ಗಂಡ ಹೆಂಡತಿ ಜಗಳಕ್ಕೆ ಬಲಿಯಾಯ್ತು ಕಂದಮ್ಮ: ತಂದೆಯಿಂದಲೇ ಮಗನ ಹತ್ಯೆ

ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ಸು ಬರದೇ ಇರುವುದಕ್ಕೆ ಪತ್ನಿ ಜೊತೆಗೆ ಜಗಳವಾಡಿದ ಯಲ್ಲಪ್ಪ ಕೋಪದಲ್ಲಿ ಮಗ ಮಹೇಶ್ (04) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಗಂಡ ಹೆಂಡತಿ ಜಗಳಕ್ಕೆ ಬಲಿಯಾಯ್ತು ಕಂದಮ್ಮ: ತಂದೆಯಿಂದಲೇ ಮಗನ ಹತ್ಯೆ
ಮೃತ ಬಾಲಕ ಮಹೇಶ್
Updated By: ಸಾಧು ಶ್ರೀನಾಥ್​

Updated on: Feb 03, 2021 | 10:51 AM

ರಾಯಚೂರು: ತಂದೆಯೇ ಮಗನನ್ನು ಕತ್ತು ಹಿಸುಕಿ ಕೊಂದ ದುರ್ಘಟನೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಎಲೆಕೂಡ್ಲಗಿ ಗ್ರಾಮದ ಬಳಿ ನಡೆದಿದೆ.

ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ಸು ಬರದೇ ಇರುವುದಕ್ಕೆ ಪತ್ನಿ ಜೊತೆಗೆ ಜಗಳವಾಡಿದ ಯಲ್ಲಪ್ಪ ಕೋಪದಲ್ಲಿ ತನ್ನ ಮಗ ಮಹೇಶ್ (04)ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತ ಬಾಲಕನ ತಾಯಿ ಮಹೇಶಮ್ಮ ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಸಿಂಧನೂರ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದ್ದಾರೆ.

ತಂದೆಯನ್ನೇ ಕೊಂದ ಪಾಪಿ ಮಗ