ಕಟ್ಟಡ ಕಾಮಗಾರಿಗಾಗಿ ಮೇಸ್ತ್ರಿಗಳನ್ನು ಫ್ಲೈಟ್ನಲ್ಲಿ ಕರೆಸಿಕೊಂಡ ಬಿಲ್ಡರ್, ಎಲ್ಲಿ..?
ದಕ್ಷಿಣ ಕನ್ನಡ: ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದ ಹಿನ್ನೆಲೆಯಲ್ಲಿ ಐವರು ಮೇಸ್ತ್ರಿಗಳನ್ನು ಕೋಲ್ಕತ್ತಾದಿಂದ ಮಂಗಳೂರಿಗೆ ವಿಮಾನದಲ್ಲಿ ಕರೆಸಿಕೊಂಡಿರುವ ಅಚ್ಚರಿಯ ಸಂಗತಿಯೊಂದು ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನ ಮೇರಿಯನ್ ಬಿಲ್ಡರ್ಸ್ನ ಮಾಲೀಕ ನವೀನ್ ಈ ಹಿಂದೆ ನಗರದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಲಾಕ್ಡೌನ್ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತುಹೋಗಿತ್ತು. ಜೊತೆಗೆ, ಕಾರ್ಮಿಕರು ಮತ್ತು ಅವರ ಮೇಸ್ತ್ರಿಗಳು ಪಶ್ಚಿಮ ಬಂಗಾಳಕ್ಕೆ ವಾಪಸ್ ಆಗಿದ್ದರು. ಹೀಗಾಗಿ, ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾದ ನವೀನ್ ಆ ಐವರು ಮೇಸ್ತ್ರಿಗಳಿಗೆ ಮತ್ತೊಮ್ಮೆ ಆಹ್ವಾನ […]

ದಕ್ಷಿಣ ಕನ್ನಡ: ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದ ಹಿನ್ನೆಲೆಯಲ್ಲಿ ಐವರು ಮೇಸ್ತ್ರಿಗಳನ್ನು ಕೋಲ್ಕತ್ತಾದಿಂದ ಮಂಗಳೂರಿಗೆ ವಿಮಾನದಲ್ಲಿ ಕರೆಸಿಕೊಂಡಿರುವ ಅಚ್ಚರಿಯ ಸಂಗತಿಯೊಂದು ಜಿಲ್ಲೆಯಲ್ಲಿ ನಡೆದಿದೆ.
ಮಂಗಳೂರಿನ ಮೇರಿಯನ್ ಬಿಲ್ಡರ್ಸ್ನ ಮಾಲೀಕ ನವೀನ್ ಈ ಹಿಂದೆ ನಗರದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಲಾಕ್ಡೌನ್ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತುಹೋಗಿತ್ತು. ಜೊತೆಗೆ, ಕಾರ್ಮಿಕರು ಮತ್ತು ಅವರ ಮೇಸ್ತ್ರಿಗಳು ಪಶ್ಚಿಮ ಬಂಗಾಳಕ್ಕೆ ವಾಪಸ್ ಆಗಿದ್ದರು.
ಹೀಗಾಗಿ, ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾದ ನವೀನ್ ಆ ಐವರು ಮೇಸ್ತ್ರಿಗಳಿಗೆ ಮತ್ತೊಮ್ಮೆ ಆಹ್ವಾನ ನೀಡಿದ್ದರು. ಆದರೆ, ಕೊರೊನಾಗೆ ಹೆದರಿ ಅವರು ರೈಲಿನಲ್ಲಿ ಮಂಗಳೂರಿಗೆ ಬರಲು ಹಿಂದೇಟು ಹಾಕಿದ್ದರು. ಹೀಗಾಗಿ, ನವೀನ್ ಆ ಐವರು ಮೇಸ್ತ್ರಿಗಳಿಗೂ ವಿಮಾನದ ಮೂಲಕ ಕೋಲ್ಕತ್ತಾದಿಂದ ಮಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಟಿಕೆಟ್ಗಾಗಿ ತಲಾ 7 ಸಾವಿರ ರೂಪಾಯಿಯಂತೆ ಒಟ್ಟು 35 ಸಾವಿರ ರೂಪಾಯಿ ಖರ್ಚು ಮಾಡಿರುವ ಬಿಲ್ಡರ್ ಜೊತೆಗೆ ಐವರು ಕಾರ್ಮಿಕರ ಕ್ವಾರೆಂಟೈನ್ಗಾಗಿ ಮಂಗಳೂರಿನಲ್ಲಿ ವ್ಯವಸ್ಥೆ ಸಹ ಮಾಡಿದ್ದಾರಂತೆ.