AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಎಂ ಕುರ್ಚಿ ಏರಿದ್ಮೇಲೆ BSY ಪೂರ್ಣಾವಧಿ ಅಧಿಕಾರ ಮಾಡಿಲ್ಲ; ಇದಕ್ಕೆ ಕಾರಣ.. ದತ್ತಾತ್ರೇಯನ ಶಾಪ’

ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ. ಮುಖ್ಯಮಂತ್ರಿ ಆದ್ಮೇಲೆ ಮಾಲೆ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿದ್ರು. ಆದ್ರೆ BSY ಸಿಎಂ ಆದ್ಮೇಲೆ ದತ್ತಪೀಠಕ್ಕೆ ಬಂದಿಲ್ಲ. ಹಿಂದೆ ಸಿಎಂ ಆಗಿ ಕುರ್ಚಿ ಏರಿದ ಮೇಲೂ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ದತ್ತಾತ್ರೇಯನ ಶಾಪದಿಂದಲೇ BSYಗೆ ಈ ರೀತಿ ಆಗಿದೆ. ಶಾಪ ವಿಮೋಚನೆ ಆಗಬೇಕು ಅಂದ್ರೆ ದತ್ತಪೀಠಕ್ಕೆ ಬರಬೇಕು ಅಂತಾ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಆಭಿಯಾನಕ್ಕೆ […]

‘ಸಿಎಂ ಕುರ್ಚಿ ಏರಿದ್ಮೇಲೆ BSY ಪೂರ್ಣಾವಧಿ ಅಧಿಕಾರ ಮಾಡಿಲ್ಲ; ಇದಕ್ಕೆ ಕಾರಣ.. ದತ್ತಾತ್ರೇಯನ ಶಾಪ’
ಪೃಥ್ವಿಶಂಕರ
| Updated By: KUSHAL V|

Updated on: Nov 22, 2020 | 6:04 PM

Share

ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ. ಮುಖ್ಯಮಂತ್ರಿ ಆದ್ಮೇಲೆ ಮಾಲೆ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿದ್ರು. ಆದ್ರೆ BSY ಸಿಎಂ ಆದ್ಮೇಲೆ ದತ್ತಪೀಠಕ್ಕೆ ಬಂದಿಲ್ಲ. ಹಿಂದೆ ಸಿಎಂ ಆಗಿ ಕುರ್ಚಿ ಏರಿದ ಮೇಲೂ ಪೂರ್ಣಾವಧಿ ಅಧಿಕಾರ ಮಾಡಿಲ್ಲ. ದತ್ತಾತ್ರೇಯನ ಶಾಪದಿಂದಲೇ BSYಗೆ ಈ ರೀತಿ ಆಗಿದೆ. ಶಾಪ ವಿಮೋಚನೆ ಆಗಬೇಕು ಅಂದ್ರೆ ದತ್ತಪೀಠಕ್ಕೆ ಬರಬೇಕು ಅಂತಾ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಆಭಿಯಾನಕ್ಕೆ ಚಾಲನೆ ಕೊಟ್ಟ ಗಂಗಾಧರ್ ಕುಲಕರ್ಣಿ ಸಿಎಂ ಯಡಿಯೂರಪ್ಪ ಕುರಿತು ಈ ರೀತಿಯ ಅಚ್ಚರಿಯ ಹೇಳಿಕೆ ನೀಡಿದ್ರು. ಯಡಿಯೂರಪ್ಪ ಕೊಟ್ಟ ಮಾತಿನಂತೆ ಮಾಲೆ ಹಾಕಿಕೊಂಡು ಬಂದು ದತ್ತಪೀಠವನ್ನ ಹಿಂದೂಗಳಿಗೆ ವಹಿಸಬೇಕು. ಆಗ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸಲು ಗುರುಗಳ ಆಶೀರ್ವಾದ ಸಿಗುತ್ತೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ನಮ್ಮ ಹೋರಾಟಕ್ಕೆ ಬೆಲೆ ಸಿಗದಿದ್ರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಅಂತಾ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಅನ್ವಯ ಶ್ರೀರಾಮಸೇನೆ, ಸರಳವಾಗಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದೆ. ರಾಜ್ಯಾದ್ಯಂತ ನೂರಾರು ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಇಂದು ವ್ರತಚಾರಣೆ ಕೈಗೊಂಡಿದ್ದು, 5 ದಿನಗಳ ಬಳಿಕ ದತ್ತಮಾಲೆಯನ್ನ ದತ್ತಪೀಠಕ್ಕೆ ತೆರಳಿ ವೃತಚಾರಣೆಯನ್ನ ಕೊನೆಗೊಳಿಸಿದ್ದಾರೆ.