ಮಂಗಳೂರು ಗಲಭೆಗೆ ಯು.ಟಿ.ಖಾದರ್ ಕುಮ್ಮಕ್ಕಿದೆ -ಡಿವಿಎಸ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾಗಿತ್ತು. ತಪ್ಪು ಸಂದೇಶದಿಂದ ಆಸ್ಸಾಂನಲ್ಲಿ ಗಲಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೆ ಮಾಜಿ ಸಚಿವ ಯು.ಟಿ.ಖಾದರ್ ಕುಮ್ಮಕ್ಕು ಕಾರಣ. ತಮ್ಮ ಅಸ್ತಿತ್ವಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಸಣ್ಣಪುಟ್ಟ ಗಲಭೆ ಆದ ತಕ್ಷಣ ಕೇರಳದ ಕೆಲವರು ಮಂಗಳೂರಿಗೆ ಬರುತ್ತಾರೆ. ಇಂತಹ ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್​ ಪಕ್ಷದವರಿಗಿದೆ. ಬೇರೆ ಕಡೆಯಿಂದ ಜನ ಮಂಗಳೂರಿಗೆ ಬಂದಿದ್ದರಿಂದ ಇಂತಹ ದೊಡ್ಡ ಗಲಭೆಯಾಗಿದೆ. ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗಲು ಇದು ಸಕಾಲವಲ್ಲ […]

ಮಂಗಳೂರು ಗಲಭೆಗೆ ಯು.ಟಿ.ಖಾದರ್ ಕುಮ್ಮಕ್ಕಿದೆ -ಡಿವಿಎಸ್
D.V.ಸದಾನಂದ ಗೌಡ
ಸಾಧು ಶ್ರೀನಾಥ್​

Updated on: Dec 20, 2019 | 12:51 PM

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾಗಿತ್ತು. ತಪ್ಪು ಸಂದೇಶದಿಂದ ಆಸ್ಸಾಂನಲ್ಲಿ ಗಲಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೆ ಮಾಜಿ ಸಚಿವ ಯು.ಟಿ.ಖಾದರ್ ಕುಮ್ಮಕ್ಕು ಕಾರಣ. ತಮ್ಮ ಅಸ್ತಿತ್ವಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.

ಸಣ್ಣಪುಟ್ಟ ಗಲಭೆ ಆದ ತಕ್ಷಣ ಕೇರಳದ ಕೆಲವರು ಮಂಗಳೂರಿಗೆ ಬರುತ್ತಾರೆ. ಇಂತಹ ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್​ ಪಕ್ಷದವರಿಗಿದೆ. ಬೇರೆ ಕಡೆಯಿಂದ ಜನ ಮಂಗಳೂರಿಗೆ ಬಂದಿದ್ದರಿಂದ ಇಂತಹ ದೊಡ್ಡ ಗಲಭೆಯಾಗಿದೆ. ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗಲು ಇದು ಸಕಾಲವಲ್ಲ ಎಂದು ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 12:00 pm, Fri, 20 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us