
ಕೋಲಾರ: ಜ್ವರದಿಂದ ಬಳಲುತ್ತಿದ್ದ ಕೊರೊನಾ ವಾರಿಯರ್ ಚಿಕಿತ್ಸೆ ಫಲಿಸದೆ ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ತಡರಾತ್ರಿ ಸಾವನ್ನಪ್ಪಿದ್ದಾರೆ. ಸಹಾಯಕ ಸಬ್ನ್ಸ್ಪೆಕ್ಟರ್ ಆಗಿ ಬಂಗಾರಪೇಟೆ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀನರಸಿಂಹ ಪ್ರಸಾದ್(50)ಸಾವಿಗೀಡಾದವರು.
ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಕೊರೊನಾ ವಾರಿಯರ್ ASI ಲಕ್ಷ್ಮೀನರಸಿಂಹ ಪ್ರಸಾದ್ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಜ್ವರ ನ್ಯುಮೋನಿಯಾಕ್ಕೆ ತಿರುಗಿತ್ತು. ASI ಲಕ್ಷ್ಮೀನರಸಿಂಹ ಪ್ರಸಾದ್ ನಿಧನಕ್ಕೆ ಬಂಗಾರಪೇಟೆ ಪೊಲೀಸ್ ಠಾಣೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.