AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲ್‌ಬಾಗ್‌ನಲ್ಲಿ ಅಕಾಡೆಮಿ ಉದ್ಘಾಟಿಸಿ, MTR ‌ನಲ್ಲಿ ಬೊಂಬಾಟ್ ಬ್ರೇಕ್​ಫಾಸ್ಟ್ ಮಾಡಿದ BSY

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ ಸಮೀಪ ಇರೋ ಎಂಟಿಆರ್‌ ಹೋಟೆಲ್‌ ಜನಸಾಮಾನ್ಯರಿಂದ ಹಿಡಿದು ಮಹಾಮಹಿಮರವರೆಗೂ ದಿಲ್ ಪಸಂದ್! ರುಚಿ-ಶುಚಿ ಇಲ್ಲಿನ ಆಕರ್ಷಣೆ. ಬೆಂಗಳೂರಿನ ಕೆಲವೇ ಕೆಲ ಹಳೆಯ ಮತ್ತು ತನ್ನದೇ ಆದ ವೈಶಿಷ್ಟತೆ ಹೊಂದಿರೋ ಹೊಟೆಲ್‌ಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಬೆಳಗಿನ ಉಪಹಾರ ಮಾಡೋದರ ಗಮ್ಮತ್ತೇ ಬೇರೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೂಡಾ ಹೊರತಾಗಿಲ್ಲ. ಇವತ್ತು ಲಾಲ್‌ಬಾಗ್‌ನಲ್ಲಿ ವಲ್ಲಭಾಯಿ ಪಟೇಲ್‌ ಅಕಾಡೆಮಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಇತ್ತು. ಜತೆಗೆ ಸಾವಯವ ಗೊಬ್ಬರ ಘಟಕದ ಉದ್ಘಾಟನೆ ಕೂಡಾ […]

ಲಾಲ್‌ಬಾಗ್‌ನಲ್ಲಿ ಅಕಾಡೆಮಿ ಉದ್ಘಾಟಿಸಿ, MTR ‌ನಲ್ಲಿ ಬೊಂಬಾಟ್ ಬ್ರೇಕ್​ಫಾಸ್ಟ್ ಮಾಡಿದ BSY
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jun 13, 2020 | 7:39 PM

Share

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ ಸಮೀಪ ಇರೋ ಎಂಟಿಆರ್‌ ಹೋಟೆಲ್‌ ಜನಸಾಮಾನ್ಯರಿಂದ ಹಿಡಿದು ಮಹಾಮಹಿಮರವರೆಗೂ ದಿಲ್ ಪಸಂದ್! ರುಚಿ-ಶುಚಿ ಇಲ್ಲಿನ ಆಕರ್ಷಣೆ. ಬೆಂಗಳೂರಿನ ಕೆಲವೇ ಕೆಲ ಹಳೆಯ ಮತ್ತು ತನ್ನದೇ ಆದ ವೈಶಿಷ್ಟತೆ ಹೊಂದಿರೋ ಹೊಟೆಲ್‌ಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಬೆಳಗಿನ ಉಪಹಾರ ಮಾಡೋದರ ಗಮ್ಮತ್ತೇ ಬೇರೆ. ಇದಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೂಡಾ ಹೊರತಾಗಿಲ್ಲ.

ಇವತ್ತು ಲಾಲ್‌ಬಾಗ್‌ನಲ್ಲಿ ವಲ್ಲಭಾಯಿ ಪಟೇಲ್‌ ಅಕಾಡೆಮಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಇತ್ತು. ಜತೆಗೆ ಸಾವಯವ ಗೊಬ್ಬರ ಘಟಕದ ಉದ್ಘಾಟನೆ ಕೂಡಾ ಇತ್ತು. ಹೀಗಾಗಿ ಎರಡೂ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿಎಂ ಬಿಎಸ್‌ವೈ ಸನಿಹದಲ್ಲೇ ಇದ್ದ ಎಟಿಆರ್‌ ನತ್ತ ಹೆಜ್ಜೆ ಹಾಕಿಯೇ ಬಿಟ್ರು.

ಸೀದಾ ಎಂಟಿಆರ್‌ ಹೊಟೆಲ್‌ಗೆ ಎಂಟ್ರಿ ಕೊಟ್ಟವರೇ ತಮಗಿಷ್ಟವಾದ ತಿಂಡಿ ಆರ್ಡರ್‌ ಮಾಡಿದ್ರು.. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಹೋಟೆಲ್‌ಗೆ ತೆರಳಿದ ಮುಖ್ಯಮಂತ್ರಿ ಸಖತ್ತಾಗಿ ಬೆಳಗಿನ ಉಪಹಾರ ಸವಿದ್ರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್ ಮುನೇನಕೊಪ್ಪ ಮುಖ್ಯಮಂತ್ರಿಗೆ ಸಾಥ್‌ ಕೊಟ್ರು. ಎಂದಿನಂತೆ ಎಂಟಿಆರ್‌ ಹೋಟೆಲ್‌ ಸಿಬ್ಬಂದಿ ದಿಢೀರನೆ ಬಂದ ವಿಶೇಷ ಅತಿಥಿಗೆ ಸತ್ಕಾರ ಮಾಡಿ ಧನ್ಯತಾ ಭಾವ ಮೆರೆದರು!

Published On - 1:06 pm, Sat, 13 June 20

Follow Us
105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ ಬಂದ 85 ವರ್ಷದ ಮಗಳು!
105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ ಬಂದ 85 ವರ್ಷದ ಮಗಳು!
ಭಕ್ತರ ಕಾಟಕ್ಕೆ ತಲೆ ಕೆರೆದುಕೊಂಡ ಓಂ ಪ್ರಕಾಶ್ ರಾವ್ ಗುರೂಜಿ
ಭಕ್ತರ ಕಾಟಕ್ಕೆ ತಲೆ ಕೆರೆದುಕೊಂಡ ಓಂ ಪ್ರಕಾಶ್ ರಾವ್ ಗುರೂಜಿ
ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಸಿಎಂ
ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಸಿಎಂ
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ