AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ಯಾಡೀಸ್ ಆರ್ಮಿಯ ಯೋಧರಿಗೆ ವಿಆರ್​ಎಸ್ ಪಡೆದುಕೊಳ್ಳುವ ಸಮಯ ಸಮೀಪಿಸಿದೆ

ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಆವೃತ್ತಿಯ ನಂತರ ಚೆನೈ ಸೂಪರ್ ಕಿಂಗ್ಸ್ ಟೀಮಿಗೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ. ಮಹೇಂದ್ರಸಿಂಗ್ ಧೋನಿಯ ಪಡೆಯಲ್ಲಿ ಮೂವತ್ತಕ್ಕಿಂತ ಜಾಸ್ತಿ ವಯಸ್ಸಾಗಿರುವವರು ಮೆಜಾರಿಟಿಯಾಗಿರುವುದರಿಂದಲೇ ಅದನ್ನು 2017ರಿಂದಲೇ ಡ್ಯಾಡೀಸ್ ಆರ್ಮಿ ಎಂದು ಕರೆಯಲಾಗುತಿತ್ತು. ಆದರೆ ಡ್ಯಾಡಿಗಳು ಪ್ರತಿ ಸೀಸನ್​ನಲ್ಲೂ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದುದ್ದರಿಂದ ಆ ಟ್ಯಾಗ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಪ್ರಸಕ್ತ ಸೀಸನ್​ನಲ್ಲಿ ಡ್ಯಾಡಿಗಳು ದಣಿದರೋ, ಸುಸ್ತಾದರೋ ಅಥವಾ ಎರಡು ವರ್ಷಗಳ ಹಿಂದೆ ಅವರಲ್ಲಿದ್ದ ಶಕ್ತಿ ಉಡುಗಿಹೋಗಿದೆಯೋ ಅನ್ನೋದು ಅವರಿಂದಲೇ ಗೊತ್ತಾಗಬೇಕು. […]

ಡ್ಯಾಡೀಸ್ ಆರ್ಮಿಯ ಯೋಧರಿಗೆ ವಿಆರ್​ಎಸ್ ಪಡೆದುಕೊಳ್ಳುವ ಸಮಯ ಸಮೀಪಿಸಿದೆ
ಅರುಣ್​ ಕುಮಾರ್​ ಬೆಳ್ಳಿ
|

Updated on:Oct 24, 2020 | 10:09 PM

Share

ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಆವೃತ್ತಿಯ ನಂತರ ಚೆನೈ ಸೂಪರ್ ಕಿಂಗ್ಸ್ ಟೀಮಿಗೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ. ಮಹೇಂದ್ರಸಿಂಗ್ ಧೋನಿಯ ಪಡೆಯಲ್ಲಿ ಮೂವತ್ತಕ್ಕಿಂತ ಜಾಸ್ತಿ ವಯಸ್ಸಾಗಿರುವವರು ಮೆಜಾರಿಟಿಯಾಗಿರುವುದರಿಂದಲೇ ಅದನ್ನು 2017ರಿಂದಲೇ ಡ್ಯಾಡೀಸ್ ಆರ್ಮಿ ಎಂದು ಕರೆಯಲಾಗುತಿತ್ತು. ಆದರೆ ಡ್ಯಾಡಿಗಳು ಪ್ರತಿ ಸೀಸನ್​ನಲ್ಲೂ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದುದ್ದರಿಂದ ಆ ಟ್ಯಾಗ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ಆದರೆ ಪ್ರಸಕ್ತ ಸೀಸನ್​ನಲ್ಲಿ ಡ್ಯಾಡಿಗಳು ದಣಿದರೋ, ಸುಸ್ತಾದರೋ ಅಥವಾ ಎರಡು ವರ್ಷಗಳ ಹಿಂದೆ ಅವರಲ್ಲಿದ್ದ ಶಕ್ತಿ ಉಡುಗಿಹೋಗಿದೆಯೋ ಅನ್ನೋದು ಅವರಿಂದಲೇ ಗೊತ್ತಾಗಬೇಕು. ಇವರೆಲ್ಲ ನಿಷ್ಪ್ರಯೋಜಕರು ಅಂತ ಅವರ ದಣಿಗಳಿಗೆ ಗೊತ್ತಾಗಿದೆ. ಹಾಗಾಗೇ, ಅವರನ್ನು ಟೀಮಿನಿಂದ ಹೊರಹಾಕಿ ಯುವಕರನ್ನು ಸೇರಿಸಿಕೊಳ್ಳುವ ಯೋಚನೆ ನಡೆಯುತ್ತಿದೆ.

ಅಂದಹಾಗೆ, ಯಾರ ತಲೆದಂಡ ಆಗಲಿದೆ ಅನ್ನುವುದರ ಬಗ್ಗೆ ನೋಡುವುದಾದದರೆ, ಮೊದಲ ಸಾಲಿನಲ್ಲೇ ನಾಯಕ ಎಮ್ ಎಸ್ ಧೋನಿ ಕಾಣಿಸುತ್ತಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಅಷ್ಟು ಕಠೋರವಾಗಿ ನಡೆಸಿಕೊಳ್ಳಲಾರದು. ಯಾಕೆಂದರೆ, ರಾಂಚಿಯ ರಾಕ್​ಸ್ಟಾರ್, ಸೂಪರ್ ಕಿಂಗ್ಸ್ ನೀಡಿರುವ ಸೇವೆ ಅಸಾಮಾನ್ಯವಾದದ್ದು. ತಮಿಳನಾಡಿನಲ್ಲಿ ವ್ಯಕ್ತಿಪೂಜೆ ಜಾಸ್ತಿ ಕಂಡುಬರುತ್ತದೆ. ಅಲ್ಲಿ ಸಿನಿಮಾ ಹೀರೊಗಳು, ರಾಜಕಾರಣಿಗಳು ದೇವರ ನಂತರದ ಸ್ಥಾನ ಪಡೆದುಕೊಂಡುಬಿಡುತ್ತಾರೆ. ಧೋನಿಗೂ ಅಂಥ ಗೌರವ, ಆದರ ದಕ್ಕಿಬಿಟ್ಟಿದೆ. ಕಳೆದ 12 ಸೀಸನ್​ಗಳಲ್ಲಿ ಪ್ರತಿಬಾರಿ ಚೆನೈ ಪ್ಲೇ ಆಫ್ ಹಂತ ತಲುಪಿದೆ, ಮತ್ತು ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಕೇವಲ ಮುಂಬೈ ಇಂಡಿಯನ್ಸ್ ಮಾತ್ರ ಚೆನೈಗಿಂತ ಹೆಚ್ಚು ಸಲ (4) ಟ್ರೋಫಿ ಗೆದ್ದ್ದಿದೆ. ಇದೇನು ಕಡಿಮೆ ಸಾಧನೆಯೇ?

ಈ ಹಿನ್ನೆಲೆಯಲ್ಲಿ, ಧೋನಿ ಕನಿಷ್ಠ ಇನ್ನೊಂದು ಸೀಸನ್​ಗೆ ಮುಂದುವರಿಯಲಿದ್ದಾರೆ. ಆದರೆ, ಕೇದಾರ್ ಜಾಧವ್, ಇಮ್ರಾನ್ ತಾಹಿರ್, ಶೇನ್ ವಾಟ್ಸನ್, ಪಿಯುಷ್ ಚಾವ್ಲಾ, ಡ್ವೇನ್ ಬ್ರಾವೊ ಮೊದಲಾದವರ ತಲೆದಂಡ ಪಕ್ಕಾ. ಡ್ಯಾಡಿ ಆರ್ಮಿಯ ಮತ್ತಿಬ್ಬರು ಯೋಧರಾಗಿರುವ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಮೂರು ವರ್ಷದ ಕಾಂಟ್ರ್ಯಾಕ್ಟ್ ಇದೇ ಸೀಸನ್​ಗೆ ಮುಗಿದಿದೆ. ಅದನ್ನು ನವೀಕರಿಸುವ ಇರಾದೆ ಟೀಮ್ ಮ್ಯಾನೇಜ್ಮೆಂಟ್ ಖಂಡಿತವಾಗಿಯೂ ಮಾಡದು.

ಐಪಿಎಲ್ 14ನೇ ಸೀಸನ್​ಗೆ ಬಹಳ ದಿನಗಳೇನೂ ಉಳಿದಿಲ್ಲ. ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆ ನಡೆದರೆ ಚೆನೈ ಟೀಮಿನ ಸೀನಿಯರ್ ಸಿಟಿಜನ್​ಗಳಿಗೆ ವಿಆರ್​ಎಸ್ ತೆಗೆದುಕೊಳ್ಳಿ ಅಂತ ನೊಟೀಸು ಜಾರಿಯಾಗೋದು ನಿಶ್ಚಿತ.

Published On - 8:33 pm, Sat, 24 October 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ