ಹೌದು, ವಿದೇಶದಿಂದ ವಾಪಸಾದವರಿಗೆ ಸ್ಟಾರ್ ಹೋಟೆಲ್ ರೂಮ್ ರೆಂಟ್ ಹೇಗಿದೆ?

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದ ವಿದೇಶ ಹಾಗೂ ಹೊರ ರಾಜ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್​ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬೆಂಗಳೂರು ನಗರದ ಫೈವ್ ಸ್ಟಾರ್, ಥ್ರೀ ಸ್ಟಾರ್ ಹೋಟೆಲ್, ಬಜೆಟ್ ಹೋಟೆಲ್, ಕಲ್ಯಾಣ ಮಂಟಪಗಳು, ಹಾಸ್ಟೆಲ್‌ಗಳು, ಸಮುದಾಯ ಭವನಗಳು, ಕಾಲೇಜುಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ನಿರ್ಧಾರ ಮಾಡಿದೆ. ಕ್ವಾರಂಟೈನ್‌ಗಾಗಿ ವಶಕ್ಕೆ ಪಡೆದ ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದರ ನಿಗದಿ ಮಾಡಿದೆ. ಫೈವ್ ಸ್ಟಾರ್ ಹೋಟೆಲ್‌ನ ಒಂದು ಕೊಠಡಿಗೆ 3 ಸಾವಿರ […]

ಹೌದು, ವಿದೇಶದಿಂದ ವಾಪಸಾದವರಿಗೆ ಸ್ಟಾರ್ ಹೋಟೆಲ್ ರೂಮ್ ರೆಂಟ್ ಹೇಗಿದೆ?
ಸಾಧು ಶ್ರೀನಾಥ್​

Updated on: May 11, 2020 | 12:45 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದ ವಿದೇಶ ಹಾಗೂ ಹೊರ ರಾಜ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್​ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬೆಂಗಳೂರು ನಗರದ ಫೈವ್ ಸ್ಟಾರ್, ಥ್ರೀ ಸ್ಟಾರ್ ಹೋಟೆಲ್, ಬಜೆಟ್ ಹೋಟೆಲ್, ಕಲ್ಯಾಣ ಮಂಟಪಗಳು, ಹಾಸ್ಟೆಲ್‌ಗಳು, ಸಮುದಾಯ ಭವನಗಳು, ಕಾಲೇಜುಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ನಿರ್ಧಾರ ಮಾಡಿದೆ.

ಕ್ವಾರಂಟೈನ್‌ಗಾಗಿ ವಶಕ್ಕೆ ಪಡೆದ ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದರ ನಿಗದಿ ಮಾಡಿದೆ. ಫೈವ್ ಸ್ಟಾರ್ ಹೋಟೆಲ್‌ನ ಒಂದು ಕೊಠಡಿಗೆ 3 ಸಾವಿರ ರೂ. ಹಾಗೂ ಒಂದೇ ಕೊಠಡಿಯಲ್ಲಿ ಇಬ್ಬರಿದ್ದರೆ 3,700 ರೂಪಾಯಿ ನಿಗದಿ ಮಾಡಿದೆ. ಬೆಳಗಿನ ಉಪಾಹಾರವೂ ಸೇರಿ BBMP ದರ ನಿಗದಿ ಮಾಡಿದೆ. ಮಧ್ಯಾಹ್ನ ಊಟಕ್ಕೆ ₹550, ರಾತ್ರಿಯ ಊಟಕ್ಕೆ 550 ರೂ. ಆಗಲಿದೆ.

3 ಸ್ಟಾರ್ ಹೋಟೆಲ್‌ಗೆ ಉಪಾಹಾರ ಸೇರಿ 1,500 ರೂ. ಹಾಗೂ ಒಂದೇ ಕೊಠಡಿಯಲ್ಲಿ ಇಬ್ಬರಿದ್ದರೆ 1,750 ರೂಪಾಯಿ ನಿಗದಿಯಾಗಿದೆ. ಮಧ್ಯಾಹ್ನದ ಊಟಕ್ಕೆ 175 ರೂ, ರಾತ್ರಿಯ ಊಟಕ್ಕೆ 175 ರೂ. ಆಗಲಿದೆ. ಇತರ ಬಜೆಟ್ ಹೋಟೆಲ್‌ಗಳಿಗೆ ಬೇರೆ ಬೇರೆ ದರ ನಿಗದಿ ಪಡಿಸಿದೆ. ಮೂರು ಹೊತ್ತಿನ ಊಟವೂ ಸೇರಿಸಿ ಒಂದು ದಿನಕ್ಕೆ 700ರೂ.ನಿಂದ 900 ರೂಪಾಯಿ ನಿಗದಿ ಪಡಿಸಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸೋಂಕಿತರ ಜೊತೆ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದ್ದವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್​ಗೆ ಬಿಬಿಎಂಪಿ ಸ್ಥಳ ನಿಗದಿ ಮಾಡಿದೆ.

Published On - 11:44 am, Mon, 11 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us