AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷ ಸೆಲೆಬ್ರೇಷನ್‌ಗೆ ಕಡಲನಗರಿ ರೆಸಾರ್ಟ್‌ಗಳಿಗೆ ಫುಲ್ ಡಿಮ್ಯಾಂಡ್, 10 ದಿನ ಮುಂಚೆನೇ ಆನ್​ಲೈನ್‌ ಬುಕಿಂಗ್ ಕ್ಲೋಸ್

ಹೊಸ ವರ್ಷ ಇನ್ನೇನು ಬಂದೇ ಬಿಡ್ತು ಅನ್ನೋ ಹೊತ್ತಿಗೆ ಉತ್ತರಕನ್ನಡ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳು ಫುಲ್ ಆಗೋದು ಕಾಮನ್. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಇನ್ನೂ ಹತ್ತು ದಿನ ಬಾಕಿ ಇರೋವಾಗ್ಲೇ ತುಂಬಿ ತುಳುಕುತ್ತಿರೋದು ಮಾತ್ರವಲ್ಲದೇ ಬುಕಿಂಗ್ ಕೂಡ ಕ್ಲೋಸ್ ಆಗಿದೆ.

ಹೊಸವರ್ಷ ಸೆಲೆಬ್ರೇಷನ್‌ಗೆ ಕಡಲನಗರಿ ರೆಸಾರ್ಟ್‌ಗಳಿಗೆ ಫುಲ್ ಡಿಮ್ಯಾಂಡ್, 10 ದಿನ ಮುಂಚೆನೇ ಆನ್​ಲೈನ್‌ ಬುಕಿಂಗ್ ಕ್ಲೋಸ್
ಹತ್ತು ದಿನ ಬಾಕಿ ಇರೋವಾಗ್ಲೇ ಉತ್ತರಕನ್ನಡ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳು ಫುಲ್
ಆಯೇಷಾ ಬಾನು
|

Updated on: Dec 22, 2020 | 9:20 AM

Share

ಕಾರವಾರ: ಕಡಲ ನಗರಿ ಉತ್ತರಕನ್ನಡ.. ಪ್ರವಾಸಿಗರ ಹಾಟ್ ಫೇವರಿಟ್​.. ಮಳೆಗಾಲವಿರಲಿ, ಚಳಿಗಾಲವೇ ಬರಲಿ, ಬಿರು ಬಿಸಿಲೇ ಇರಲಿ, ಇಲ್ಲಿಗೆ ಮುಗಿಬೀಳೋ ಪ್ರವಾಸಿಗರಿಗೇನೂ ಕಮ್ಮಿ ಇಲ್ಲ. ಆದ್ರೆ ಈ ಬಾರಿ ಕೊರೊನಾದಿಂದ ಬಹಳ ಲಾಸ್ ಅನುಭವಿಸಿದ್ದ ರೆಸಾರ್ಟ್, ಹೋಮ್ ಸ್ಟೇ ಮಾಲೀಕರಿಗೆ ಈಗ ಸುಗ್ಗಿ ಶುರುವಾಗಿದೆ.

ಅದರಲ್ಲೂ ಹೊಸ ವರ್ಷ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗದ ಬಹುತೇಕ ರೆಸಾರ್ಟ್​ಗಳು ತುಂಬಿ ತುಳುಕುತ್ತಿವೆ. ಈಗಾಗಲೇ ಜಿಲ್ಲೆಯ ಎಲ್ಲಾ ಹೋಮ್ ಸ್ಟೇ, ರೆಸಾರ್ಟ್​​ಗಳು ಫುಲ್ ಆಗಿದ್ದು , ಆನ್​ಲೈನ್‌ ಬುಕಿಂಗ್ ಕೂಡ ಕ್ಲೋಸ್ ಆಗಿದೆ.

ಕೊರೊನಾಗೆ ತತ್ತರಿಸಿದ್ದ ಮಾಲೀಕರಲ್ಲಿ ಉತ್ಸಾಹ ಪ್ರತಿ ಬಾರಿ ವರ್ಷಾಂತ್ಯಕ್ಕೂ ಮುನ್ನ ಇಲ್ಲಿನ ಕಾಡಿನಲ್ಲಿರುವ ಮತ್ತು ಸಮುದ್ರತೀರದ ರೆಸಾರ್ಟ್‌ಗಳು ತುಂಬಿ ತುಳುಕುವುದು ಸಹಜ. ಆದ್ರೆ ಈ ಬಾರಿ 10 ದಿನಕ್ಕೂ ಮುನ್ನವೇ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಜನ ಭರ್ತಿಯಾಗಿದ್ದನ್ನ ನೋಡಿದ್ರೆ ಜನ ಕೊರೊನಾ ನಡುವೆ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ರೆಡಿಯಾದಂತೆ ಕಾಣಿಸ್ತಿದೆ. ಇದರಿಂದ ಕೊರೊನಾದಿಂದ ವರ್ಷವಿಡೀ ಖಾಲಿ ಇದ್ದ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿಗೆ ಹೊಸ ರಂಗು ಬಂದಿದೆ. ಇನ್ನು ಜಿಲ್ಲೆಗೆ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೂಡ ಕ್ರಮ ತೆಗೆದುಕೊಂಡಿದೆ.

ಒಟ್ನಲ್ಲಿ ಕೊರೊನಾದಿಂದ ಕಂಗೆಟ್ಟ ಜನ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಉತ್ತರಕನ್ನಡದತ್ತ ಹೆಜ್ಜೆ ಹಾಕುತ್ತಿದ್ದು, ರೆಸಾರ್ಟ್‌, ಹೋಂ ಸ್ಟೇಗಳು ತುಂಬಿ ತುಳುಕುತ್ತಿವೆ. ಜಿಲ್ಲೆಗೆ ಬರುವ ಪ್ರವಾಸಿಗರು ಸೆಲೆಬ್ರೇಷನ್ ನಡುವೆ ಕೊರೊನಾ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಏಕೈಕ ಡಾಲ್ಫಿನ್ ಸೆಂಟರ್​ ಕಾರವಾರದಲ್ಲಿ!

Follow Us
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ