ಮಹಿಳೆ ಮೇಲೆ ದೌರ್ಜನ್ಯ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ದ FIR

ಮಹಿಳೆ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಾಗಿದೆ.

ಮಹಿಳೆ ಮೇಲೆ ದೌರ್ಜನ್ಯ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ದ FIR
ಮಾಜಿ ಕಾರ್ಪೊರೇಟರ್ ಧನರಾಜ್
Edited By:

Updated on: Dec 22, 2020 | 10:21 AM

ಬೆಂಗಳೂರು: ಮಹಿಳೆ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಾಗಿದೆ. ಈ ಹಿಂದೆ ಚಿಕ್ಕಪೇಟೆ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್​ನ ಕಾರ್ಪೊರೇಟರ್ ಅಗಿದ್ದ ಧನರಾಜ್, ಲಾಲ್‌ ಬಾಗ್ ರಸ್ತೆಯಲ್ಲಿನ ಕಲ್ಕತ್ ಟ್ಯೂಬ್ ಶಾಪ್​ಗೆ ನುಗ್ಗಿ ದಾಂದಲೆ ಮಾಡಿದ್ದರು ಎಂಬ ಆರೋಪವಿದೆ.

ಅಂಗಡಿಗೆ ಬಂದ ಧನರಾಜ್ ಪೈಪ್ ಕೊಟೇಷನ್ ಕೇಳಿ ಕಡಿಮೆ ಬೆಲೆ‌ಗೆ ನೀಡಿ ಎಂದು ಕಿರಿಕ್ ಮಾಡಿದ್ದರು. ತನಗೆ ಬೇಕಾದ ಬ್ರಾಂಡ್ ಮೆಟೀರಿಯಲ್ಸ್ ಕಡಿಮೆ ಬೆಲೆಗೆ ನೀಡುವಂತೆ ಅಂಗಡಿ‌ ಮಾಲೀಕ ಸಾವರ್ ಮಲ್ ಅಗರ್ವಾಲ್ ಮೇಲೆ ಧಮ್ಕಿ ಹಾಕಿದ್ದರು.

ಈ ವೇಳೆ ಪ್ರಶ್ನೆ ಮಾಡಿದ ಸೊಸೆ ಪೂಜಾ ಅಗರ್ವಾಲ್ ಮೇಲೆ ಧನರಾಜ್ ದೌರ್ಜನ್ಯ ಮಾಡಿದ್ದರು. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಮಾಮೂಲಿ ಕೊಟ್ಟಿಲ್ಲಾ ಅಂತಾ ಕಾನ್ಸ್‌ಟೇಬಲ್ ಮೇಲೆ ACP ಹಲ್ಲೆ?

Published On - 10:21 am, Tue, 22 December 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
Follow Us