AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ಶಾಖೆಗೆ ದಂಡ: ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ನೋಟ್ ಬ್ಯಾನ್ ಆದ 2016 ರ ಸಂದರ್ಭದಲ್ಲಿ ನಗರದ ವಾಸಿ ಮಹೇಶ ಎಂಬುವವರು ಬಿಎಸ್ಎನ್ಎಲ್, ವಿದ್ಯುತ್, ನೀರು ಸೇರಿದಂತೆ ಇತರೆ ಬಿಲ್ ಪಾವತಿ ಮಾಡಲು ಚೆಕ್​ಗಳನ್ನು ಬರೆದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಟ್ರೆಜರಿ ಶಾಖೆಗೆ ಹಾಕಿದ್ದರು.

SBI ಶಾಖೆಗೆ ದಂಡ: ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
ಎಸ್​ಬಿಐ ಬ್ಯಾಂಕ್
Follow us
sandhya thejappa
| Updated By: ಆಯೇಷಾ ಬಾನು

Updated on: Jan 26, 2021 | 12:44 PM

ವಿಜಯಪುರ: ಬ್ಯಾಂಕ್ ಹಾಕಿದ್ದ ಚೆಕ್​ಗಳನ್ನು ಸ್ವೀಕರಿಸದೇ ಗ್ರಾಹಕನಿಗೆ ವಾಪಸ್ ನೀಡಿ ಸರಿಯಾಗಿ ಸ್ಪಂದಿಸದ ಕಾರಣ ವಿಜಯಪುರ ನಗರ ಎಸ್​ಬಿಐ ಬ್ಯಾಂಕ್​ನ ಶಾಖೆಯೊಂದಕ್ಕೆ ದಂಡ ಹಾಕಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮೂರು ವರ್ಷಗಳ ಕಾಲ ಸತತ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎಸ್​ಬಿಐ ಟ್ರೆಜರಿ ಶಾಖೆಯೇ ದಂಡಕ್ಕೆ ಗುರಿಯಾದ ಶಾಖೆಯಾಗಿದೆ.

ಹಿನ್ನೆಲೆ ನೋಟ್ ಬ್ಯಾನ್ ಆದ 2016 ರ ಸಂದರ್ಭದಲ್ಲಿ ನಗರದ ವಾಸಿ ಮಹೇಶ ಎಂಬುವವರು ಬಿಎಸ್ಎನ್ಎಲ್, ವಿದ್ಯುತ್, ನೀರು ಸೇರಿದಂತೆ ಇತರೆ ಬಿಲ್ ಪಾವತಿ ಮಾಡಲು ಚೆಕ್​ಗಳನ್ನು ಬರೆದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಟ್ರೆಜರಿ ಶಾಖೆಗೆ ಹಾಕಿದ್ದರು. ಮಹೇಶರವರ ಬ್ಯಾಂಕ್ ಖಾತೆಯೂ ಇದೇ ಶಾಖೆಯಲ್ಲಿತ್ತು. ಚೆಕ್ ನೀಡಿದ ಬಳಿಕ ಅದನ್ನು ಸಂಬಂಧಿಸಿದ ಕಚೇರಿಗೆ ನೀಡದೇ ಬ್ಯಾಂಕ್ ಸಿಬ್ಬಂದಿ, ಗ್ರಾಹಕ ಮಹೇಶರವರಿಗೆ ವಾಪಸ್ ಮಾಡಿದ್ದರು. ಮೊದಲೇ ನೋಟ್ ಬ್ಯಾನ್ ಆದ ಸಂದರ್ಭ. ಜನರು ಹಣ ಪಡೆಯಲು ಸರದಿಯಲ್ಲಿ ಬ್ಯಾಂಕ್​ಗಳ ಮುಂದೆ ನಿಲ್ಲುವ ಸ್ಥಿತಿ ಉಂಟಾಗಿತ್ತು. ಈ ವೇಳೆ ತನ್ನ ಚೆಕ್​ಗಳನ್ನು ವಾಪಸ್ ನೀಡಿರುವ ಬಗ್ಗೆ ಮಹೇಶ ಬ್ಯಾಂಕ್​ಗೆ ತೆರಳಿ ವಿಚಾರಿಸಿದ್ದಾಗ ಬ್ಯಾಂಕ್ ಸಿಬ್ಬಂದಿಗಳು ಸರಿಯಾಗಿ ಸ್ಪಂದನೆ ನೀಡದೆ ಅಸಡ್ಡೆಯಿಂದ ಉತ್ತರ ನೀಡಿದ್ದರು.

ವಿವಿಧ ಬಿಲ್ ಪಾವತಿಯಾಗದ ಕಾರಣ ದಂಡ ತೆತ್ತ ಗ್ರಾಹಕ ಚೆಕ್​ಗಳು ವಾಪಸ್ ಬಂದಿದ್ದ ಕಾರಣ ಬಿಲ್ ಪಾವತಿ ಬಾಕಿಯಾಗಿ ಉಳಿದಿತ್ತು. ಬಿಲ್ ಸಕಾಲದಲ್ಲಿ ಪಾವತಿ ಆಗದ ಕಾರಣ ಮಹೇಶ ದಂಡ ಕಟ್ಟಬೇಕಾದ ಅನಿವಾರ್ಯತೆ ಉಂಟಾಗಿತ್ತು. ತಾನು ಸರಿಯಾಗಿ ಚೆಕ್ ಹಾಕಿದರೂ ಬ್ಯಾಂಕ್ ಸಿಬ್ಬಂದಿ ಚೆಕ್ ವಾಪಸ್ ನೀಡಿದ್ದು ಹಾಗೂ ಸರಿಯಾಗಿ ಸ್ಪಂದನೆ ಮಾಡದ ಕಾರಣ ದಂಡ ವಿಧಿಸುವಂತಾಯಿತು ಎಂದು ಗ್ರಾಹಕ ಮಹೇಶ ಅಸಮಾಧಾನ ವ್ಯಕ್ತಪಡಿಸಿದ್ದರು. ನನಗಾದಂತೆ  ಬೇರೆ ಯಾವುದೇ ಗ್ರಾಹಕರಿಗೂ ಈ ಸಮಸ್ಯೆ ಆಗಬಾರದು ಎಂದು ಬ್ಯಾಂಕ್ ಹಾಗೂ ಸಿಬ್ಬಂದಿ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಚೆಕ್ ಸ್ವೀಕೃತವಾಗದ ಕಾರಣ ಎಸ್​ಬಿಐ ಬ್ಯಾಂಕ್ ಹಾಗೂ ಸಿಬ್ಬಂದಿಗಳ ತಪ್ಪಿದೆ ಎಂದು ಗ್ರಾಹಕ ಮಹೇಶ 2017ರ ಮೇ 4ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರಕ್ಕೆ ದೂರು ನೀಡಿದರು. 68/2017 ಸಂಖ್ಯೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕಿನ ಖಾತೆದಾರರು ಮತ್ತು ಗ್ರಾಹಕರಾಗಿರುವ ವ್ಯಕ್ತಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಬ್ಯಾಂಕ್ ಹಾಗೂ ಸಿಬ್ಬಂದಿ ವಿಫಲವಾಗಿದೆ. ಅಲ್ಲದೇ, ಕಾರಣವಿಲ್ಲದೆ ಚೆಕ್​ಗಳನ್ನು ಹಿಂದಿರುಗಿಸಿದ್ದು ಸೇವೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ

ದಂಢ ವಿಧಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕಿನ ಖಾತೆದಾರರ ವಾದವನ್ನು ಎತ್ತಿ ಹಿಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕನಿಗೆ 10,000 ಪರಿಹಾರ ನೀಡಬೇಕು. ಜೊತೆಗೆ ಪ್ರಕರಣ ದಾಖಲು ಮಾಡಿದ ದಿನದಿಂದ ಇಂದಿನವರೆಗೆ ವಾರ್ಷಿಕವಾಗಿ ಶೇ.6 ರಷ್ಟು ಬಡ್ಡಿ ಹಣವನ್ನು ಸೇರಿಸಿ ನೀಡಬೇಕು. ಚೆಕ್​ಗಳನ್ನು ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಮಾನಸಿಕ ನೋವಿಗೆ ಪರಿಹಾರವಾಗಿ 5,000 ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣ ಖರ್ಚು ವೆಚ್ಚಕ್ಕೆಂದು 2,000 ಪರಿಹಾರ ನೀಡಬೇಕೆಂದು ಆದೇಶ ಮಾಡಿದೆ.

ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ, ಸದಸ್ಯರಾದ ಜಿ. ಎಸ್.ಕಲ್ಯಾಣಿ ಮತ್ತು ಮಹಿಳಾ ಸದಸ್ಯೆ ವಿ.ಬಿ.ಮುತಾಲಿಕ ದೇಸಾಯಿರವರನ್ನೊಳಗೊಂಡ ಆಯೋಗ ಈ ಆದೇಶ ಹೊರಡಿಸಿದೆ. ಗ್ರಾಹಕ ಮಹೇಶ ಪರವಾಗಿ ನ್ಯಾಯವಾದಿ ಆರ್.ಎಸ್.ಯಾಳಸಂಗಿಮಠ ವಾದ ಮಂಡಿಸಿದ್ದರು.

ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!

ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು