ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನಕ್ಕೆ ಬಂದ ಖದೀಮರು ಬರಿಗೈ ವಾಪಸ್ ಆದ್ರು

ವಿಜಯಪುರ: ಮುತ್ತೂಟ್ ಫೈನಾನ್ಸ್‌ನಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಲು ಹೋಗಿ ಏನೂ ಸಿಗದೇ ವಾಪಸ್ ಆಗಿರುವ ಘಟನೆ ನಗರದ ಬಿಎಲ್‌ಡಿಇ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್‌ ಕಚೇರಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಮುತ್ತೂಟ್ ಫೈನಾನ್ಸ್‌ ಕಚೇರಿಯ ಬಾಗಿಲು ಒಡೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ರು. ಈ ವೇಳೆ ನಗದು ಹಾಗೂ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ. ಕಚೇರಿಯಲ್ಲಿ ಎಷ್ಟೇ ಹುಡುಕಿದರೂ ಏನೂ ಸಿಗದೇ ಬರಿಗೈ ವಾಪಸ್ ಹೋಗಿದ್ದಾರೆ. ಹಿಂದೊಮ್ಮೆ ಇದೇ‌ ಪೈನಾನ್ಸ್​ನಲ್ಲಿ ಕಂಟ್ರೀ ಪಿಸ್ತೂಲ್ ತೋರಿಸಿ […]

ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನಕ್ಕೆ ಬಂದ ಖದೀಮರು ಬರಿಗೈ ವಾಪಸ್ ಆದ್ರು

Updated on: Sep 27, 2020 | 10:53 AM

ವಿಜಯಪುರ: ಮುತ್ತೂಟ್ ಫೈನಾನ್ಸ್‌ನಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಲು ಹೋಗಿ ಏನೂ ಸಿಗದೇ ವಾಪಸ್ ಆಗಿರುವ ಘಟನೆ ನಗರದ ಬಿಎಲ್‌ಡಿಇ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್‌ ಕಚೇರಿಯಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಮುತ್ತೂಟ್ ಫೈನಾನ್ಸ್‌ ಕಚೇರಿಯ ಬಾಗಿಲು ಒಡೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ರು. ಈ ವೇಳೆ ನಗದು ಹಾಗೂ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ. ಕಚೇರಿಯಲ್ಲಿ ಎಷ್ಟೇ ಹುಡುಕಿದರೂ ಏನೂ ಸಿಗದೇ ಬರಿಗೈ ವಾಪಸ್ ಹೋಗಿದ್ದಾರೆ.

ಹಿಂದೊಮ್ಮೆ ಇದೇ‌ ಪೈನಾನ್ಸ್​ನಲ್ಲಿ ಕಂಟ್ರೀ ಪಿಸ್ತೂಲ್ ತೋರಿಸಿ ದರೋಡೆ ಯತ್ನ ನಡೆದಿತ್ತು. ಆಗ ಸಿಬ್ಬಂದಿ ಕರ್ತವ್ಯ ಪ್ರಜ್ಞೆಯಿಂದ ಅಂದೂ ಕೂಡ ದರೋಡೆ ಕೃತ್ಯ ವಿಫಲವಾಗಿತ್ತು. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.