ಸಾಲಬಾಧೆ: ಸಖರಾಯಪಟ್ಟಣದಲ್ಲಿ ರೈತ ನೇಣಿಗೆ ಶರಣು

ಚಿಕ್ಕಮಗಳೂರು: ರಾಜ್ಯದಲ್ಲಿ ಕೃಷಿ ಮಸೂದೆ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಂಗೇನಹಳ್ಳಿಯಲ್ಲಿ ನಡೆದಿದೆ. ಮಲ್ಲೇಶ್(50) ಆತ್ಮಹತ್ಯೆ ಮಾಡಿಕೊಂಡ ರೈತ. ಕೆನರಾ ಬ್ಯಾಂಕ್​ ಮತ್ತು ಕೈಸಾಲ ಸೇರಿದಂತೆ ಸುಮಾರು 11 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಈ ಬಾರಿ ಆಲೂಗೆಡ್ಡೆ ಬೆಳೆ ಹಾಕಿದ್ದ. ಆದರೆ ಆ ಬೆಳೆ ಕೂಡ ರೈತನ ಕೈ ಹಿಡಿಯಲಿಲ್ಲ. ಆಲೂಗಡ್ಡೆ ಬೆಳೆ ಕೈಹಿಡಿಯದ ಹಿನ್ನೆಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. […]

ಸಾಲಬಾಧೆ: ಸಖರಾಯಪಟ್ಟಣದಲ್ಲಿ ರೈತ ನೇಣಿಗೆ ಶರಣು
Edited By:

Updated on: Sep 28, 2020 | 9:22 AM

ಚಿಕ್ಕಮಗಳೂರು: ರಾಜ್ಯದಲ್ಲಿ ಕೃಷಿ ಮಸೂದೆ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಂಗೇನಹಳ್ಳಿಯಲ್ಲಿ ನಡೆದಿದೆ.

ಮಲ್ಲೇಶ್(50) ಆತ್ಮಹತ್ಯೆ ಮಾಡಿಕೊಂಡ ರೈತ. ಕೆನರಾ ಬ್ಯಾಂಕ್​ ಮತ್ತು ಕೈಸಾಲ ಸೇರಿದಂತೆ ಸುಮಾರು 11 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಈ ಬಾರಿ ಆಲೂಗೆಡ್ಡೆ ಬೆಳೆ ಹಾಕಿದ್ದ. ಆದರೆ ಆ ಬೆಳೆ ಕೂಡ ರೈತನ ಕೈ ಹಿಡಿಯಲಿಲ್ಲ. ಆಲೂಗಡ್ಡೆ ಬೆಳೆ ಕೈಹಿಡಿಯದ ಹಿನ್ನೆಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.