ರಸ್ತೆಗೆ ಅಡ್ಡ ಬಂದ ನಾಯಿ ಕಾಪಾಡಲು ಗದ್ದೆಗೆ ಇಳಿದ ಕಾರು..

ಶಿವಮೊಗ್ಗ: ರಸ್ತೆಗೆ ಅಡ್ಡ ಬಂದ ನಾಯಿಯನ್ನು ಕಾಪಾಡಲು ಹೋಗಿ ಕಾರೊಂದು ಜೋಳದ ಗದ್ದೆಗೆ ಇಳಿದಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ತರೀಕೆರೆಯಿಂದ ಸಾಗರದ ಕಡೆ ಹೊರಟಿದ್ದ ka 66 M 1559 ಕ್ರಮ ಸಂಖ್ಯೆಯ ಕಾರಿಗೆ ನಾಯಿಯೊಂದು ಅಡ್ಡಬಂದಿದೆ. ನಾಯಿಯನ್ನ ತಪ್ಪಿಸಲು ಹೋಗಿ ಕಾರು ಜೋಳದ ಗದ್ದೆಗೆ ಇಳಿದಿದೆ. ವೇಗದಲ್ಲಿದ್ದ ಕಾರನ್ನ ಜೋಳದ ಗದ್ದೆಗೆ ಇಳಿಸಲಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನ ಶಿವಮೊಗ್ಗದ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ […]

ರಸ್ತೆಗೆ ಅಡ್ಡ ಬಂದ ನಾಯಿ ಕಾಪಾಡಲು ಗದ್ದೆಗೆ ಇಳಿದ ಕಾರು..
ಆಯೇಷಾ ಬಾನು

Updated on: Aug 24, 2020 | 7:47 AM

ಶಿವಮೊಗ್ಗ: ರಸ್ತೆಗೆ ಅಡ್ಡ ಬಂದ ನಾಯಿಯನ್ನು ಕಾಪಾಡಲು ಹೋಗಿ ಕಾರೊಂದು ಜೋಳದ ಗದ್ದೆಗೆ ಇಳಿದಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.

ತರೀಕೆರೆಯಿಂದ ಸಾಗರದ ಕಡೆ ಹೊರಟಿದ್ದ ka 66 M 1559 ಕ್ರಮ ಸಂಖ್ಯೆಯ ಕಾರಿಗೆ ನಾಯಿಯೊಂದು ಅಡ್ಡಬಂದಿದೆ. ನಾಯಿಯನ್ನ ತಪ್ಪಿಸಲು ಹೋಗಿ ಕಾರು ಜೋಳದ ಗದ್ದೆಗೆ ಇಳಿದಿದೆ. ವೇಗದಲ್ಲಿದ್ದ ಕಾರನ್ನ ಜೋಳದ ಗದ್ದೆಗೆ ಇಳಿಸಲಾಗಿದೆ.

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನ ಶಿವಮೊಗ್ಗದ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us