ಒಳಚರಂಡಿ ಕಾಮಗಾರಿ ವೇಳೆ ಡೈನಮೈಟ್ ಬಳಕೆ, ನಿವಾಸಿಗಳಿಗೆ ಹೆಚ್ಚಿದ ಆತಂಕ, ಎಲ್ಲಿ?

ಬೆಂಗಳೂರು: ಒಳಚರಂಡಿಗೆ ಪೈಪ್ ಅಳವಡಿಸುವ ಕೆಲಸ ಕೈಗೊಂಡಿರುವ BWSSB ಸಿಬ್ಬಂದಿ ಕಾಮಗಾರಿ ವೇಳೆ ಡೈನಮೈಟ್​ ಬಳಸಿರುವ ಘಟನೆ ಆರ್ ಆರ್ ನಗರದ  ಹಲಗೇವಡೇರಹಳ್ಳಿಯಲ್ಲಿ ಕಂಡುಬಂದಿದೆ. ಇದರಿಂದ, ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ಮನೆಮಾಡಿದೆ. ಒಳಚರಂಡಿಗೆ ಪೈಪ್ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಕಾರ್ಮಿಕರಿಗೆ ಕಲ್ಲುಬಂಡೆಗಳು ಎದುರಾಗಿದೆ. ಹಾಗಾಗಿ, ಇದನ್ನು ತೆರವುಗೊಳಿಸಲು ಡೈನಮೈಟ್ ಬಳಸಲು ಮುಂದಾಗಿದ್ದಾರೆ. ಈ ವೇಳೆ ಡೈನಮೈಟ್ ಬ್ಲಾಸ್ಟ್‌ನಿಂದ ಅಕ್ಕಪಕ್ಕದ ಮನೆ ಗೋಡೆಗಳು ಅಲುಗಾಡಿದ್ದು ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಹೀಗಾಗಿ ಕಾಮಗಾರಿ ವೇಳೆ ಡೈನಮೈಟ್ ಬಳಕೆಯನ್ನು ಕಡಿಮೆ ಮಾಡಬೇಕೆಂದು […]

ಒಳಚರಂಡಿ ಕಾಮಗಾರಿ ವೇಳೆ ಡೈನಮೈಟ್ ಬಳಕೆ, ನಿವಾಸಿಗಳಿಗೆ ಹೆಚ್ಚಿದ ಆತಂಕ, ಎಲ್ಲಿ?
Edited By:

Updated on: Jul 27, 2020 | 8:49 PM

ಬೆಂಗಳೂರು: ಒಳಚರಂಡಿಗೆ ಪೈಪ್ ಅಳವಡಿಸುವ ಕೆಲಸ ಕೈಗೊಂಡಿರುವ BWSSB ಸಿಬ್ಬಂದಿ ಕಾಮಗಾರಿ ವೇಳೆ ಡೈನಮೈಟ್​ ಬಳಸಿರುವ ಘಟನೆ ಆರ್ ಆರ್ ನಗರದ  ಹಲಗೇವಡೇರಹಳ್ಳಿಯಲ್ಲಿ ಕಂಡುಬಂದಿದೆ. ಇದರಿಂದ, ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ಮನೆಮಾಡಿದೆ.

ಒಳಚರಂಡಿಗೆ ಪೈಪ್ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಕಾರ್ಮಿಕರಿಗೆ ಕಲ್ಲುಬಂಡೆಗಳು ಎದುರಾಗಿದೆ. ಹಾಗಾಗಿ, ಇದನ್ನು ತೆರವುಗೊಳಿಸಲು ಡೈನಮೈಟ್ ಬಳಸಲು ಮುಂದಾಗಿದ್ದಾರೆ. ಈ ವೇಳೆ ಡೈನಮೈಟ್ ಬ್ಲಾಸ್ಟ್‌ನಿಂದ ಅಕ್ಕಪಕ್ಕದ ಮನೆ ಗೋಡೆಗಳು ಅಲುಗಾಡಿದ್ದು ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಹೀಗಾಗಿ ಕಾಮಗಾರಿ ವೇಳೆ ಡೈನಮೈಟ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Published On - 5:50 pm, Sun, 26 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us