ಸದಲಗಾ ಪೊಲೀಸರಿಂದ ಥಳಿತ, CRPF ಯೋಧನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಬೆಳಗಾವಿ: ಜಿಲ್ಲೆಯ ಸದಲಗಾ ಪೊಲೀಸರು CRPF ಯೋಧ ಸಚಿನ್ ವಿಷಯದಲ್ಲಿ ಸ್ವಲ್ಪ ಅತಿರೇಕವಾಗಿಯೇ ವರ್ತಿಸಿದ್ದಾರೆ ಅನ್ನಿಸುತ್ತದೆ. ಈ ಚಿತ್ರಗಳನ್ನು ನೋಡಿದ್ರೆ ಒಮ್ಮೆ ಎಂಥ ಕಟುಕನಿಗೂ ಮನಸ್ಸು ಘಾಸಿಕೊಳ್ಳುತ್ತದೆ. ಸಿಆರ್‌ಪಿಎಪ್ ಯೋಧನ ಬಂಧಿಸಿದ ಸದರಿ ಸದಲಗಾ ಪೊಲೀಸರು ಆತನ ಹಿಂಭಾಗದ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಯುವ ಯೋಧ ಸಚಿನ್​ಗೆ ಸದಲಗಾ ಪೊಲೀಸರು ಹಿಗ್ಗಾಮಗ್ಗಾ ಥಳಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏ.23 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು […]

ಸದಲಗಾ ಪೊಲೀಸರಿಂದ ಥಳಿತ, CRPF ಯೋಧನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಸಾಧು ಶ್ರೀನಾಥ್​

Updated on: Apr 29, 2020 | 6:17 PM

ಬೆಳಗಾವಿ: ಜಿಲ್ಲೆಯ ಸದಲಗಾ ಪೊಲೀಸರು CRPF ಯೋಧ ಸಚಿನ್ ವಿಷಯದಲ್ಲಿ ಸ್ವಲ್ಪ ಅತಿರೇಕವಾಗಿಯೇ ವರ್ತಿಸಿದ್ದಾರೆ ಅನ್ನಿಸುತ್ತದೆ. ಈ ಚಿತ್ರಗಳನ್ನು ನೋಡಿದ್ರೆ ಒಮ್ಮೆ ಎಂಥ ಕಟುಕನಿಗೂ ಮನಸ್ಸು ಘಾಸಿಕೊಳ್ಳುತ್ತದೆ.

ಸಿಆರ್‌ಪಿಎಪ್ ಯೋಧನ ಬಂಧಿಸಿದ ಸದರಿ ಸದಲಗಾ ಪೊಲೀಸರು ಆತನ ಹಿಂಭಾಗದ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಯುವ ಯೋಧ ಸಚಿನ್​ಗೆ ಸದಲಗಾ ಪೊಲೀಸರು ಹಿಗ್ಗಾಮಗ್ಗಾ ಥಳಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಏ.23 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆಯಾಗಿತ್ತು. ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಯೋಧ ಸಚಿನ್ ಗೆ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಯೋಧ ಸಚಿನ್, ನಿನ್ನೆಯಷ್ಟೇ ಜಾಮೀನು ಮೇಲೆ ಹೊರ ಬಂದಿದ್ದು ಇಲ್ಲಿನ CRPF ಘಟಕಕ್ಕೆ ಮರಳಿದ್ದಾರೆ.

ಈ ಮಧ್ಯೆ, ಸಿಆರ್‌ಪಿಎಫ್ ಅಧಿಕಾರಿಗಳು ಯೋಧ ಸಚಿನ್ ಸಾವಂತ್​ನನ್ನು ವೈದ್ಯಕೀಯ ತಪಾಸಣೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಸಚಿನ್ ಗಾಯಗಳಿಗೆ ಇದೇ ವೇಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

Published On - 3:09 pm, Wed, 29 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us