ಪತ್ನಿ -ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಳಿಯ!

ಬಾಗಲಕೋಟೆ:ಅತ್ತೆ ಮನೆಯವರು ಆಸ್ತಿ ಮತ್ತು ವರದಕ್ಷಿಣೆ ನೀಡಿಲ್ಲವೆಂದು ಜಗಳ ತೆಗೆದ ಪತಿ ಮಹಾಶಯ ತನ್ನ ಹೆಂಡತಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.   ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದ ರಂಜಿತಾ(22) ಹಾಗೂ ರೇಣವ್ವ(50) ಮೃತ ದುರ್ದೈವಿಗಳು. ವರ್ಷದ ಹಿಂದೆ ಮೃತ ರಂಜಿತಾಗೆ, ವಿಠ್ಠಲ ಎಂಬ ಯುವಕನೊಂದಿಗೆ ಮದುವೆಯಾಗಿತ್ತು. ಆದರೆ ಆಸ್ತಿ ವಿಚಾರವಾಗಿ ಪದೇಪದೇ ರಂಜಿತಾಳ ಜೊತೆ ವಿಠ್ಠಲ ಜಗಳ ತೆಗೆಯುತ್ತಿದ್ದ, ಇದರಿಂದ ರೋಸಿ ಹೋಗಿದ್ದ ರಂಜಿತ […]

ಪತ್ನಿ -ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಳಿಯ!
ಸಾಧು ಶ್ರೀನಾಥ್​

Updated on: Aug 10, 2020 | 10:48 AM

ಬಾಗಲಕೋಟೆ:ಅತ್ತೆ ಮನೆಯವರು ಆಸ್ತಿ ಮತ್ತು ವರದಕ್ಷಿಣೆ ನೀಡಿಲ್ಲವೆಂದು ಜಗಳ ತೆಗೆದ ಪತಿ ಮಹಾಶಯ ತನ್ನ ಹೆಂಡತಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

 

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದ ರಂಜಿತಾ(22) ಹಾಗೂ ರೇಣವ್ವ(50) ಮೃತ ದುರ್ದೈವಿಗಳು. ವರ್ಷದ ಹಿಂದೆ ಮೃತ ರಂಜಿತಾಗೆ, ವಿಠ್ಠಲ ಎಂಬ ಯುವಕನೊಂದಿಗೆ ಮದುವೆಯಾಗಿತ್ತು. ಆದರೆ ಆಸ್ತಿ ವಿಚಾರವಾಗಿ ಪದೇಪದೇ ರಂಜಿತಾಳ ಜೊತೆ ವಿಠ್ಠಲ ಜಗಳ ತೆಗೆಯುತ್ತಿದ್ದ, ಇದರಿಂದ ರೋಸಿ ಹೋಗಿದ್ದ ರಂಜಿತ ವಾರದ ಹಿಂದೆ ಜಗಳವಾಡಿಕೊಂಡು ತವರಿಗೆ ವಾಪಾಸಾಗಿದ್ದಳು.

ಆದರೆ 2 ದಿನಗಳ ಹಿಂದೆ ತಾಯಿ ಜೊತೆ ಗಂಡನ ಮನೆಗೆ ವಾಪಸಾಗಿದ್ದ ರಂಜಿತಾ ಜೊತೆ, ಪತಿ ವಿಠ್ಠಲ ಪುನಃ ಜಗಳ ತೆಗೆದಿದ್ದಾನೆ. ವಿಕೋಪಕ್ಕೆ ತಿರುಗಿದ ಜಗಳದಲ್ಲಿ ವಿಠ್ಠಲ ಕೊಡಲಿಯಿಂದ ಕೊಚ್ಚಿ, ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಾನೆ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us