AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆತ್ತವರಿದ್ರೂ ಅನಾಥನಂತೆ ನಡೆದು ಹೋಯ್ತು ಕಂದಮ್ಮನ ಅಂತ್ಯಕ್ರಿಯೆ

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ತಂದೊಡ್ಡಿರುವ ಸಂಕಷ್ಟಗಳು ಒಂದಲ್ಲ ಎರಡಲ್ಲ. ಒಂದೆಡೆ ಸೋಂಕಿನಿಂದ ಮೃತಪಟ್ಟ ತಂದೆಯ ಮುಖವನ್ನು ಕೊನೇ ಬಾರಿ ನೋಡಲಾಗದೆ ರೋದಿಸಿದ ಮಗನೊಬ್ಬನ ಕಥೆಯಾದರೆ ಇತ್ತ 17 ದಿನದ ಕಂದಮ್ಮನನ್ನ ಕಳೆದುಕೊಂಡ ಸೋಂಕಿತ ದಂಪತಿಯ ನೋವಿನ ಕಥೆ. ಹೌದು, ಕೊರೊನಾದಿಂದ ಆಸ್ಪತ್ರೆ ಸೇರಿದ್ದ ದಂಪತಿಯೊಬ್ಬರ ಮಗುವಿಗೂ ಸೋಂಕು ದೃಢಪಟ್ಟಿತ್ತು. ಹಾಗಾಗಿ ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ದಿನದ ಕೂಸು ಕೊನೆಗೆ ಜುಲೈ 1ರಂದು ಸೋಂಕಿಗೆ ಬಲಿಯಾಗಿತ್ತು. ಆದರೆ, ದಂಪತಿಗೆ ಸೋಂಕಿದ್ದ ಕಾರಣದಿಂದ ಕರುಳಬಳ್ಳಿಯ ಅಂತಿಮ […]

ಹೆತ್ತವರಿದ್ರೂ ಅನಾಥನಂತೆ ನಡೆದು ಹೋಯ್ತು ಕಂದಮ್ಮನ ಅಂತ್ಯಕ್ರಿಯೆ
KUSHAL V
|

Updated on:Jul 05, 2020 | 1:07 PM

Share

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ತಂದೊಡ್ಡಿರುವ ಸಂಕಷ್ಟಗಳು ಒಂದಲ್ಲ ಎರಡಲ್ಲ. ಒಂದೆಡೆ ಸೋಂಕಿನಿಂದ ಮೃತಪಟ್ಟ ತಂದೆಯ ಮುಖವನ್ನು ಕೊನೇ ಬಾರಿ ನೋಡಲಾಗದೆ ರೋದಿಸಿದ ಮಗನೊಬ್ಬನ ಕಥೆಯಾದರೆ ಇತ್ತ 17 ದಿನದ ಕಂದಮ್ಮನನ್ನ ಕಳೆದುಕೊಂಡ ಸೋಂಕಿತ ದಂಪತಿಯ ನೋವಿನ ಕಥೆ.

ಹೌದು, ಕೊರೊನಾದಿಂದ ಆಸ್ಪತ್ರೆ ಸೇರಿದ್ದ ದಂಪತಿಯೊಬ್ಬರ ಮಗುವಿಗೂ ಸೋಂಕು ದೃಢಪಟ್ಟಿತ್ತು. ಹಾಗಾಗಿ ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ದಿನದ ಕೂಸು ಕೊನೆಗೆ ಜುಲೈ 1ರಂದು ಸೋಂಕಿಗೆ ಬಲಿಯಾಗಿತ್ತು.

ಆದರೆ, ದಂಪತಿಗೆ ಸೋಂಕಿದ್ದ ಕಾರಣದಿಂದ ಕರುಳಬಳ್ಳಿಯ ಅಂತಿಮ ಪಯಣದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲೇ ಮರುಗುವ ಪರಿಸ್ಥಿತಿ ಎದುರಾಯ್ತು. ಅಂತಿಮವಾಗಿ ಮಗುವಿನ ಅಂತ್ಯ ಸಂಸ್ಕಾರವನ್ನ ಆಸ್ಪತ್ರೆಯ ಌಂಬುಲೆನ್ಸ್​ ಸಿಬ್ಬಂದಿ ಹೆಬ್ಬಾಳದ ಚಿತಾಗಾರದಲ್ಲಿ ನೆರವೇರಿಸಿದರು. ಕವರ್​ನಲ್ಲಿ ಸುತ್ತಿಕೊಂಡು ಕೊಂಡೊಯ್ದಿದ್ದ ಹಸುಗೂಸನ್ನು ಕಂಡ ಸಿಬ್ಬಂದಿಯ ಕಣ್ಣಾಲಿಗಳು ತುಂಬಿಬಂದವು. ಕಂದನ ಮೃತದೇಹ ಕಂಡ ಚಿತಾಗಾರದ ಸಿಬ್ಬಂದಿಗೂ ನೋವುಂಟಾಗಿ ಕೊನೆಗೆ ಸರ್ಕಾರಿ ಶುಲ್ಕವನ್ನು ಸಹ ಪಡೆಯಲಿಲ್ಲವಂತೆ.

Published On - 1:01 pm, Sun, 5 July 20

Follow Us
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್