೇಕಿತ್ತು. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರೋದ್ರಿಂದ ಡಿಹೆಚ್‌ಒ ಆದ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಜಿಲ್ಲೆಯ ಜನರನ್ನು ಕೊರೊನಾದಿಂದ ಮುಕ್ತ ಮಾಡುವ ಹೊಣೆಗಾರಿಕೆ ಇದೆ. ಇದರಿಂದ ಇವರು ತಮ್ಮ ಒಬ್ಬಳೆೇ ಮಗಳಾದ ಅಕ್ಷತಾ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಜನರ ಕಾಳಜಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಈಗಾಗಲೇ ಮಗಳ‌ ಮದುವೆಗಾಗಿ ಹಾಲ್‌ನ್ನು ಕೂಡ ಬುಕ್ ಮಾಡಿ, ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಜನರು ಸಂಕಷ್ಟದಲ್ಲಿರುವಾಗ ನಾನು ಸಂಭ್ರಮ ಪಡೋದು ಅರ್ಥವಿಲ್ಲ ಅಂತ ಮುದುವೆಯನ್ನ ಮುಂದಕ್ಕೆ ಹಾಕಿ, ಜನರಿಗಾಗಿ ದುಡಿಯುತ್ತಿದ್ದಾರೆ.

ಅನಂತ ದೇಸಾಯಿ ಮಗಳು ಅಕ್ಷತಾ ಓರ್ವ ಸಾಪ್ಟವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೂಡ ತಾವು ಮೆಚ್ಚಿದ ಹುಡುಗನ ಜೊತೆ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದರು. ಅಂದುಕೊಂಡಂತೆ ಆಗಿದ್ದರೆ ಇವತ್ತು ಇವರು ಹಸೆಮಣೆ ಏರಬೇಕಿತ್ತು. ಮನೆ ಮುಂದೆ ಅಲಂಕಾರ, ಸಂಭ್ರಮ ಸಡಗರ ಸಂತಸ ಮೇಳೈಸಿಬೇಕಿತ್ತು. ಆದರೆ ಹೆಮ್ಮಾರಿ ಕೊರೊನಾ ಮದುವೆಯ ಸಂಭ್ರಮಕ್ಕೆ ಬ್ರೆಕ್ ಹಾಕಿದೆ.

ಇನ್ನು ಡಿಹೆಚ್‌ಒ ದೇಸಾಯಿ ಜನರ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಮನೆಯವರ ಸುರಕ್ಷತೆಗಾಗಿ ಮನೆಯಲ್ಲಿ ಒಂದು ರೂಮಲ್ಲಿ ಸ್ಟೇ ಮಾಡುತ್ತಿದ್ದು ಪತ್ನಿ ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಅನಂತ ದೇಸಾಯಿ ಕಾರ್ಯಕ್ಕೆ‌ ಮನೆಯವರು ಸಾತ್ ನೀಡಿದ್ದು, ಸ್ವಲ್ಪಮಟ್ಟಿಗೆ ಭಯ, ಆತಂಕ‌ ಇದೆ. ಮುದುವೆ ಮೂಂದೂಡಿದ್ದಕ್ಕೆ ಪತ್ನಿ ಮತ್ತು ಮಗಳ ಒಪ್ಪಿಗೆ ಇದ್ದು, ಜನರ ರಕ್ಷಣೆ ಮುಖ್ಯ ಅಂತಿದ್ದಾರೆ.

ಒಟ್ಟಾರೆ ಕೊರೊನಾ ಕರ್ತವ್ಯದಲ್ಲಿ ಮುಳುಗಿದ ಹಿರಿಯ ಕಿರಿಯ ಅಧಿಕಾರಿಗಳು ಮನೆ, ಮಕ್ಕಳು, ಸಂಭ್ರಮ ಮರೆತಿದ್ದಾರೆ. ಅದರಲ್ಲಿ ಅನಂತ ದೇಸಾಯಿ ಕೂಡ ಒಬ್ಬರಾಗಿದ್ದು, ಆರೋಗ್ಯ ಇಲಾಖೆ ಮುಂದಾಳತ್ವ ವಹಿಸಿಕೊಂಡು ಕೊರೊನಾ ಕಟ್ಟಿ ಹಾಕೋಕೆ ಮುನ್ನುಗ್ಗುತ್ತಿದ್ದಾರೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬಂದು, ಡಿಹೆಚ್‌ಒ ಮಗಳಾದ ಅಕ್ಷತಾ ಅವರ ಮುದುವೆ ಯಾವುದೇ ವಿಘ್ನ ಇಲ್ಲದೆ ನಡೆಯಲಿ ಅಂತಾ ಹಾರೈಸೋಣ. https://www.facebook.com/Tv9Kannada/videos/675422006556184/

Published On - 11:18 am, Mon, 27 April 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್