ಬೆಂಗಳೂರಿನಲ್ಲಿ ದಸರಾ ಆಚರಣೆಗೆ ಬಿಬಿಎಂಪಿ ವಿಧಿಸಿತು ಷರತ್ತುಗಳ ಸರಮಾಲೆ

ಬೆಂಗಳೂರು:ಕೊರೊನಾ ಮಹಾಮಾರಿ ಈ ವರ್ಷ ಎಲ್ಲ ಹಬ್ಬಹರಿದಿನಗಳ ಸಂಭ್ರವನ್ನು ಕಿತ್ತುಕೊಂಡಿರುವಂತೆ ಈಗ ದಸರಾ ಮೇಲೂ ತನ್ನ ಕರಾಳ ಛಾಯೆ ಬೀರಿದೆ. ಸದ್ಯಕ್ಕೆ ರಾಜಧಾನಿಯಲ್ಲಿ ದಸರಾ ಪೂಜೆಗೆ ಅವಕಾಶವನ್ನು ನೀಡಲಾಗಿದೆಯಾದರೂ ಅನೇಕ ಷರತ್ತುಗಳು ಅನ್ವಯವಾಗಲಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಮಾರ್ಗಸೂಚಿಗಳ ಬಿಡುಗಡೆ ಸಾರ್ವಜನಿಕ ಹಾಲ್, ಪ್ರದೇಶದಲ್ಲಿ ಕಾರ್ಯಕ್ರಮ ಮಾಡುವುದಾದ್ರೆ 200 ಜನಕ್ಕಿಂತ ಹೆಚ್ಚು ಜನ ಕಾರ್ಯಕ್ರಮಕ್ಕೆ ಸೇರುವಂತಿಲ್ಲ. ಇನ್ನು ಮೈದಾನಗಳಲ್ಲಿ ದಸರಾ ಮಾಡುವುದಾದರೆ ಬಿಬಿಎಂಪಿ ಅನುಮತಿ ಬೇಕೇಬೇಕು. ಕಡ್ಡಾಯವಾಗಿ ದೈಹಿಕ ಅಂತರ ಪಾಲಿಸಬೇಕು, ಸ್ಯಾನಿಟೈಸ್ […]

ಬೆಂಗಳೂರಿನಲ್ಲಿ ದಸರಾ ಆಚರಣೆಗೆ ಬಿಬಿಎಂಪಿ ವಿಧಿಸಿತು ಷರತ್ತುಗಳ ಸರಮಾಲೆ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Oct 12, 2020 | 12:29 PM

ಬೆಂಗಳೂರು:ಕೊರೊನಾ ಮಹಾಮಾರಿ ಈ ವರ್ಷ ಎಲ್ಲ ಹಬ್ಬಹರಿದಿನಗಳ ಸಂಭ್ರವನ್ನು ಕಿತ್ತುಕೊಂಡಿರುವಂತೆ ಈಗ ದಸರಾ ಮೇಲೂ ತನ್ನ ಕರಾಳ ಛಾಯೆ ಬೀರಿದೆ. ಸದ್ಯಕ್ಕೆ ರಾಜಧಾನಿಯಲ್ಲಿ ದಸರಾ ಪೂಜೆಗೆ ಅವಕಾಶವನ್ನು ನೀಡಲಾಗಿದೆಯಾದರೂ ಅನೇಕ ಷರತ್ತುಗಳು ಅನ್ವಯವಾಗಲಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಮಾರ್ಗಸೂಚಿಗಳ ಬಿಡುಗಡೆ
ಸಾರ್ವಜನಿಕ ಹಾಲ್, ಪ್ರದೇಶದಲ್ಲಿ ಕಾರ್ಯಕ್ರಮ ಮಾಡುವುದಾದ್ರೆ 200 ಜನಕ್ಕಿಂತ ಹೆಚ್ಚು ಜನ ಕಾರ್ಯಕ್ರಮಕ್ಕೆ ಸೇರುವಂತಿಲ್ಲ. ಇನ್ನು ಮೈದಾನಗಳಲ್ಲಿ ದಸರಾ ಮಾಡುವುದಾದರೆ ಬಿಬಿಎಂಪಿ ಅನುಮತಿ ಬೇಕೇಬೇಕು. ಕಡ್ಡಾಯವಾಗಿ ದೈಹಿಕ ಅಂತರ ಪಾಲಿಸಬೇಕು, ಸ್ಯಾನಿಟೈಸ್ ಮಾಡಬೇಕು ಎಂದು ಆಯುಕ್ತ ಮಂಜುನಾಥ ಪ್ರಸಾದ್ ಎಚ್ಚರಿಕೆ ಮಿಶ್ರಿತ ಷರತ್ತು ವಿಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us